ಹೊನ್ನಾವರ:ತಾಲೂಕಿನ ಗೇರಸೊಪ್ಪದ ವಿವ್ ಪೊಯಂಟ್ ಬಳಿ ಸ್ವಿಪ್ಟ ಕಾರು ಮತ್ತು ಇರ್ಟಿಗಾ ಕಾರಿನ ನಡುವೆ ಮುಖಾಮುಖಿ ಅಫಘಾತ ಸಂಭವಿಸಿದ್ದು, ಸ್ವಿಪ್ಟ ಕಾರಿನಲ್ಲಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇರ್ಟಿಗಾ ಕಾರು ಹೊನ್ನಾವರದಿಂದ ಗೇರಸೊಪ್ಪ ಮಾರ್ಗದಲ್ಲಿ ಹೋಗುತ್ತಿರುವಾಗ ಎದುರಗಡೆಯಿಂದ ಮಾವಿನಗುಂಡಿಯಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಸ್ವಿಪ್ಟ ಕಾರಿನ ಚಾಲಕನ ಅಜಾಗರುಕತೆ ಚಾಲನೆಯಿಂದ ಡಿಕ್ಕಿ ಸಂಭವಿಸಿದ್ದು, ರಕ್ಷಣೆಗಾಗಿ ಸ್ಥಳಿಯರು ದಾವಿಸಿದಾಗ ಸ್ವಿಪ್ಟ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.

ಸ್ವಿಪ್ಟ ವಾಹನದಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿ ಕೊಂಡು ಸಾಗರದಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದು, ಒಂದು ಗೋವು ಮೃತಪಟ್ಟಿದೆ.ವಾಹನದಲ್ಲಿ ಮೂರು ಜನ ಗೋ ಕಳ್ಳರಿದ್ದು, ಇಬ್ಬರು ಅಫಘಾತವಾದ ಸಂಧರ್ಭದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಿಯರು ಓರ್ವನನ್ನು ಸೆರೆಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.ಬಂಧಿತ ಆರೋಪಿಹೊನ್ನಾವರ ತಾಲೂಕಿನ ವಲ್ಕಿ ಗ್ರಾಮದ ನಿವಾಸಿ ವಾಸಿಮ್ ಬಂದಿತ ಆರೋಪಿಯಾಗಿದ್ದು, ಮೂಲತಃ ಭಟ್ಕಳ ಬಂದರ್ ರೋಡ ನಿವಾಸಿ ಸುಲೇಮಾನ ಮಿರ್ಜೇಕರ (36) ಎಂದು ತಿಳಿದುಬಂದಿದ್ದು ಹಲವು ವರ್ಷಗಳಿಂದ ಹೊನ್ನಾವರದಲ್ಲಿ ವಾಸ್ತವ್ಯ ಇದ್ದು ಇದೇ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಸ್ಥಳಿಯರು ಮಾಹಿತಿ ನಿಡಿದ್ದಾರೆ.ಬಂದಿತನಿಂದ ಸ್ವಿಪ್ಟ ವಾಹನ ವಶಪಡಿಸಿಕೊಂಡಿದ್ದಾರೆ.
ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment