
ಹಳಿಯಾಳ: ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಅಯ್ಯಪ್ಪ ಸ್ವಾಮಿಯ ವೃತಾಚರಣೆ ಮುಗಿಸಿ ಮಹಾಪೂಜೆಯನ್ನು ಶ್ರೀ ಬಸವಣ್ಣ ದೇವಾಲಯದ ಆವರಣದಲ್ಲಿ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಸಲಾಯಿತು.
ಗುರುಸ್ವಾಮಿ ರಮೇಶ ಅವರ ಸಾನಿಧ್ಯದಲ್ಲಿ ನಡೆದ ಮಹಾಪೂಜೆಯು ಗ್ರಾಮದಲ್ಲಿ ಆನೆ ಮೇಲೆ ಅಂಬಾರಿ, ಕುದುರೆ ಸವಾರಿ, ಒಂಟೆ ಸವಾರಿ, ಬಸವಣ್ಣ ಸವಾರಿ ಮತ್ತು ಮಹಾರಥ ಸವಾರಿ ಹಾಗೂ ಗ್ರಾಮಸ್ಥರಿಂದ ಕುಂಬ ಮೇಳ, ಪಲ್ಲಕಿ ಉತ್ಸವ, ಶರಣಘೋಷದ ಜೊತೆಗೆ ಸಪ್ತವಾದ್ಯಗಳಾದ ಡೊಳ್ಳು, ಕನ್ನಡ ಭಜನೆ ಮತ್ತು ಮಕ್ಕಳ ಕೋಲಾಟದೊಂದಿಗೆ ಅಯ್ಯಪ್ಪ ಸ್ವಾಮಿಯ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಉತ್ಸವದಲ್ಲಿ ನೂರಕ್ಕು ಹೆಚ್ಚು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಅಯ್ಯಪ್ಪ ಸ್ವಾಮಿಯ ಮೆರವಣಿಗೆಗೆ ಸಾಕ್ಷಿಯಾದರು.

Leave a Comment