
ಒಳಚರಂಡಿ ಅವ್ಯವಸ್ಥೆಯಿಂದ ಪಟ್ಟಣದ ರಸ್ತೆ ಹೊಂಡಮಯವಾಗಿದ್ದು ಹಲವು ಬಾರಿ ಸಾರ್ವಜನಿಕರು ಹಾಗೂ ಸಂಘ ಸಂಶ್ತೆ ವತಿಯಿಂದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿ ಹೋದ ರಿಕ್ಷಾ ಚಾಲಕರು ಪಟ್ಟಣದ ಶರವಾತಿ ವೃತ್ತದಿಂದ ಬಸ್ ನಿಲ್ದಾಣ ಮೂಲಕ ಬಜಾರ ರಸ್ತೆ ಮೂಲಕ ಬೃಹತ್ ಮೆರವಣೆಗೆ ನಡೆಸಿ ತಹಶೀಲ್ದಾರ ಕಛೇರಿ ಆಗಮಿಸಿ ಘೋಷಣೆ ಮೊಳಗಿಸಿದರು. ಒಳಚರಂಡಿ ಗುತ್ತಿಗೆ ಪಡೆದ ಕಂಪನಿ ರಸ್ತೆಯನ್ನು ಎಲ್ಲೆಡೆ ಅಗೆದಿದ್ದು ಚೇಂಬರ್ಗಳನ್ನು ರಸ್ತೆಗಿಂತ ಎತ್ತರದಲ್ಲಿ ನಿರ್ಮಿಸಿದೆ. ಅಗೆದ ರಸ್ತೆಯನ್ನು ಸರಿಪಡಿಸಿಲ್ಲ. ಒಂದು ವಾರ್ಡಿನ ಕಾಮಗಾರಿ ಮುಗಿದ ಮೇಲೆ ಇನ್ನೊಂದೆಡೆ ಆರಂಭಿಸುವುದನ್ನು ಬಿಟ್ಟು ಎಲ್ಲೆಡೆ ಅರೆಬರೆ ಕಾಮಗಾರಿ ನಡೆಸಿ, ವಾಹನ ಮಾತ್ರವಲ್ಲ ಮನುಷ್ಯರು ನಡೆಯಲಾರದಂತೆ ರಸ್ತೆ ಕೆಡಿಸಿದೆ. ಈ ಕುರಿತು ತಹಶೀಲ್ದಾರ ಅವರು ನಿರ್ದೇಶಿಸಿದ್ದರೂ ಗುತ್ತಿಗೆದಾರರು ಕೆಲಸ ಆರಂಭಿಸಿಲ್ಲ ಮತ್ತು ಪಟ್ಟಣ ಪಂಚಾಯತ ವ್ಯಾಪ್ತಿಯ ಎಲ್ಲ ರಸ್ತೆಗಳು ಹಾಳಾಗಿವೆ. ಶಾಸಕರು ದುರಸ್ಥಿಗೆ ಬೇಕಾದ ನಿಧಿಯನ್ನು ಬಿಡುಗಡೆ ಮಾಡಿದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಅಲ್ಲದೇ ಒಳಚರಂಡಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ಸೂಕ್ತ ಮಾಹಿತಿ ನೀಡುವಂತೆ ಆಗ್ರಹಿಸಿದರು. ತಹಶೀಲ್ದಾರ ವಿವೇಕ ಶೇಣ್ವೆ ಮೂಲಕ ಮನವಿ ಸಲ್ಲಿಸಿದರು.
ಆಟೋ ಯೂನಿಯನ್ ಅಧ್ಯಕ್ಷರಾದ ಶಿವರಾಜ ಮೇಸ್ತ ಮಾತನಾಡಿ ಪಟ್ಟಣದ ರಸ್ತೆ ಒಳಚರಂಡಿಯಿಂದ ಅವ್ಯವಸ್ಥೆಯಿಂದ ರಿಕ್ಷಾ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಶಾಸಕರು ಈಗಾಗಲೇ ಪಟ್ಟಣದ ರಸ್ತೆ ನಿರ್ಮಾಣಕ್ಕಾಗಿ 1 ಕೋಟಿ ಬಿಡುಗಡೆಗೊಳಿಸಿದ್ದಾರೆ. 2 ಕೋಟಿ ಅನುಮೋದನೆಗೆ ಸಿದ್ದವಾಗಿದೆ. ಆದರೆ ಈ ಅಧಿಕಾರಿಗಳ ಅಸಡ್ಡೆಯಿಂದ ಎಲ್ಲಿಯೂ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ದಿನದ ದುಡಿಮೆಯೆಲ್ಲ ಆಟೋ ರಿಪೇರಿ ಸರಿದುಗುತ್ತಿದೆ. ಆದ್ದರಿಂದ ನಮ್ಮವರ ಹಿತ ಕಾಯಲು ರಸ್ತೆಯನ್ನು ಆದಷ್ಟು ಶಿಘ್ರವಾಗಿ ಸರಿಪಡಿಸುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ ಮಾತನಾಡಿ ಈಗಾಗಲೇ ಅಧಿಕಾರಿಗಳೊಂದಗೆ ಚರ್ಚಿಸಲಾಗಿದೆ. ಅಲ್ಲದೇ ಕಾಮಗಾರಿಗಳನ್ನು ನಡೆಸುವಂತೆ ನಿರ್ದೆಶನ ನೀಡಲಾಗಿದೆನವು ಹೇಳಿದ ಪ್ರಕಾರ20% ಮಾತ್ರ ಕಾಮಗಾರಿ ಭರವಸೆ ನೀಡಿದಂತೆ ಕಾರ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗೆ ಈಗಾಗಲೇ ವರದಿ ನೀಡುವಂತೆ ಸೂಚಿಸಿದ್ದು ವರದಿ ಬಳಿಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಬಳಿಕ ಅವರ ಆದೇಶದಂತೆ ಕ್ರಮಕೈಗೊಳ್ಳೂತ್ತೇನೆ ಎಂದು ಭರವಸೆ ನೀಡಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಮಾತನಾಡಿ ರಸ್ತೆ ಸಮಸ್ಯೆ ಬಗ್ಗೆ ಈಗಾಗಲೇ 1 ಕೋಟಿ ವೆಚ್ಚದಲ್ಲಿ ಪಟ್ಟಣದ ಮೂರಕ್ಕೂ ಅಧಿಕ ಭಾಗದಲ್ಲಿ ಕೇಲವೇ ದಿನದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಉಳಿದ ರಸ್ತೆ ದುರಸ್ಥಿಗೆ 2ಕೋಟಿ ಕ್ರೀಯಾಯೋಜನೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದಿದ್ದು ಅದು ಕೂಡಾ ಅನುಷ್ಟಾನಗೊಳ್ಳಲಿದೆ ಎಂದರು.
ಈ ಸಂದರ್ಬದಲ್ಲಿ ಉಪಧ್ಯಕ್ಷರಾದ ದತ್ತು ನಾಯ್ಕ, ಆಗ್ನೇಲ್ ಡಿಸೋಜಾ, ಪ್ರಕಾಶ ನಾಯ್ಕ, ಉಮೆಶ ಸಾರಂಗ, ಜಾಕಿ ಡಿಸೋಜಾ, ಡಿ.ಎಂ.ನಾಯ್ಕ, ಸೇರಿದಂತೆ ಆಟೋ ಚಾಲಕರು ಉಪಸ್ಥಿತರಿದ್ದರು.

Leave a Comment