ಪ್ರತಿಷ್ಟಿತ ಬ್ಯಾಂಕ್ ಎಂದು ಜನಮನ್ನಣಿ ಪಡೆದಿರುವ ಶತಮಾನೊತ್ಸವದ ಸಂಭ್ರಮ ಆಚರಿಸಿಕೊಂಡ ಹೊನ್ನಾವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಬ್ಯಾಂಕ್ ಕಾರ್ಯಲಯದಲ್ಲಿ ನಡೆಯಿತು.
ಕಳೆದ ಒಂದು ವಾರದ ಹಿಂದೆ ನಡೆದ ಚುನಾವಣೆಯಲ್ಲಿ ರಾಘವ ಬಾಳೇರಿ ನೇತ್ರತ್ವದ ತಂಡದಲ್ಲಿ 13 ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದರು. ಇಂದು ಬ್ಯಾಂಕಿನ ಆವರಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಸತತ 4ನೇ ಬಾರಿಗೆ ಅಧ್ಯಕ್ಷರಾದ ರಾಘವ ಬಾಳೇರಿ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ವಸಂತ ಪ್ರಭು ಅವರನ್ನು ಸರ್ವಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ರಾಘವ ಬಾಳೇರಿ ಕಳೆದ ಅವಧಿಯಂತೆ ಈ ಬಾರಿಯು ನನ್ನ ಮೇಲಿನ ವಿಶ್ವಾಸದಿಂದ ಆಯ್ಕೆ ಮಾಡಿರುದರಿಂದ ಇನ್ನಷ್ಟು ಉತ್ತಮವಾಗಿ ಸೇವೆ ಸಲ್ಲಿಸುತ್ತೇನೆ. ಎಲ್ಲಾ ಶೇರುದಾರರಿಗೂ ಅಭಿನಂದನೆ. ಆಯ್ಕೆಯಿಂದ ನನ್ನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು.
ನಂತರ ನೂತನ ಉಪಾಧ್ಯಕ್ಷ ವಸಂತ ಪ್ರಭು ಮಾತನಾಡಿ ಶತಮಾನೊತ್ಸವ ಆಚರಿಸಿಕೊಂಡು ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬ್ಯಾಂಕ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದಕ್ಕೆ ಧನ್ಯವಾದಗಳು ಎಂದರು. ನೂತನ ಸಭಾಂಗಣ ಹಾಗೂ ಹಲವು ಸಾಧನೆಗೆ ಕಾರಣವಾದ ಅಧ್ಯಕ್ಷ ರಾಘವ ಭಾಳೇರಿ ಸಾರಥ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ನಿರ್ದೆಶಕರಾದ ರಘುನಾಥ ಪೈ, ರಾಮದಾಸ ಪ್ರಭು, ತಿಮ್ಮಪ್ಪ ಪೈ, ವೈಕುಂಠ ಪ್ರಭು, ರಾಮಕೃಷ್ಣ ಶ್ಯಾನಭಾಗ, ಸವೊತ್ತಮ ನಾಯ್ಕ, ವಸಂತ ಶೆಟ್ಟಿ, ಸಂತೋಷ ಪಾವಸ್ಕರ್, ದೇವಾನಂದ ಗೋಸಾವಿ, ಅಂಕಿತಾ ಕಾಮತ್, ತಾರ ಕುಮಾರಸ್ವಾಮಿ ನಾಯ್ಕ, ಶುಭ ಹಾರೈಸಿದರು. ರೋಟರಿ ಅಧ್ಯಕ್ಷ ದಿನೇಶ ಕಾಮತ್, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರಾಜೀವ್ ಶ್ಯಾನಭಾಗ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
Leave a Comment