
ಹೊನ್ನಾವರ; ಮಾರುತಿ ಕಾರು ಕಂಪನಿಯ ಮುರ್ಡೇಶ್ವರ ಆರ್.ಎನ್.ಎಸ್. ಮೋಟರ್ಸ್ ಶಾಖೆಯ ವತಿಯಿಂದ ಗ್ರಾಮೀಣ ಉತ್ಸವ ಇಂದು ಪ್ರತಿಭೋದಯದ ಬಳಿ ಹಮ್ಮಿಕೊಳ್ಳಲಾಗಿತ್ತು.
ಸಿಪಿಐ ವಸಂತ ಆಚಾರಿ ದೀಪ ಬೆಳಗಿಸಿ ನೂತನ ಕಾರು ಎಕ್ಸ್ಪ್ರೆಸ್ಓ ಅನಾವರಣಗೊಳಿಸಿದರು. ನಂತರ ಮಾತನಾಡಿ ಕಾರಿನ ಸ್ಪರ್ಧಾಯುಗದಲ್ಲಿ ಮಾರುತಿ ಸದಾ ಮುಂದಿದ್ದು ಆರ್.ಎನ್.ಎಸ್. ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಜನಪ್ರೀಯವಾಗಿದೆ. ಕಾರು ತೆಗೆದುಕೊಂಡವರು ಚಲಾಯಿಸುವಾಗ ಕಾನೂನಿನಂತೆ ಸಂಚಾರಿ ನಿಯಮವನ್ನು ಪಾಲಿಸಿ ವಾಹನವನ್ನು ಓಡಿಸಿದರೆ ಅವರಿಗೆ ಅದು ನಿಜವಾಗಿ ಸಂತೋಷ ಕೊಡುತ್ತದೆ. ನಿಯಮ ಉಲ್ಲಂಘಿಸಿ ವಾಹನ ಓಡಿಸುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳಿದರು. ಎಸ್.ಐ. ಶಶಿಕುಮಾರ, ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಉಪಸ್ಥಿತರಿದ್ದರು. ಗಣಪತಿ ಭಟ್ ಮತ್ತು ಕಂಪನಿಯ ಸಹಕಾರಿಗಳು ಕಾರ್ಯಕ್ರಮ ನೇರವೇರಿಸಿದರು.
Leave a Comment