• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಬೇಡಿ – ಅರಣ್ಯ ಅಧಿಕಾರಿಗಳಿಗೆ ರವೀಂದ್ರ ನಾಯ್ಕ ಎಚ್ಚರಿಕೆ.

January 29, 2020 by Sandesh Desai Leave a Comment

watermarked 27 jyd 2

ಜೋಯಿಡಾ –
ಯಾರೂ ಸ್ವಾಮಿ ನಿಮಗೆ ಹೇಳಿದ್ದು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಅನುಕೂಲವಾಗುವ ರಸ್ತೆ, ಗಟಾರು, ಮನೆ ಮಾಡಲು ಬಿಡಬೇಡಿ ಎಂದು ಹೇಳಿದ್ದು, ಯಾವ ಕಾನೂನಿನಲ್ಲಿ ಈ ರೀತಿ ಇದೆ ಎಂದು ತೋರಿಸಿ , ಸುಮ್ಮನೆ ಜನಪ್ರತಿನಿಧಿಗಳಿಗೆ , ಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಬೇಡಿ ಎಂದು ರವೀಂದ್ರ ನಾಯ್ಕ ಅರಣ್ಯ ಅಧಿಕಾರಿಗಳನ್ನು ತೀವೃ ತರಾಟೆಗೆ ತೆಗೆದುಕೊಂಡರು.
ಅವರು ಇಂದು ಸೋಮವಾರ ಜೋಯಿಡಾದ ತಹಶೀಲ್ದಾರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಕುರಿತು ಚರ್ಚಿಸಲು ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದರು, ಸುರ್ಪಿಂ ಕೋರ್ಟನಿಂದ ಆದೇಶವೆ ಇದೆ , ಅರಣ್ಯ ಅತಿಕ್ರಮಣಕ್ಕಾಗಿ ಅರ್ಜಿ ಸಲ್ಲಿಸಿದ ಯಾರೊಬ್ಬನ ಜಮೀನನ್ನು ಅರಣ್ಯ ಇಲಾಕೆ ವಶ ಪಡಿಸಿಕೊಳ್ಳುವಂತಿಲ್ಲ ಎಂದು, ಆದರೆ ಜೋಯಿಡಾದ ಕೆಲ ಭಾಗದ ಅರಣ್ಯ ಅಧಿಕಾರಿಗಳು ,ಸಿಬ್ಬಂದಿಗಳು, ಇಲ್ಲಿಯ ಅತಿಕ್ರಮಣದಾರರ ಮೇಲೆ ದೌರ್ಜನ್ಯ ಮಾಡಿದ್ದಾರೆ, ರೈತರ ಅತಿಕ್ರಮಣ ಭೂಮಿಯಲ್ಲಿ ಕಾಲುವೆ ಹೊಡೆದಿದ್ದಾರೆ, ಇದು ಸರಿಯಲ್ಲ ಹೀಗೆ ಆದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಕೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ಅರ್ಜಿ ಹಾಕಿದವರಿಗೆ ಹಿಂಸೆ ಕೊಡಬೇಡಿ. ಹೊಸದಾಗಿ ಯಾರಾದರೂ ಅತಿಕ್ರಮಣ ಮಾಡಿದರೆ ನಮಗೆ ಹೇಳಿ ನಾವೇ ಅವರ ಮೇಲೆ ಕೇಸ್ ದಾಖಲಿಸುತ್ತೇವೆ ಎಂದರು,

IMG 20191213 WA0004


ಈ ಸಂದರ್ಭದಲ್ಲಿ ಅವರು ಸಭೆಯಲ್ಲಿ ಇದ್ದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಅತಿಕ್ರಮಣದಾರರಿಗೆ ಕಾನೂನಿನ ಅರಿವನ್ನು ಮೂಡಿಸಿದರು, ಸುಮ್ಮನೆ ಕಾನೂನು ಇಲ್ಲದೆ ಅರಣ್ಯ ಅಧಿಕಾರಿಗಳು ಯಾವ ಅರಣ್ಯ ಅತಿಕ್ರಮಣದಾರನ ಮೇಲು ಒತ್ತಾಯದಿಂದ ತೊಂದರೆ ಕೊಡುವಂತಿಲ್ಲ, ತೊಂದರೆ ಕೊಟ್ಟಲ್ಲಿ ನಮಗೆ ತಿಳಿಸಿ ಎಂದರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾ,ಪಂ,ಅಧ್ಯಕ್ಷ ಅರುಣ ದೇಸಾಯಿ, ಉಳವಿ ಗ್ರಾ,ಪಂ,ಅಧ್ಯಕ್ಷ ಮಂಜುನಾಥ ಮೊಕಾಶಿ, ಆರ್,ಎ,ಭಟ್ಟ, ಆರ್,ವಿ,ದಾನಗೇರಿ, ಗೋಪಾಲ ಭಟ್ಟ , ಇತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಅಧಿಕಾರಿಗಳಾದ ತಹಶೀಲ್ದಾರ ಸಂಜಯ ಕಾಂಬಳೆ, ಜೋಯಿಡಾ ಸಿ,ಪಿ,ಐ ಬಾಬಾ ಸಾಹೇಬ ಹುಲ್ಲನ್ನವರ, ಅರಣ್ಯ ಅಧಿಕಾರಿಗಳಾದ ಎ,ಸಿ,ಎಪ್, ಕೆ,ಎಸ್,ಗೋರವರ್, ಆರ್,ಎಪ್,ಓ ಗಳಾದ ಎಂ, ಕಳ್ಳಿಮಠ, ಮಹೀಮ್ ಜೆನ್ನು, ಅಶೋಕ ಕುಮಾರ, ಇತರರು ಉಪಸ್ಥಿತರಿದ್ದರು.
ಸಾವಿರಾರು ಅರಣ್ಯ ಅತಿಕ್ರಮಣದಾರರು ತಮ್ಮ ಅರ್ಜಿಗಳನ್ನು ಹಿಡಿದುಕೊಂಡು ಜೋಯಿಡಾ ತಹಶೀಲ್ದಾರ ಕಚೇರಿ ಎದುರು ಕುಳಿತುಕೊಂಡು ಕಾದದ್ದು ಕಂಡು ಬಂದಿತು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಅರಣ್ಯ ಅಧಿಕಾರಿಗಳಿಗೆ ರವೀಂದ್ರ ನಾಯ್ಕ ಎಚ್ಚರಿಕೆ, ಗಟಾರು, ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಬೇಡಿ, ಮನೆ ಮಾಡಲು, ಸುರ್ಪಿಂ ಕೋರ್ಟನಿಂದ ಆದೇಶ, ಹುಲಿ ಸಂರಕ್ಷಿತ ಪ್ರದೇಶ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...