ಹೌದು ಆತ್ಮೀಯರೇ, ಇಂದಿನ ದಿನಗಳಲ್ಲಿ ಆರಕ್ಷರ ದುಡಿಮೆಗೆ ನಾವು ಒಂದು ಸಲಾಂ ಎನ್ನಲೆಬೇಕು. ಎಷ್ಟೋ ವ್ಯಕ್ತಿಗಳು ಪೊಲೀಸರಿಗೇನು ಕಮ್ಮಿ! ಆರಾಮಾಗಿ ಇರುತ್ತಾರೆ, ಎಲ್ಲಾ ಮುಗಿದ ಮೇಲೆ ಬರುತ್ತಾರೆ! ಅಂತೆಲ್ಲಾ ಟೀಕಿಸುತ್ತಿದ್ದ ವ್ಯಕ್ತಿಗಳಿಗೆ ಇಂದು ಆರಕ್ಷಕರ ಪಡೆ ಏನೆಂದು ಕರ್ತವ್ಯ ನಿಷ್ಠೆಯನ್ನು ಎತ್ತಿ ತೋರಿಸಿದೆ.
ವಿಶ್ವಾದ್ಯಂತ ಭಯ ಹುಟ್ಟಿಸಿರುವ ಕೊರೋನಾ ವೈರಸ್ ಈಗ ಕರ್ನಾಟಕದಲ್ಲೂ ಕಾಣಿಸಿಕೊಂಡು ತೀವ್ರ ಆತಂಕ ಸೃಷ್ಟಿಸಿದೆ. ಮಾರಣಾಂತಿಕ ಕೊರೋನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತೆ ಕುರಿತು ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳು ಹೆಚ್ಚಿನ ಕಾರ್ಯವಹಿಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣದಲ್ಲಿ ಯಾವುದೇ ಕೊರೋನಾ ಪ್ರಕರಣಗಳು ದಾಖಲಾಗದೆ ಇಲ್ಲಿಯ ಗೋಕರ್ಣ ಜನತೆಗೆ ಸಮಾಧಾನಕರ ಸಂಗತಿಯ ಸಂತಸ ತಂದಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಹಗಲು ರಾತ್ರಿ ಶ್ರಮಿಸುತ್ತಿರುವ ನಮ್ಮೂರ ವೈದ್ಯಾಧಿಕಾರಿಗಳಾದ ಡಾ. ಜಗದೀಶ ನಾಯ್ಕ ಹಾಗೂ ಅವರ ಸಿಬ್ಬಂದಿವರ್ಗದವರು ಮತ್ತು ಪಿ.ಎಸ್.ಐ ನೇತೃತ್ವದ ಪೋಲೀಸರ ತಂಡವು ಈ ವೈರಿ ಕೊರೋನಾ ಈ ಗ್ರಾಮಕ್ಕೆ ಬರದೇ ಇರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ದೇಶಾದ್ಯಂತ ಜಾರಿಯಲ್ಲಿರುವ “ಜನತಾ ಕರ್ಫೊ” 21 ದಿನದ ಆಚರಣೆಯಲ್ಲಿ ಗೋಕರ್ಣ ಪೊಲೀಸ್ ಇಲಾಖೆಯವರು ಈ ಊರಿನ ಎಲ್ಲಾ ಸುತ್ತಮುತ್ತಲಿನ ಸ್ಥಳಗಳಲ್ಲಿ ಸಂಚರಿಸುತ್ತಿದ್ದು, ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದು, ರಸ್ತೆಯಲ್ಲಿ ಅನವಶ್ಯಕವಾಗಿ ಸಂಚಾರ ಮಾಡುತ್ತಿದ್ದವರನ್ನು ನಿಲ್ಲಿಸಿ ಮನೆಯಲ್ಲಿಯೇ ಆರಾಮಾಗಿರಿ ಎಂದು ತಿಳಿಸುತ್ತಿದ್ದು, ಬಿಗಿ ಬಂದೋಬಸ್ತ್ ಕಾರ್ಯ ಕೈಗೊಂಡಿದ್ದಾರೆ.
ಸೆಕ್ಷನ್ 144 ಜಾರಿ ಆದೇಶದ ಮೇರೆಗೆ ಗೋಕರ್ಣ ಪೊಲೀಸ್ ಅಂಗಡಿಗಳಾದ ಮೆಡಿಕಲ್ , ಹಣ್ಣು ತರಕಾರಿ ಹಾಗೂ ಕಿರಾಣಿ ಸಾಮಗ್ರಿಯ ಖರೀದಿಗಾಗಿ ಜನ ದಟ್ಟಣಿಯಾಗದಂತೆ ಅಂಗಡಿ ಮಾಲಿಕರರಿಗೆ ಎಚ್ಚರಿಕೆ ನೀಡಿ ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸುದರ ಜೊತೆಗೆ ಕರ್ತವ್ಯ ನಿರ್ವಹಿಸಿ ಪರೀಕ್ಷಿಸುತಿದ್ದಾರೆ.
ಲಾಕಡೌನ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಗೋಕರ್ಣ ಪೊಲೀಸ್ ಠಾಣೆಯವರು ಗೋಕರ್ಣವನ್ನು ನಿಶಬ್ದದಿಂದಿಡಿಸಿ
ಊರನ್ನು ಹಾಗೂ ಜನರನ್ನು ರಕ್ಷಿಸುತ್ತಿದ್ದು, ದಿಕ್ಕು ದೆಸೆ ಇಲ್ಲದ ಅನಾಥ ಭಿಕ್ಷುಕರ ಹಸಿದ ಹೊಟ್ಟೆಗಳಿಗೆ ನೀರು ಆಹಾರ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಿ.ಎಸ್.ಐ ನವೀನ ನಾಯ್ಕ ಇವರು ಗ್ರಾಮದ ಜನರಿಗೆ ಮಾಸ್ಕ್ ಹಾಕಿಕೊಳ್ಳಿ, ಮನೆಯಲ್ಲೇ ಇರಿ, ಸರ್ಕಾರದ ಆದೇಶಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಧ್ವನಿ ವರ್ಧಕ ದ್ವನಿ ವರ್ಧಕ ಮೂಲಕ ಪ್ರಕಟಣೆ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಕೆಲಸದ ಅವಧಿ ಮುಗಿದ ಬಳಿಕವೂ ಗ್ರಾಮಸ್ಥರಲ್ಲಿ ಕೊರೋನಾ ವೈರಸ್ ಬಗ್ಗೆ ಪೊಲೀಸರಾದ ರಾಜೇಶ ನಾಯ್ಕ, ಶಿವಾನಂದ ಗೌಡ, ಹಾಗೂ ಅರುಣ ಮುಕ್ಕಣನವರ ಇವರು ಜಾಗೃತಿ ಮೂಡಿಸುತ್ತಿರುವ ಘಟನೆ ಕಂಡುಬಂದಿದೆ.
ಇದರ ಜೊತೆಗೆ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟದ ವ್ಯಕ್ತಿ ಹಾಗೂ ಮಾಲು ಸಮೇತ ವಶಪಡಿಸಿಕೊಂಡು ಯಶಸ್ವಿ ಸಾಧನೆಯನ್ನು ತೋರಿ, ಮುಂದೆ ಇಂತಹ ಘಟನೆಗಳು ಕಂಡುಬರದ ಹಾಗೆ ಕಾರ್ಯಾಚರಣೆಯಲ್ಲಿ ಗೋಕರ್ಣ ಪೊಲೀಸ್ ತಂಡ ತೊಡಗಿದ್ದಾರೆ.
ಜನತಾ ಕರ್ಪ್ಯೂ ಯಶಸ್ವಿಯಾಗಿದ್ದು, ವೈದ್ಯರು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದು, ಕೊರೋನಾ ಮುಕ್ತವಾನ್ನಾಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ನನ್ನ ವಯಕ್ತಿಕ ಅಭಿನಂದನೆಗಳು…
ಸರ್ಕಾರದ ನಿಯಮ ಪಾಲಿಸೋಣ
ಈ ವೈರಿ ಕೊರೋನಾ ಒಡಿಸೋಣ
ಶ್ರಮಿಕರಿಗೆ ಕೈ ಜೋಡಿಸೋಣ
ನಮ್ಮವರನ್ನು ರಕ್ಷಿಸೋಣ..
Leave a Comment