
ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ
ರಾಜ್ಯದ ಕಂದಾಯ ಸಚೀವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಜನವರಿ 22ರಂದು ಕುಮುಟಾಕ್ಕೆ ಸಚೀವ ಆರ್.ಅಶೋಕ ಆಗಮಿಸಲಿದ್ದಾರೆ ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹೇಳಿದರು. ಪ್ರತಿ ಶನಿವಾರದಂತೆ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಪಟ್ಟಣಪಂಚಾಯತಿ ಸದಸ್ಯರೊಂದಿಗೆ ಪಕ್ಷದ ಬಲವರ್ಧನೆ ಬಗ್ಗೆ ಚರ್ಚೆ ನಡೆಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಕುಮುಟಾದ ಮಿನಿವಿಧಾನಸೌಧದ ಶಂಕುಸ್ಥಾಪನೆ ನೇರೆವೇರಿಸಿಲು ಸಚೀವರು ಆಗಮಿಸಲಿದ್ದು ಹೊನ್ನಾವರ ಮಿನಿವಿಧಾನಸೌಧಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಬಗ್ಗೆ ಮತ್ತೊಮ್ಮೆ ಮನವಿ ಮಾಡಲಿದ್ದಾನೆ. ಪಕ್ಷದ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಸಚೀವರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಆಹ್ವಾನ ನೀಡುತ್ತಿದ್ದೇನೆ ಪ್ರತಿವಾರದಂತೆ ಈ ದಿನವು ತಹಶೀಲ್ದಾರ ಕಛೇರಿಯಲ್ಲಿ ತಾಲೂಕಿನ ವಿವಿಧ ಸಮಸ್ಯೆ ಬಗ್ಗೆ ಸಾರ್ವಜನಿಕರು ಅಹವಾಲು ನೀಡಿದ್ದು ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆತಿದೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಅಧಿüüಕಾರಿಗಳಿಗೆ ಸೂಚಿಸಿದ್ದೇನೆ. ಇದರಿಂದ ಸಮಸ್ಯೆ ಹೇಳಿಕೊಂಡು ಕುಮುಟಾಕ್ಕೆ ಬರುವ ಅಗತ್ಯವಿಲ್ಲ. ಪ್ರತಿವಾರವು ಹೊನ್ನಾವರ ಹಾಗೂ ಕುಮುಟಾದಲ್ಲಿ ಪ್ರತ್ಯೆಕವಾಗಿ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ನಾಗರಾಜ ಭಟ್, ಶಿವರಾಜ ಮೇಸ್ತ, ವಿಜು ಕಾಮತ್ ,ಸುಜಾತ ಮೇಸ್ತ, ಮೇಧಾ ನಾಯ್ಕ, ಭಾರತಿ ಭಂಡಾರಿ, ಜೂಲಿಯಸ್ ಫನಾರ್ಂಡಿಸ್, ವಿನೋದ ಮೇಸ್ತ, ಬಿಜೆಪಿ ಮುಖಂಡರಾದ ರಾಜು ಭಂಡಾರಿ, ಎಂ.ಜಿನಾಯ್ಕ, ಉಮೇಶ ನಾಯ್ಕ, ಶ್ರೀಕಾಂತ ಮೋಗೇರ, ಟಿ.ಎಸ್.ಹೆಗಡೆ, ಎಂ.ಎಸ್. ಹೆಗಡೆ ಕಣ್ಣಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Comment