ಹಳಿಯಾಳ/ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವೆಸ್ಟ ಕೋಸ್ಟ ಕಾಗದ ಕಾರ್ಖಾನೆಯಲ್ಲಿ ಕಳೆದ ೨ ವರ್ಷಗಳಿಂದ ಕಾರ್ಮಿಕರ ವೇತನ ಒಪ್ಪಂದ ಆಗದೇ ಕಾರ್ಮಿಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾರ್ಮಿಕರ ವೇತನ ಒಪ್ಪಂದವನ್ನು ಮಾಡಿ ಬಡ ಕಾರ್ಮಿಕರಿಗೆ ನೇರವಾಗಬೇಕೆಂದು ದಾಂಡೇಲಿ ಸಮಗ್ರ ಹೋರಾಟ ಸಮೀತಿ ಅಧ್ಯಕ್ಷ ಅಕ್ರಮಖಾನ್ ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೈನ್ ಅವರಿಗೆ ಲಿಖಿತವಾಗಿ ಪತ್ರ ಬರೆದು ಆಗ್ರಹಿಸಿದ್ದಾರೆ.
ಅವರು ಬರೆದ ಪತ್ರದಲ್ಲಿ ದಾಂಡೇಲಿ ನಗರದಲ್ಲಿ ಕಳೆದ ಸುಮಾರ ಆರವತೈದು ವರ್ಷದಿಂದ ವೆಸ್ಟ ಕೋಸ್ಟ ಪೆಪರ್ ಮಿಲ್ಲ ದಾಂಡೇಲಿ ಕಾರ್ಖಾನೆಯು ನಡೆಯುತ್ತಿದೆ. ಇದಕ್ಕೆ ಅವಲಂಬಿತ ಕಾರ್ಮಿಕರು ಬೇರೆ ಬೇರೆ ರಾಜ್ಯದವರು ಈ ಕಾರ್ಖಾನೆಗೆ ನಂಬಿ ತಮ್ಮ ಜೀವನ ನಡೆಸುತ್ತಿದ್ದಾರೆ. ಈ ಕಾರ್ಖಾನೆಗೆ ದೊಡ್ಡ ಇತಿಹಾಸ ಇದೆ. ವೆಸ್ಟ ಕೋಸ್ಟ ಪೆಪರ್ ಮಿಲ್ಲ ದಾಂಡೇಲಿಯಲ್ಲಿ ಉತ್ಪಾದನೆಯಾಗುವ ಪೆಪರ್ ಅಂತರಾಷ್ಟಿçಯ ಮಟ್ಟದಲ್ಲಿ ಚಿರ ಪರಿಚಿತ ಆಗಿದೆ. ಅಲ್ಲದೇ ಈ ಕಾರ್ಖಾನೆಯು ಐ.ಎಸ್.ಓ ಪ್ರಮಾಣಿತ ಈ ಕಾರ್ಖಾನೆಯಲ್ಲಿ ಕಾರ್ಮಿಕರು ತಮ್ಮ ಸೇವೆಯನ್ನು ಅವಿರತವಾಗಿ ನೀಡುತಿದ್ದಾರೆ ಇದೆ ಸಂದರ್ಭದಲ್ಲಿ ಕಳೇದ ಮಾರ್ಚ ತಿಂಗಳಿನಿAದ ಕರೋನಾ ಮಾರಕ ಕಾಯಿಲೆಯು ಜಗತ್ತಿನಲ್ಲಿ ಪಸರಿಸಿದೆ. ಇದರಿಂದ ವಿವಿಧ ಕಾರ್ಖಾನೆಗಳ ಉತ್ಪಾದನೆ ಮತ್ತು ಮಾರಾಟಾ ಎಲ್ಲದಕ್ಕು ಅಡಚನೆ(ತೊಂದರೆ) ಯಾಗಿದ್ದು ನಾವು ಒಪ್ಪಿಕೊಳ್ಳುತ್ತೆವೆ.
ಆದರೆ ಕಾರ್ಮಿಕರು ನಂಬಿರುವ ಹೊಸ ಒಪ್ಪಂದದಿoದ ಕಾರ್ಮಿಕರ ವೇತನ ಹೆಚ್ಚಿಗೆ ಆಗುವ ವಿಶ್ವಾಸ ಎರಡು ವರ್ಷದಿಂದ ನಿರೀಕ್ಷೆಯಲ್ಲಿರುತ್ತಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಎಲ್ಲಾ ಸಾಮಗ್ರಿಗಳ ಬೆಲೆ ಸಹ ಗಣನೀಯವಾಗಿ ಏರಿದ್ದು ತಮಗೆ ತಿಳಿದ ವಿಷಯ ಇಂತಹ ಒಂದು ಸಂದಿಗ್ದ ಸ್ಥಿಥಿಯಲ್ಲಿ ಕಾರ್ಮಿಕರು ತಮ್ಮ ಕುಟುಂಬವನ್ನು ನಡೆಸಿಕೊಂಡು ಹೋಗಬೇಕಾಗಿದೆ. ಈ ಕರೊನಾದಿಂದ ಉತ್ಪಾದನೆ ಹಾಗೂ ಮಾರಾಟಾದಲ್ಲಿ ಆಗುವ ಲಾಭ ನಷ್ಟ ಮುಂದಿನ ವರ್ಷದಲ್ಲಿ ತಿಳಿಯುತ್ತದೆ. ಈ ಹಿಂದಿನ ವರ್ಷದಲ್ಲಿ ಗಣನೀಯ ಉತ್ಪಾದನೆ ಮತ್ತು ಮಾರಾಟಾ ಆಗಿದ್ದು ಇರುತ್ತದೆ.
ಸದ್ಯ ಕರೋನಾ ವೈರಸನಿಂದ ದೇಶದ ಕೈಗಾರಿಕೆಗಳಿಗೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೊದಿಜಿಯವರು ಉತ್ಪಾದನೆ ನಡೆಸುವ ಕೈಗಾರಿಕೆಗಳಿಗೆ ತೊಂದರೆಯಾಗ ಬಾರದು ಎಂಬ ಕಾರಣಕ್ಕೆ ಅನೇಕ ಯೋಜನೆಗಳನ್ನು ರೂಪಿಸಿ ಕೈಗಾರಿಕೆಗಳಿಗೆ ಸಹಾಯ ಮಾಡಿದ್ದು ಇರುತ್ತದೆ.
ಈ ಮೇಲಿನ ಎಲ್ಲಾ ವಿಷಯಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ ಕಾರಣ ಕಾರ್ಮಿಕರಿಗೆ ತಮ್ಮಿಂದ ವೇತನ ಒಪ್ಪಂದ ಆಗಬಹುದೆಂಬ ನಿರೀಕ್ಷೆಯಲ್ಲಿ ಕಾರ್ಮಿಕರು ಇರುತ್ತಾರೆ. ಈ ಹಿಂದೆ ಆದಂತಹ ಕಾರ್ಮಿಕ ಸಂಘಗಳ ಜಂಟಿ ಸಂದಾನ ಸಮಿತಿ ಮತ್ತು ಆಡಳಿತ ವರ್ಗದ ಮಧ್ಯ ಆದ ಒಪ್ಪಂದವು ಈಗಾಗಲೇ ಮುಗಿದು ಸುಮಾರು ಎರಡು ವರ್ಷ ಆಗಿದೆ. ಆದ್ದರಿಂದ ಕಾರ್ಮಿಕ ಸಮಸ್ಯಗಳನ್ನು ಅರಿತು ಕೊಂಡು ಕೂಡಲೇ ಕಾರ್ಮಿಕ ಸಂಘಗಳ ಸಂದಾನ ಸಮಿತಿಯವರನ್ನು ಕರೆದು ಒಪ್ಪಂದವನ್ನು ಮಾಡಿಕೊಳ್ಳಬೇಕು. ಮತ್ತು ಒಪ್ಪಂದವನ್ನು ಮಾಡಿಕೊಳ್ಳಲು ಅಡೆತಡೆಗಳಿದಲ್ಲಿ ಈ ಕೂಡಲೇ ಎಲ್ಲಾ ಕಾರ್ಮಿಕರಿಗೆ ತಾತ್ಪೂರ್ತಿಕ ಪರಿಹಾರವನ್ನು ಕೂಡಲೇ ನೀಡಬೇಕೆಂದು ತಮ್ಮಲ್ಲಿ ಈ ಮನವಿ ಮೂಲಕ ಕೇಳಿಕೊಳ್ಳುತ್ತೇನೆ. ಕಾರಣ ತಾವುಗಳು ಕಾರ್ಮಿಕರಿಗೆ ಸಹಾಯ ಮಾಡುವಿರಾಗಿ ನಂಬಿದ್ದೇನೆ ಎಂದು ಅಕ್ರಮಖಾನ್ ಹೇಳಿದ್ದಾರೆ.
Leave a Comment