• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು – ರವೀಂದ್ರ ನಾಯ್ಕ

January 24, 2020 by Sandesh Desai Leave a Comment

watermarked 23 jyd 1b


ಜೋಯಿಡಾ –

ರಾಜ್ಯದಲ್ಲಿರುವ ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಅರಣ್ಯ ಅತಿಕ್ರಮಣದಾರರ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.
ಅವರು ಜೋಯಿಡಾದಲ್ಲಿ ಇಂದು ಬುಧವಾರ ಕುಣಬಿ ಭವನದಿಂದ ನಡೆದ ಬೃಹತ ಮೆರವಣಿಗೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು,ಜೋಯಿಡಾದಂತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ, ಇಲ್ಲಿನ ಜನರಿಗೆ ಮೂಲ ಸೌಕರ್ಯಕ್ಕೂ ತಡೆಯೊಡ್ಡುತ್ತಿದ್ದಾರೆ, ಹೀಗಾದರೆ ನಾವೂ ಸುಮ್ಮನೆ ಕುಳಿತುಕೊಳ್ಳುವವರಲ್ಲ, ಅರಣ್ಯ ಅಧಿಕಾರಿಗಳು ರೈತರ ಭೂಮಿ ಕಸಿಯುವ ಪ್ರಯತ್ನ ಮಾಡಿದರೆ ದೊಡ್ಡ ಹೋರಾಟವೆ ಮಾಡಬೇಕಾಗುತ್ತದೆ ಎಂದರು.
ಅರಣ್ಯ ಅಧಿಕಾರಿಗಳು ಕಾನೂನಿನ ತಿಳುವಳಿಕೆ ಇಲ್ಲದೆ ಇಲ್ಲಿ ಕೆಲಸ ಮಾಡಿದಂತೆ ಕಾಣುತ್ತಿದೆ

watermarked 23 jyd 1 a.


ರೈತರ ಅತಿಕ್ರಮಣ ಭೂಮಿಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಕಾಲುವೆ ನಿರ್ಮಿಸಿದ್ದಾರೆ ಇದು ಖಂಡನೀಯ, ಹೀಗೆ ಆದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಕೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ,ಜಿ,ಪಿ,ಎಸ್ ಆದ ಅತಿಕ್ರಮಣದಾರರಿಗೆ ಏಕೆ ತೊಂದರೆ ಕೊಡುತ್ತಿದ್ದಿರಿ, ಮೂಲ ಸೌಕರ್ಯವಿಲ್ಲದೆ ಜನರು ಹೇಗೆ ಬದುಕಲು ಸಾಧ್ಯ. ನ್ಯಾಯಾಲಯ ತಿರಸ್ಕರಿಸಿದ ಅರ್ಜಿದಾರರು ಮತ್ತು ಪುನ: ಅರ್ಜಿ ಸಲ್ಲಸಲೇ ಬೇಕು, ಜಿಲ್ಲಾಡಳಿತಕ್ಕೆ ಪ್ರತಿಯೊಬ್ಬರು ಪತ್ರ ಹಾಕಬೇಕು. ಕಾನೂನಾತ್ಮಕ ಹೋರಾಟದಿಂದ ನಮಗೆ ನ್ಯಾಯ ಸಿಗುತ್ತದೆ, ಅರಣ್ಯ ಅತಿಕ್ರಮಣದಾರರು 3 ತಲೆ ಮಾರಿನ ಮಾಹಿತಿ ಕೊಡುವ ಅವಶ್ಯಕತೆ ಇಲ್ಲ. ಅರಣ್ಯ ಇಲಾಕೆ ಸಿಬ್ಬಂದಿಗಳು ಜನರ ಮೂಲಬೂತ ಸೌಕರ್ಯಕ್ಕೆ ಅಡ್ಡಿ ಮಾಡಿದರೆ ಕೂಡಲೇ ನನಗೆ ತಿಳಿಸಿ ಎಂದರು.

IMG 20191213 WA0004


ಕುಂಬಾರವಾಡಾ ಗ್ರಾ,ಪಂ,ಅಧ್ಯಕ್ಷ ಪುರುಷೋತ್ತಮ ಕಾಮತ ಮಾತನಾಡಿ ಜೋಯಿಡಾದ ಜನತೆಯನ್ನು ಅರಣ್ಯ ಇಲಾಕೆಯವರು ನಾಯಿ,ದನಗಳಂತೆ ನೋಡುತ್ತಿದ್ದಾರೆ, ಸ್ವಾಮಿ ! ನಾವು ಮನುಷ್ಯರೇ, ನಿಮ್ಮ ಮಾತಿಗೆ ಬೆಲೆ ಕೊಟ್ಟು ಸಾಕಾಗಿದೆ, ಜೋಯಿಡಾದ ಜನರು ಸುಮ್ಮನಿದ್ದಾರೆ ಎಂದರೆ ಅದೂ ಅವರ ದೌರ್ಬಲ್ಯವಲ್ಲ ಎಚ್ಚರವಿರಲಿ ಎಂದರು.
ಹೋರಾಟಗಾರ ಸುಭಾಷ ಗಾವಾಡಾ, ಜಯಾನಂದ ಡೇರೆಕರ, ಇನ್ನು ಕೆಲವರು ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಮೆರವಣಿಗೆಯಲ್ಲಿ ಜಿ,ಪಂ,ಸದಸ್ಯ ರಮೇಶ ನಾಯ್ಕ, ನಂದಿಗದ್ದಾ ಗ್ರಾ,ಪಂ,ಅದ್ಯಕ್ಷ ಅರುಣ ದೇಸಾಯಿ, ಸದಸ್ಯ ರಾಮಕೃಷ್ಣ ದಾನಗೇರಿ, ಉಳವಿ ಗ್ರಾ,ಪಂ,ಅದ್ಯಕ್ಷ ಮಂಜುನಾಥ ಮೊಕಾಶಿ, ಅರಣ್ಯ ಅತಿಕ್ರಮಣದಾರರ ಯಲ್ಲಾಪುರದ ಅಧ್ಯಕ್ಷ ಭೀಶ್ಮಿ.ಇತರರು ಉಪಸ್ಥಿತರಿದ್ದರು.

watermarked 23 jyd 1a 1



ಅರಣ್ಯ ಅತಿಕ್ರಮಣದಾರರ ಸಭೆ ಇದೆ ಎಂದು ತಿಳಿದಿದ್ದರು, ಹಿರಿಯ ಅರಣ್ಯ ಅಧಿಕಾರಿಗಳಾಗಲಿ, ಸಮಾಜ ಕಲ್ಯಾಣ ಇಲಾಕೆಯ ಅಧಿಕಾರಿಗಳಾಗಲಿ ಇವರ ಮಾತಿಗೆ ಬೆಲೆಕೊಟ್ಟು ಮಾತುಕತೆಗೆ ಬರಲೇ ಇಲ್ಲ. ಜೋಯಿಡಾದ ತಹಶೀಲ್ದಾರ ಕೂಡ ಇರಲಿಲ್ಲ, ಇದರಿಂದ ಹೋರಾಟಗಾರ ರವೀಂದ್ರ ನಾಯ್ಕ, ಮತ್ತು ಗ್ರಾ,ಪಂ,ಸದಸ್ಯರು ಜನಪ್ರತಿನಿಧಿಗಳು ಕೆಂಡ ಮಂಡಲವಾದರು. ಜೋಯಿಡಾದ ಸಿ,ಪಿ,ಐ ಬಾಬಾಸಾಹೇಬ ಹುಲ್ಲನ್ನವರ ಇವರಿಗೆ ಸಮಾಧಾನದ ಮಾತುಗಳೊಂದಿಗೆ ಸಭೆ ಶಾಂತಗೊಳಿಸಿದರು. ಜೋಯಿಡಾ ತಹಶೀಲ್ದಾರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರು ಮತ್ತು ಅಧಿಕಾರಿಗಳ ಚರ್ಚೆ ನಡೆಯುವುದೆಂದು ಮೊದಲೇ ತಿಳಿದಿದ್ದ ಅಧಿಕಾರಿಗಳು ಗೈರಾಗಿದ್ದರು, ಅರಣ್ಯ ಅಧಿಕಾರಿಗಳು ಬರಲೇ ಬೇಕೆಂದು ಪಟ್ಟು ಹಿಡಿದಾಗ ,ಅಣಶಿ ಎ,ಸಿ,ಎಪ್, ಎಸ್ ತೋಡ್ಕರ ಸಭೆಗೆ ಹಾಜರಾಗಿ ಅರಣ್ಯ ಇಲಾಕೆಯಿಂದ ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬರವಸೆ ನೀಡಿದರು.
ಇದಾದ ನಂತರ ಅತಿಕ್ರಮಣದಾರರ ಅರ್ಜಿಗಳನ್ನು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಸ್ವೀಕಾರ ಮಾಡಿದರು, ಸಾವಿರಾರು ಜನರು ತಮ್ಮ ಅರ್ಜಿಗಳನ್ನು ಸಲ್ಲಿಸುವಾಗ ಆ ಮುಂದೆ ತಾ ಮುಂದೆ ಎಂದು ಗಲಿಬಿಲಿಯಿಂದ ಅರ್ಜಿ ನೀಡಿದ ಘಟನೆ ನಡೆಯಿತು.

ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು - ರವೀಂದ್ರ ನಾಯ್ಕ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News, Other Tagged With: ಅರಣ್ಯ ಅತಿಕ್ರಮಣದಾರ ಸಮಸ್ಯೆ, ಅರಣ್ಯ ಅಧಿಕಾರಿಗಳ ದೌರ್ಜನ್ಯ, ಜಿಲ್ಲಾಧಿಕಾರಿಗಳಿಗೆ ಮನವಿ, ಬಗೆಹರಿಸುವಂತೆ ಜೋಯಿಡಾ ತಹಶೀಲ್ದಾರ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...