ಹೊನ್ನಾವರ –
ನವೆಂಬರ್ 15-16 ರಂದು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ 2019ರಲ್ಲಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಮಾಳ್ಕೋಡ ಶಾಲೆಯ ಶಿಕ್ಷಕರಾದ ಭಾಸ್ಕರ ವಿ. ನಾಯ್ಕ ಇವರು 400 ಮೀ, 800ಮೀ ಹಾಗೂ 1500ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಸಂಪಾದಿಸಿ ನಮ್ಮ ತಾಲೂಕಿಗೆ ಮತ್ತು ಶಿಕ್ಷಣ ಇಲಾಖೆಗೆ ಗೌರವವನ್ನು ತಂದಿದ್ದಾರೆ. ಇವರ ಈ ಸಾಧನೆಗೆ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಭಜಂತ್ರಿ ಹಾಗೂ ತಾಲೂಕಾ ಯುವಜನ ಸೇವಾ ಕ್ರೀಡಾಧಿಕಾರಿಯಾದ ಸುಧೀಶ ನಾಯ್ಕ ರವರು ಅಭಿನಂದಿಸಿದ್ದಾರೆ.
Leave a Comment