ಜಿಲ್ಲೆಯಾದ್ಯಂತ ಚತುಷ್ಪತ ಕಾಮಗಾರಿ ಪೂರ್ಣವಾಗದೇ IRB ಕಂಪನಿ ಟೋಲ್ ಸಂಗ್ರಹ ಪ್ರಾರಂಬಿಸಿರುವುದನ್ನು ಖಂಡಿಸಿ ಕ.ರ.ವೇ ಬ್ರಹತ್ ಪ್ರತಿಭಟನೆ ನಡೆಸಿತು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತ್ರತ್ವದಲ್ಲಿ ಈ ಪ್ರತಿಭಟನೆ ನಡೆಯಿ
ಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಕಾಮಗಾರಿ ಮುಗಿಸದೇ ಟೋಲ್ ಪ್ರಾರಂಭಿಸಲು ಬಿಡುವುದಿಲ್ಲ. 75% ಕೆಲಸವೂ ಆಗದೆ ಜನರ ಹಣ ಕೀಳುತ್ತಿದ್ದಾರೆ ಎಂದರು. ಅದಲ್ಲದೇ ಕೆ.ಎ 47 ಹಾಗೂ ಕೆ.ಎ 30 ನೊಂದಾಯಿತ ವಾಹನಕ್ಕೆ ಸುಂಕ ವಿನಾಯತಿ ನೀಡುವಂತೆ ಆಗ್ರಹಿಸಿದರು.
IRB ಕಂಪನಿ ಜಿಲ್ಲೆಯಾದ್ಯಂತ ಅವೈಜ್ನಾನಿಕ ಚತುಷ್ಪತ ಕಾಮಗಾರಿ ನಡೆಸಿದ್ದು, ಇದುವರೆಗೆ ಜಿಲ್ಲೆಯ ಕೆಲ ಭಾಗಗಳಲ್ಲಿ ಸರ್ವಿಸ್ ರಸ್ತೆ ,ಅಂಡರ್ ಪಾಸ್, ಮತ್ತು ಮೇಲ್ಸೇತುವೆ ನಿರ್ಮಿಸಿಲ್ಲ.ಅಲ್ಲದೇ ಕುಮಟಾ ಪಟ್ಟಣ ,ದುಂಡುಕುಳಿ ಹಾಗೂ ಇನ್ನು ಕೆಲವು ಭಾಗದಲ್ಲಿ ಹಿಂದಿದ್ದ ರಸ್ತೆಗೆ ಡಾಂಬರಿಕರಣ ಮತ್ತು ಸಮರ್ಪಕ ಕಾಮಗಾರಿ ಮಾಡಿಲ್ಲ.ಅಲ್ಲದೇ ಕುಮಟಾ ಪಟ್ಟಣದಲ್ಲಿ ಬೈಪಾಸ್ ಅಥವಾ ಮೊದಲಿದ್ದ ರಸ್ತೆಯಲ್ಲಿಯೇ ಚತುಷ್ಪತ ಹಾದು ಹೋಗಲಿದೆಯೇ ಎಂಬುದು ಇನ್ನೂ ಅನುನಾನಾಸ್ಪದವಾಗಿದೆ.I R B ಟೋಲ್ ಪ್ರಾರಂಭಿಸುವ ಮೊದಲು ಪತ್ರಿಕಾ ಪ್ರಕಟಣೆ ಮೂಲಕ ಜನರಿಗೆ ತಿಳಿಸ ಬೇಕಾಗಿತ್ತು, ಆ ಕೆಲಸ ಸಹ ಆಗಿಲ್ಲ ಎಂದು ಅವರು ತಿಳಿಸಿದರು.ಈ ಬಗ್ಗೆ ಸ್ಥಳೀಯ ಶಾಸಕರು ದನಿ ಎತ್ತುವಂತೆ ಆಗ್ರಹಿಸಿದರು.
ಚತುಷ್ಪತ ಕಾಮಗಾರಿ ಹೆದ್ದಾರಿ ಕಾಮಗಾರಿ ಪೂರ್ಣವಾಗದೇ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಮಾಡಬಾರದೆಂದು ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಹಾಗೂ ಕಾಂಗ್ರೇಸ್ ಮುಖಂಡ ರವಿ ಶೆಟ್ಟಿ ಆಗ್ರಹಿಸಿದರು.
ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.ಪೋಲೀಸ್ ಬಿಗಿ ಬಂದೋಬಸ್ತ ಕಲ್ಪಿಸಲಾಗಿತ್ತು.
Leave a Comment