
ನ್ಯಾಷನಲ್ ಇನ್ಸುರೆನ್ಸ ಕಂಪನಿಯಿಂದ ಅಕಾಲಿಕ ನಿಧನ ಹೊಂದಿದ ಎಸ್.ಎಲ್.ಭಟ್ ಕುಟುಂಬಕ್ಕೆ ಪರಿಹಾರ ಮೊತ್ತವಾದ 15 ಲಕ್ಷ ಚೆಕ್ ವಿತರಣೆ.
ಸಂಕಷ್ಟ ಎದುರಾದಾಗ ಅನೂಕೂಲವಾಗಲೆಂದು ಸಾರ್ವಜನಿಕರು ಪ್ರೀಮಿಯಂ ರೂಪದಲ್ಲಿ ಹಣವನ್ನು ಸಂದಾಯ ಮಾಡುತ್ತಿದ್ದರು. ಅದೆಷ್ಟೊ ಕುಟುಂಬಕ್ಕೆ ಇದರಿಂದ ಅನೂಕೂಲವಾಗಿತ್ತು. ಈ ಹಿಂದೆ ಪ್ರತಿನಿಧಿಯಾಗಿದ್ದ ಎಸ್.ಎಲ್.ಭಟ್ ರಸ್ತೆ ಅಪಘಾತದಲ್ಲಿ ಅಲಕಾಲಿಕ ನಿಧನ ಹೊಂದಿರುದರಿಂದ ಅವರ ಕುಟುಂಬಕ್ಕೆ ಕಂಪನಿಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 15 ಲಕ್ಷ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚೆಕ್ ವಿತರಿಸಿದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಮಾತನಾಡಿ ಕೇವಲ 295 ಪ್ರೀಮಿಯಂ ತುಂಬಿ 15 ಲಕ್ಷದಷ್ಟು ಮೊತ್ತ ನೀಡುತ್ತಿರುವುದು ನಿಜಕ್ಕೂ ವಿಮಾದಾರರಿಗೆ ಅನೂಕೂಲವಾಗಲಿದೆ, ಹಲವಾರು ಕಂಪನಿಗಳು ಹಲವು ಸೌಲಭ್ಯವನ್ನು ಜಾರಿಗೆ ತಂದಿದ್ದರೂ ಈ ರೀತಿಯಾದ ಅನೂಕೂಲವಾಗುತ್ತಿರಲಿಲ್ಲ. ಕುಟುಂಬದಲ್ಲಿ ಆರ್ಥಿಕ ಅವಲಂಭಿತರು ಅಕಾಲಿಕವಾಗಿ ನಿಧನವಾದಗ ಸಂಕಷ್ಟದಿಂದ ಪಾರಾಗಲು ಇಂತಹ ನೆರವು ಬಹುಮುಖ್ಯವಾಗಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಯಶಶ್ವನಿ, ವಾಜಪೇಯಿ ಆರೋಗ್ಯ ಶ್ರೀಯಂತಹ ಅನೇಕ ಯೋಜನೆಗಳು ಅನಾರೋಗ್ಯ ಸಂಭವಿಸಿದಾಗ ನೆರವಿಗೆ ಬರುತ್ತದೆ ಇದರಲ್ಲಿ ನ್ಯಾಸನಲ್ ಇನ್ಸುರೆನ್ಸಿ ಕಂಪನಿಯು ಮುಂಚೂಣಿಯಲ್ಲಿದೆ. ಇಂದು ವಾಹನ ಸಮಖ್ಯೆ ಮಿತಿಮೀರಿದೆ. ಹಲವು ವಾಹನ ಸವಾರರು ಸಂಚಾರಿ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ, ಇದರಿಂದ ಅಫಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದೆ. ರಸ್ತೆ ಅಪಘಾತದಿಂದ ತೊಂದರೆಯಾದಾÀಗ ನೆರವಿಗೆ ಬರುವುದು ಇನುರೆನ್ಸ ಕಂಪನಿಯಾಗಿರುದರಿಂದ ಸಾರ್ವಜನಿಕರಿಂಗ ಇದರ ಬಗ್ಗೆ ಜಾಗೃತಿಯ ಅಗತ್ಯವಿದೆ ಆ ನಿಟ್ಟಿನಲ್ಲಿ ಕಂಪನಿಯು ಮುಂದಿನ ದಿನದಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂದರು.
ಈ ಹಿಂದೆ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ ರಮೇಶ ಮಾತನಾಡಿ ನಾನು ಈ ಹಿಂದೆ ಕಾಂiÀರ್iನಿರ್ವಹಿಸುವ ಸಮಯದಲ್ಲಿ ಈ ವಿಮೆ ಮಾಡಿದ್ದ ಇವರ ಅಕಾಲಿಕ ನಿಧನದಿಂದ ಇಂದು ವಿತರಣೆ ಮಾಡಿದ ಚೆಕ್ ಅವರ ಕುಟುಂಬಕ್ಕೆ ಮುಂದಿನ ಭವಿಷ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ನೆರವಾಗಲಿದೆ. ಇಂತಹ ಪ್ರಿಮಿಯಂ ಮಾಡುವ ಮೂಲಕ ಸಾರ್ವಜನಿಕರು ತಮಗೆ ಸಮಸ್ಯೆ ಆದಾಗ ನೆರವು ಲಭಿಸಲಿದೆ. ಕಂಪನಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಸೀನಿಯರ್ ಡಿವಿಜಿನಲ್ ,ಮ್ಯಾನೆಜರ್ ಸುರೇಶ ಕುಲಕರ್ಣೆ ಮಾತನಾಡಿ ಕಂಪನಿಯು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮನುಷ್ಯ ಆರೊಗ್ಯದಿಂದ ಇದ್ದರೆ ಸಂತೋಷದಿಂದ ಇರಲು ಸಾಧ್ಯ. ಇದನ್ನು ಮನಗಂಡು ನಮ್ಮ ಕಂಪನಿ ಈ ಕ್ಷೇತ್ರದತ್ತ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಿ.ಎಂ.ಡಿ ಕ್ಲಬ್ ಸದಸ್ಯ ದಿನೇಶ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment