ತಾಲೂಕಾಡಳಿತ ಹಾಗೂ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಗಣರಾಜೊತ್ಸವ ಕಾರ್ಯಕ್ರಮಕ್ಕೆ ತಹಶೀಲ್ದಾರ ವಿವೇಕ ಶೇಣ್ವೆ ಧ್ವಜಾರೋಹನ ಕಾರ್ಯಕ್ರಮ ನೇರವೇರಿಸಿದರು.
ನಂತರ ಮಾತನಾಡಿ ನ್ಯಾಯ,ಸ್ವಾತಂತ್ರ್ಯ, ಸಮಾನತೆ,ವ್ಯಕ್ತಿ ಗೌರವ, ಭ್ರಾತತ್ವ,ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವ ಗಣರಾಜ್ಯ ವ್ಯವಸ್ಥೆ ಆದರ್ಶಪ್ರಾಯವಾಗಿದೆ. ಸಂವಿಧಾನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತದೆ. ಜನರ ಆದರ್ಶ, ಆಕಾಂಕ್ಷೆಗಳನ್ನು ಪ್ರತಿಭಿಂಬಿಸುತ್ತದೆ. ಕಾನೂನಿನೆದುರು ಎಲ್ಲರೂ ಸಮಾನರು ಎಂದು ಪ್ರಜೆಗಳ ಆಗು ಹೋಗುಗಳನ್ನು ರಕ್ಷಿಸಲಾಗುತ್ತದೆ. ಎಲ್ಲರು ಸಮಾನತೆಯ ಆಶೆಯೊಂದಿಗೆ ತ್ರಪ್ತಿಕರ ಜೀವನ ನಡೆಸುವಂತಾಗಬೇಕು. ಆಡಳಿತ ವ್ಯವಸ್ಥೆ ಉತ್ತಮವಾಗಬೇಕು. ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಅಂದಾಗ ಮಾತ್ರ ಪ್ರಜಾಸತ್ತಾತ್ಮಕ ಪರಿಕಲ್ಪನೆ ಅಜಾರಮರವಾಗುತ್ತದೆ ಎಂದು ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ನಂತರ ಪೋಲಿಸ್, ಹೊಮಗಾಡ್ಸ, ವಿವಿಧ ಪ್ರಾಥಮಿಕ, ಪ್ರೌಢ ಹಾಗೂ ಪದವಿ ವಿಭಾಗದ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್, ಹಾಗೂ ಭಾರತೀಯ ಸೇವಾದಳ, ಸ್ಕೋಟ್ ಗೈಡ್ಸ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನದ ಮೂಲಕ ಗೌರವ ಸಲ್ಲಿಸಲಾಯಿತು.
ತಾಲೂಕಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಮಾಜಿ ಶಾಸಕರಾದ ಡಾ. ಎಂ.ಪಿ.ಕರ್ಕಿ, ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ವಿಜಯ ಕಾಮತ, ನಾಗರಾಜ ಭಟ್, ಸುಬ್ರಾಯ ಗೌಡ, ಶ್ರೀಪಾದ ನಾಯ್ಕ, ಸುರೇಶ ಹೊನ್ನಾವರ, ಮಹೇಶ ಮೇಸ್ತ, ನಿಶಾ ಶೇಟ್, ಮೇಧಾ ನಾಯ್ಕ, ತಾರಾ ನಾಯ್ಕ, ಭಾರತಿ ಭಂಡಾರಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪೋಲಿಸ್ ವೃತ್ತ ನಿರಿಕ್ಷಕರಾದ ವಸಂತ ಆಚಾರಿ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಜಿ.ಎ.ನಾಯ್ಕ, ಉಪಸ್ಥಿತರಿದ್ದರು
Leave a Comment