ಹೊನ್ನಾವರ ತಾಲೂಕಿನ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯ ಕದನ ದಿನದಿಂದ ದಿನಕ್ಕೆ ರೋಚಕತೆಯಿಂದ ಕೂಡಿದ್ದು ಸಾಲಗಾರರೇತರ ಸ್ಥಾನಕ್ಕೆ ಅವಿರೋಧವಾಗಿ ಉದ್ದಿಮೆದಾರರಾದ ರವಿ ಶೆಟ್ಟಿ ಕವಲಕ್ಕಿ ಆಯ್ಕೆಯಾಗಿದ್ದಾರೆ. ಒಟ್ಟು 6 ನಾಮಪತ್ರ ಸಾಲಗಾರರೇತರ ಸ್ಥಾನಕ್ಕೆ ಸಲ್ಲಿಕೆಯಾಗಿದ್ದು ಶನಿವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದರಿಂದ ಸಲ್ಲಿಸಿದ ಅಭ್ಯರ್ಥಿಗಳಾದ ಎಂ.ಆರ್.ಹೆಗಡೆ ಹೊಸಾಕುಳಿ, ಎಚ್.ಆರ್.ಗಣೇಶ, ಚಂದ್ರಶೇಖರ ಗೌಡ, ನಾರಾಯಣ ನಾಯ್ಕ, ಆಯ್.ಜಿ.ಹೆಗಡೆ ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದ ಹಿನ್ನಲೆಯಲ್ಲಿ ಉದ್ದಿಮೆದಾರರಾದ ರವಿ ಶೆಟ್ಟಿ ಕವಲಕ್ಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Leave a Comment