• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

26ನೇ ಉ.ಕ. ಜಿಲ್ಲಾ ಇತಿಹಾಸ ಪುರಾತತ್ವ ವಿಚಾರ ಸಂಕಿರಣ.

January 23, 2020 by Vishwanath Shetty Leave a Comment

watermarked 22 Honavar 03


ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯ ಉಜ್ವಲವಾಗಿಸಿ,
ಹೊನ್ನಾವರ ಜ. 22 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಘಟನೆಯಲ್ಲಿ 26ನೇ ಸಮ್ಮೇಲನವಾಗಿ ಉತ್ತರ ಕನ್ನಡ ಸಮ್ಮೇಲನ ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ಹೆಗಡೆ ಇವರ ಸರ್ವಾಧ್ಯಕ್ಷತೆಯಲ್ಲಿ ಆರ್.ಎಸ್. ಹೆಗಡೆ ಸಭಾಗೃಹದಲ್ಲಿ ಆರಂಭವಾಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಪಿ. ಕರ್ಕಿ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯವನ್ನು ಉಜ್ವಲವಾಗಿ ಕಟ್ಟಬೇಕು ಎಂಬ ಸಂದೇಶ ನೀಡಿದರು. ಜಿಲ್ಲಾ ಇತಿಹಾಸ ಸಮ್ಮೇಳನಗಳ ಸರಣಿಯಲ್ಲಿ ವಿಜಯನಗರ ಅಧ್ಯಯನ 21ನೇ ಸಂಪುಟವನ್ನು ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್ ಬಿಡುಗಡೆಮಾಡಿ ಜಿಲ್ಲೆಯ ಆಳವಾದ ಅಧ್ಯಯನ, ಸಂಶೋಧನೆ ನಡೆಸಿ ಅದನ್ನು ದಾಖಲಿಸಿ, ಸಂರಕ್ಷಿಸುವ ಮುಖಾಂತರ ಮುಂದಿನ ಪೀಳಿಗೆ ಇದರಿಂದ ಸ್ಪೂರ್ತಿ ದೊರೆಯುವಂತೆ ಮತ್ತು ಅವರು ಜೀವನದಲ್ಲಿ ಸಾಧಿಸುವಂತೆ ಆಗಬೇಕು. ಜಿಲ್ಲೆಯ ಪುರಾತನ ದೇವಾಲಯಗಳಿಗೆ ಇಲಾಖೆಯ ನೆರವು ಬೇಕು ಎಂದು ಕೋರಿದರು.

watermarked 22 Honavar 04


ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮೈಸೂರು ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ.ಎಸ್. ಕೃಷ್ಣಮೂರ್ತಿ ಮಾತನಾಡಿ ದೇಶದಲ್ಲೇ ಅತಿಪುರಾತನವಾದ ನಾಮಾಂಕಿತ ನಗರ ಬನವಾಸಿ, ಕ್ರಿಸ್ತ ಶಕ ಮೂರನೇ ಶತಮಾನದಲ್ಲಿ ಅಶೋಕ ಚಕ್ರವರ್ತಿಗೆ ಇದು ತಿಳಿದಿತ್ತು, ಈತ ತನ್ನ ಶಿಷ್ಯ ತೇರಾರಕ್ಷಿತನನ್ನು ಬನವಾಸಿಗೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕಳಿಸಿದ್ದ, ಆಗ ಸಂಪದ್ಭರಿತವಾದ ಬನವಾಸಿಯ ಇತಿಹಾಸ ಸಿಂಹಳಿಯರ ಸಾಹಿತ್ಯದಲ್ಲೂ ಬಂದಿದೆ. ರೋಮನ್ ಸಾಮ್ರಾಜ್ಯದೊಂದಿಗೆ ಬನವಾಸಿಯ ಸಂಪರ್ಕವಿತ್ತು. ಬನವಾಸಿಯ ಶ್ರೀಮಂತ ಪುಣೆಯ ಬಳಿ ಚೈತ್ಯಾಲಯ ಕಟ್ಟಿಸಿದ್ದ ಎಂದು ವಿವರಿಸಿ, ಬನವಾಸಿಯ ಇತಿಹಾಸದ ಮಹತ್ವ ತಿಳಿಸಿ ಆಳವಾದ ಸಂಶೋಧನೆಯಾಗಲಿ ಎಂದರು. ಕರ್ನಾಟಕ ವಿವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಷಡಕ್ಷರಯ್ಯ ಮಾತನಾಡಿ ಪುರಾತತ್ವ ಇಲಾಖೆಯ ನಿರ್ದೇಶಕರಾಗಿರುವ ಡಾ. ಆರ್. ಗೋಪಾಲ ಅವರು ರಾಜ್ಯದ ಎಲ್ಲ ಜಿಲ್ಲೆಗಳ ಇತಿಹಾಸವನ್ನು ದಾಖಲಿಸಿ, ಸಂಪುಟ ರೂಪದಲ್ಲಿ ಹೊರತರುತ್ತಿದ್ದಾರೆ. 20ಸಂಪುಟಗಳ ಹೊರಬಂದಿದೆ. 25ಜಿಲ್ಲೆಗಳಲ್ಲಿ ಇಂತಹ ವಿಚಾರ ಸಂಕಿರಣ ನಡೆದಿದೆ. ಉತ್ತರಕನ್ನಡದ ಸಮ್ಮೇಲನದಲ್ಲಿ 56ಪ್ರಬಂಧಗಳು ಮಂಡನೆಯಾಗಲಿದೆ. ಈ ಸಾಧನೆ ದೊಡ್ಡದು, ಭವಿಷ್ಯದ ಸಂಪತ್ತು ಎಂದು ಡಾ. ಗೋಪಾಲ ಅವರನ್ನು ಅಭಿನಂದಿಸಿದರು.

\

watermarked 1 1


ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ನಾಯ್ಕ ಈ ಸಮ್ಮೇಲನದಿಂದ ಜಿಲ್ಲೆಗೆ ಉಪಯೋಗವಾಗಲಿದೆ, ಇತಿಹಾಸದ ವಿದ್ಯಾರ್ಥಿಗಳು ಸಕ್ರೀಯರಾಗಿ ಎರಡು ದಿನದ ಸಮ್ಮೇಲನವನ್ನು ಯಶಸ್ವಿಗೊಳಿಸಬೇಕು ಎಂದರು. ಕಾಲೇಜು ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಇಲಾಖೆಯ ನಿರ್ದೇಶಕ ಡಾ. ಆರ್. ಗೋಪಾಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೋ. ನಾಗರಾಜ ಹೆಗಡೆ, ಪ್ರೋ. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೋ. ಜಿ.ಎಸ್. ಹೆಗಡೆ ವಂದಿಸಿದರು.

IMG 20191213 WA0004

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...