
ಪಂಚಗ್ರಾಮಗಳ ಆರಾಧ್ಯ ದೈವವಿರುವ ಹೊನ್ನಾವರ ತಾಲೂಕಿನ ಹೊಸಾಕುಳಿ ಲಕ್ಷ್ಮೀನಾರಾಯಣ, ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಜನವರಿ 15ರಿಂದ 21ರವರೆಗೆ 7ದಿನಗಳ ಕಾಲ ಅಖಂಡ ಭಜನಾ ಕಾರ್ಯ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಶ್ರೀಸೂಕ್ತಹವನ, ಧನ್ವಂತರೀಹವನ, ರಾಮತಾರಕಹವನ, ಲಕ್ಷ್ಮೀನಾರಾಯಣಮೂಲಮಂತ್ರ, ಗಾಯತ್ರಿಹವನ, ಮತ್ತು 108ಕಾಯಿಗಳ ಗಣಹವನಗಳು ಮತ್ತು ಸತ್ಯನಾರಾಯಣ ವೃತ, ದುರ್ಗಾಶಾಂತಿ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ದೀಪೋತ್ಸವ, ದಂಡಾವಳಿ ಪೂಜೆ, ಏಕಾದಶ ರುದ್ರ, ಸಪ್ತಶತಿ, ಪಾರಾಯಣಗಳಿವೆ. ಅಹೋರಾತ್ರಿ 7ದಿನ ಕಾಲ 40ಕ್ಕೂ ಹೆಚ್ಚು ಭಜನಾ ಮಂಡಳಿಗಳು ಸತತವಾಗಿ ಭಜನಾ ಸೇವೆ ಸಲ್ಲಿಸಲಿವೆ. ವಿದ್ವಾನ್ ಶಂಕರ ಭಟ್ ಗಾಣಗೆರೆ ಇವರ ಆಚಾರ್ಯತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ದೇವಾಲಯಗಳ ಅಧ್ಯಕ್ಷರಾದ ವೆಂಕಟ ಸುಬ್ಬ ಭಟ್ ಮತ್ತು ಸೇವಾ ಮಂಡಳದ ವತಿಯಿಂದ ಭಜನಾ ಸಪ್ತಾಹ ಸಮಿತಿ ಸಿದ್ಧತೆ ನಡೆಸಿದೆ. ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಲಿದ್ದು ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ. ಸಪತ್ನಿಕನಾಗಿ ಈಶ್ವರ ಮತ್ತು ನಾರಾಯಣ ನೆಲೆಸಿರುವ ಈ ಕ್ಷೇತ್ರ ಕೌಟುಂಬಿಕ ಸಮಸ್ಯೆ ನಿವಾರಕ ಎಂದು ಪ್ರತೀತಿ ಇರುವ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಬೇಕೆಂದು ಕೋರಲಾಗಿದೆ. ಭಕ್ತರು ಹೊರೆಕಾಣಿಕೆ ರೂಪದಲ್ಲಿ ಹಣ್ಣು-ಕಾಯಿ, ಅಕ್ಕಿ, ಬೆಲ್ಲ, ತುಪ್ಪ ಇತ್ಯಾದಿಗಳನ್ನು ನೀಡಲು ಅವಕಾಶವಿದೆ. ಹಣದ ರೂಪದಲ್ಲಿ ಸೆವೆ ಸಲ್ಲಿಸುವರು ಕೆನರಾ ಬ್ಯಾಂಕ್ ಹೊನ್ನಾವರ ಖಾತೆ ಸಂಖ್ಯೆ1067101030882 ಹೊನ್ನಾವರ ಬ್ರಾಂಚ್, ಐಎಫ್ಎಸ್ಸಿ ಅಓಖಃ0001067 ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಜಿ.ಎಸ್. ಹೆಗಡೆ ಆಶಾಟೈಲ್ಸ ಮಾಲಿಕರು 7899042444, 9448223156 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.


Leave a Comment