
ಹೊನ್ನಾವರ: ಭಾರತ ಸರ್ಕಾರದ ನೆಹರು ಯುವ ಕೇಂದ್ರ ನೀಡುವ ಜಿಲ್ಲಾ ಅತ್ಯುತ್ತಮ ಯುವಕ ಸಂಘ ಪ್ರಶಸ್ತಿಯನ್ನು ತಾಲೂಕಿನ ಮೂಡ್ಕಣಿಯ ಶ್ರೀಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ ತನ್ನದಾಗಿಸಿಕೊಂಡಿದೆ. ಈ ಮೂಲಕ ಸಾರ್ವನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳೆದ 8 ವರ್ಷಗಳಿಂದ ಸಂಘ ನಿರಂತರವಾಗಿ ಸಾಮಾಜಿಕ, ಸಾಂಸ್ಕøತಿಕ, ಕ್ರೀಡೆ, ಸ್ವಚ್ಛತಾ ಅಭಿಯಾನ, ರಾಷ್ಟ್ರೀಯ ಹಬ್ಬಗಳ ಆಚರಣೆ, ಸ್ವ ಉದ್ಯೋಗ ಕೈಗೊಳ್ಳಲು ಉಚಿತ ಹೊಲಿಗೆ ತರಬೇತಿ ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಸಂಘಟಿಸುತ್ತಾ ಸದಾ ಕ್ರಿಯಾಶೀಲತೆ ಹೊಂದಿರುವುದಕ್ಕಾಗಿ ಈ ಪ್ರಶಸ್ತಿಯ ಗರಿ ಮುಡಿಗೇರುವಂತೆ ಮಾಡಿದೆ.

25 ಸಾವಿರ ರೂ. ಪುರಸ್ಕಾರ:
ಜ.17 ರಂದು ಕಾರವಾರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ ಕಾರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಸಂಘದ ಪದಾಧಿಕಾರಿಗಳಿಗೆ ಪುರಸ್ಕಾರ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು `ವಿದ್ಯಾರ್ಥಿಗಳು ತಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುನ್ನಡೆದರೆ ಗೆಲುವು ಸಾಧಿಸಲು ಸಾಧ್ಯ. ಆ ಕುರಿತು ಗಮನಹರಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರ ಕಾರವಾರದ ವಿಲ್ಫ್ರೆಡ್ ಡಿಸೋಜಾ, ದಿವೇಕರ್ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಕೇಶವ ಭಟ್, ಶಂಭುಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಕಮಲಾಕರ ಅಂಬಿಗ, ಕಾರ್ಯದರ್ಶಿ ನಾಗೇಶ ನಾಯ್ಕ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ಬಿ. ನಾಯ್ಕ, ನರಸಿಂಹ ನಾಯ್ಕ, ಎಂ.ಎಸ್.ಶೋಭಿತ್, ಮೇಘರಾಜ ಆಚಾರಿ, ನಿತಿನ ನಾಯ್ಕ, ನಾಗಪ್ಪ ನಾಯ್ಕ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

Leave a Comment