ಹೊನ್ನಿನ ಆಗರವಾದ ಈ ಹೊನ್ನಾವರದಲ್ಲಿ 14 ವರ್ಷಗಳ ಸುದಿರ್ಘ ಕಾಲ ಶರಾವತಿ ತಾಯಿಯ ಸೇವೆ ಎನ್ನುವಂತೆ ಶರಾವತಿ ಉತ್ಸವ ಮಾಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದು ಉದ್ಯಮಿ ಎನ್.ಆರ್. ಹೆಗಡೆ ರಾಘೋಣ ಹೇಳಿದರು.
ಹೊನ್ನಾವರ ಪಟ್ಟಣದ ಸೇಂಟ್ ಅಂಥೋನಿ ಮೈದಾನದಲ್ಲಿ ಶರಾವತಿ ಸಾಂಸ್ಕøತಿಕ ವೇದಿಕೆ ಶನಿವಾರ ಆಯೋಜಿಸಿದ 14ನೇ ವರ್ಷದ ಶರಾವತಿ ಉತ್ಸವ ದೀಪಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮನುಕುಲದ ಉದ್ದಾರಕ್ಕೆ ನಮ್ಮ ವಿಚಾರಧಾರೆಗಳು ಪುಟಿಯಲು ಸಾಂಸ್ಕøತಿಕ ಉತ್ಸವಗಳು ಬೇಕು ಪಂಚಭೂತಗಳಲ್ಲಿ ನೀರು ಪ್ರಮುಖವಾದುದು. ಅದನ್ನು ಗೌರವಿಸುವ ಕಾರ್ಯ ನಡೆದಿದೆ. ಕನ್ನಡ ನಾಡಿನ ವಿಚಾರ, ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಹಿಸಲು ಈ ವೇದಿಕೆ ಕಾರ್ಯೋನ್ಮುಖವಾಗಿದೆ ಅಲ್ಲದೇ ಸ್ಥಳಿಯ ಕಲೆ ಹಾಗೂ ಕಲಾವಿದರನ್ನು ಪರಿಚಯಿಸುವ ಕಾರ್ಯ ಮಾಡುತ್ತಿದೆ ಎಂದು ಸಂಘಟನೆ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಅಭಿಯಂತ ಆರ್.ಜಿ. ಭಟ್, ಶಿಕ್ಷಣ ತಜ್ಞ ಅರುಣ ಉಭಯಕರ, ಸಮಾಜಸೇವಕಿ ಛಾಯಾ ಉಭಯಕರ, ಛಾಯಾಗ್ರಾಹಕ ಪಿ.ಕೆ. ಹೆಗಡೆ, ಮರಳು ಶಿಲ್ಪಿ ವೆಂಕಟ್ರಮಣ ಆಚಾರ್ಯ, ಸಂಗೀತ ಶಿಕ್ಷಕಿ ಲಕ್ಷ್ಮೀ ಹೆಗಡೆ ಹೊಸಾಕುಳಿ ಇವರನ್ನು ಸನ್ಮಾನಿಸಲಾಯಿತು.
ಶ್ರೀಕಾಂತ ಭಟ್ ಕುಮಟಾ, ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಉಪಸ್ಥಿತರಿದ್ದರು. ವೇದಿಕೆಯ ಗೌರವಾಧ್ಯಕ್ಷ ಪಿ.ಎಸ್.ಭಟ್ ಉಪ್ಪೋಣಿ ಸ್ವಾಗತಿಸಿ ಪ್ರಾತ್ಸಾವಿಕ ಮಾತನಾಡಿದರು. ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಇದ್ದರು. ಪ್ರಾಚಾರ್ಯ ಎಸ್.ಜಿ.ಭಟ್ ಮತ್ತು ಕಲ್ಪನಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಪೂಜಾ ಹೆಗಡೆ, ಸಾನ್ವಿ ರಾವ್, ಅನ್ವಿತಾ ಹರೀಶ ನಾಯ್ಕ ಮತ್ತು ಸಂಗಡಿಗರಿಂದ ಭರತನಾಟ್ಯ, ರಿಷಿ ಸಾಯಿದಾಸ ಇವರಿಂದ ಗಾಯನ. ಲತಾ ಗುರುರಾಜ ಹಾಗೂ ಗುರುರಾಜ ಹೆಗಡೆ ಆಡುಕಳ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
Leave a Comment