ಕುಮಟಾ ತಾಲ್ಲೂಕಿನ ಅಳ್ವೆಕೋಡಿಯ ಅಕ್ಷಯ ಶಿಕ್ಷಣ ಸಂಸ್ಥೆ (ರಿ ) ನಿರ್ಮಲಾ ಕಾಮತ್ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲಿದ ಗಣ್ಯರು ದೀಪ ಬೆಳ ಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶಿರಸಿ ಮಾರಿಕಾಂಬಾ ದೇವಸ್ಥಾನ ಧರ್ಮದರ್ಶಿಗಳಾದ ಡಾ ವೆಂಕಟೇಶ ನಾಯ್ಕ ಕಾರ್ಯಕ್ರಮ ಉದ್ದೇಶಿಸಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಉತ್ತುಂಗದ ಕನಸ್ಸು ಕಾಣುವಂತೆ ಪ್ರೇರೆಪಿಸಬೇಕು ಎಂದರು. ಖ್ಯಾತ ಉದ್ಯಮಿದಾರರು ಹಾಗೂ ಚಲನಚಿತ್ರ ನಿರ್ಮಾಪಕರಾದ ಸುಬ್ರಾಯ ವಾಳ್ಕೆ ಹಸ್ತ ಪ್ರತಿ ಅನಾವರಣ ಮಾಡಿದ ನಂತರ ವೇದಿಕೆಯಲ್ಲಿ ಮಾತನಾಡಿ ಬಡತನ ಶಾಪವಲ್ಲ. ಒಂದು ಅವಕಾಶ. ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳ ಏಳಿಗೆಗೆ ಶಿಕ್ಷಕರ ಪಾತ್ರ ತುಂಬಾ ಮುಖ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷರು ಶ್ರೀ ಎಚ್ ಏನ್ ನಾಯ್ಕ್ ಅಧ್ಯಕ್ಷರು, ಅಕ್ಷಯ ಶಿಕ್ಷಣ ಸಂಸ್ಥೆ (ರಿ ) ಅಳ್ವೆಕೋಡಿ. ಮುಖ್ಯ ಅತಿಥಿಗಳಾಗಿ ವಿರೂಪಾಕ್ಷ ಏನ್ ನಾಯ್ಕ್ ಅಧ್ಯಕ್ಷರು ಗ್ರಾ ಪಂ ಕಲಬಾಗ, ರೇಖಾ ಸಿ ನಾಯ್ಕ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಎಂ ಬಿ ನಾಯ್ಕ್ ಉಪನ್ಯಾಸಕರು ಎ. ವಿ. ಬಾಳಿಗಾ ಕಾಲೇಜು ಕುಮಟಾ. ವೇದಿಕೆಯಲ್ಲಿ ಉಪಸ್ಥಿತರಿದ್ದರು




Leave a Comment