ಯುವ ಸಂಘಟನೆ ಕ್ರೀಯಾಶೀಲವಾಗಿದ್ದರೆ ಮಾತ್ರ ಸಮಾಜ ಅಭಿವೃದ್ದಿ ಸಾಧ್ಯ. ಗ್ರಾಮೀಣ ಭಾಗದಲ್ಲಿ ಯುವಸಂಘಟನೆ ಸದೃಡವಾಗಿದ್ದಲ್ಲಿ ಗ್ರಾಮ ಅಭಿವೃದ್ದಿಯಾಗಲಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಕೆರಮನೆ ಕಚ್ಚರಕೆ ಶ್ರೀ ಮಹಾಗಣಪತಿ ಯುವಚೈತನ್ಯ ಅಭಿವೃದ್ದಿ ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಮೂಲಭೂತ ಸಮಸ್ಯೆ ನಡುವೆ ಸಾಧನೆ ಮಾಡುತ್ತಿದೆ. ಶಿಕ್ಷಣಕ್ಕೆ ಪ್ರತಿಯೋಬ್ಬರು ಹೆಚ್ಚಿನ ಒತ್ತು ನೀಡಲೇಬೇಕು. ಮಕ್ಕಳು ಶಿಕ್ಷಣ ಪಡೆದರೆ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ. ಯುವಕ ಸಂಘಗಳು ವಾರ್ಷಿಕೊತ್ಸವದ ಜೊತೆ ಸಮಾಜದ ಕುಂದುಕೂರತೆ ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ನನ್ನ ಕ್ಷೇತ್ರ ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆ. ಯಕ್ಷಗಾನ ಭಜನೆ ಜನಪದ ಕ್ಷೇತ್ರದಲ್ಲಿ ಅನೇಕ ಸಾಧಕರು ಸಾಧನೆ ಮಾಡಿದ್ದಾರೆ. ಇಂತಹ ಯುವಕ ಸಂಘಟನೆಗಳು ಅಂತಹ ಸಾಧಕರನ್ನು ಸೃಷ್ಟಿಸಿ ಅವರ ಪ್ರತಿಭೆ ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸಿ ಪೋತ್ಸಾಹಿಸುತ್ತಾ ಬಂದಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ನಮ್ಮ ತಾಲೂಕಿನಲ್ಲಿ 300ಕ್ಕೂ ಅಧಿಕ ಯುವಕ ಸಂಘಗಳಿದ್ದರೂ ಕೇವಲ ಬೆರಳೆಣಿಕೆಯಷ್ಟು ಸಂಘ ಕ್ರೀಯಾಶೀಲವಾಗಿದೆ. ಇದರ ಮಧ್ಯೆ ಗ್ರಾಮೀಣ ಭಾಗದ ಮಹಾಗಣಪತಿ ಸಂಘಟನೆ ಕಳೆದ 30 ವರ್ಷಕ್ಕೂ ಅಧಿಕ ಸಮಯದಿಂದ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಇವರ ಸಾಂಸ್ಕøತಿಕ ಆಸಕ್ತಿ ಹಾಗೂ ಸಂಘಟನೆಯ ಒಗ್ಗಟ್ಟು ಕಾರಣವಾಗಿದೆ. ಯುವ ಸಂಘಟನೆ ಉತ್ತಮವಾಗಿದ್ದರೆ ಆ ಗ್ರಾಮದ ಸಮಸ್ಯೆಗಳು ಕಡಿಮೆ ಇರುತ್ತದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಹೊಂದಿದರೆ ಮಾತ್ರ ಗ್ರಾಮದ ಅಭಿವೃದ್ದಿ ಸಾಧ್ಯ ಎಂದರು.
ಸಾಲ್ಕೋಡ್ ಗ್ರಾಮ ಪಂಚಾಯತ ಅಧ್ಯಕ್ಷ ಬಾಲಚಂದ್ರ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಖ್ಯಾತ ವೈದ್ಯರಾದ ಲಕ್ಷ್ಮೀಶ ಭಟ್, ಉದ್ದಿಮೆದಾರರಾದ ಜಯದತ್ತ ಹೆಗಡೆ, ರವಿ ನಾಯ್ಕ ಕ್ರಾಂತಿರಂಗ ಸಂಘಟನೆಯ ಸಚೀನ ನಾಯ್ಕ, ಶಾಲಾ ಮುಖ್ಯೊಪಧ್ಯಾಯರಾದ ಆರ್.ಎಸ್.ಹೆಗಡೆ, ರೋಹಿದಾಸ ನಾಯ್ಕ, ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು. ರಾಜು ನಾಯ್ಕ ಸ್ವಾಗತಿಸಿ, ಲಕ್ಷಣ ನಾಯ್ಕ ವರದಿ ವಾಚಿಸಿದರು. ಭೈರವೇಶ್ವರ ಹೆಗಡೆ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳು ಹಾಗೂ ಪೂರ್ವ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ “ಧರ್ಮಾಂಗದ ದಿಗ್ವಿಜಯ” ಲವಕುಶ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.
Leave a Comment