ಹೊನ್ನಾವರ ತಾಲೂಕಿನ ಮಾಡಗೇರಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟುವ ಮೂಲಕ ಇಸ್ಪೀಟ್ ಹಾಗೂ ಅಂದರ್ ಬಾಹರ್ ಜೂಜಾಟ ಆಡುತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ8 ಜನ ಆರೋಪಿಗಳ ಬಸಿ ಪ್ರಕರಣ ದಾಖಲಿಸಿದ್ದಾರೆ.
ಪಿ.ಎಸ್. ಐ ಶಶಿಕುಮಾರ ಸಿ. ಆರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿತರು ನೀರವತ್ತಿಕೊಡ್ಲಾ, ಗೌಡರಕೇರಿ ನಿವಾಸಿ ಮಂಜುನಾಥ ನಾರಾಯಣ ಗೌಡ, ಚಿಪ್ಪೆಹಕ್ಕಲ ನಿವಾಸಿ ದುರ್ಗಯ್ಯ ಬಿರಪ್ಪ ಪಟಗಾರ, ಹೆಬ್ಬಾನಕೇರಿ, ಕಡ್ಲೆ ನಿವಾಸಿ ರಾಜಾರಾಮ ಗಜಾನನ ಹೆಗಡೆ, ಕುಮಟಾ ಊರಕೇರಿಯ ಮಂಜುನಾಥ ಶ್ರೀಧರ ಪಟಗಾರ, ನವಿಲಗೋಣ, ಕಲ್ಲಟ್ಟಿಕೇರಿಯ ಗಣೇಶ ಮಾದೇವ ಪಟಗಾರ, ಭಟ್ಕಳದ ಶಿರಾಲಿ, ಬೆಂಗರೆ ನಿವಾಸಿ ಮಂಜುನಾಥ ನಾಗಪ್ಪ ನಾಯ್ಕ,ಕವಲಕ್ಕಿ ಪ್ಲಾಟಕೇರಿಯ ಮಂಜುನಾಥ ರಾಮಾ ಮುಕ್ರಿ, ಹಳಗೇರಿ, ಸೂರಕಟ್ಟೆಯ ಗಿರೀಶ ನಾಗಪ್ಪ ಅಂಬಿಗ ಪ್ರಕರಣದ ಆರೊಪಿತರಾಗಿದ್ದಾರೆ.
ದಾಳಿಯ ವೇಳೆ ನೆಲಕ್ಕೆ ಹಾಸಿದ ಹಳದಿ ಬಣ್ಣದ ಪ್ಲಾಸ್ಟಿಕ್ ಮಂಡಾ-01, ವಿವಿಧ ಮುಖ ಬೆಲೆಯ ನಗದು ಹಣ ಒಟ್ಟು 23,850 ರೂಪಾಯಿ, ಇಸ್ಪೀಟ್ ಎಲೆಗಳು, ಒಂದು ಬ್ಯಾಟರಿ ಮತ್ತು ಬಲ್ಬ್ ವಶಪಡಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment