ಖಾನಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೆ ಆರ್ಭಟಿಸುತ್ತಿದೆ. ತಾಲೂಕಿನ ಪ್ರಮುಖ ಸ್ಥಳಗಳಾದ ಖಾನಾಪುರ, ನಂದಗಡ, ಬೀಡಿ, ಕಕ್ಕೇರಿ ಜಾಂಬೋಟಿ ಸೇರಿದಂತೆ ಗೋವಾ ರಾಜ್ಯದ ಗಡಿಭಾಗದ ಬಹುತೇಕ ಗ್ರಾಮಗಳಲ್ಲಿ ಮಳೆಯ ಅಬ್ಬರ ಎರಡು ದಿನಗಳಿಂದ ಹೆಚ್ಚಾಗಿದೆ. ಜೋತೆಗೆ ತಾಲೂಕಿನ ನದಿ ಮತ್ತು ಹಳ್ಳಗಳು ಅಪಾಯದ ಮಟ್ಟದ ಮೀರಿ ತುಂಬಿ ಹರಿಯುತ್ತಿವೆ.
ಕರ್ನಾಟಕ ಸರಕಾರದ ಹವಾಮಾನ ಇಲಾಖೆ ವರದಿ ಪ್ರಕಾರ ನಿನ್ನೆಯ ದಿನ ಶನಿವಾರದಂದು ಖಾನಾಪುರ ಪಟ್ಟಣದ ಸುತ್ತಲೂ 128.2 ಮಿ.ಮೀ ನಾಗರಗಾಳಿ ಭಾಗ 58.4 ಮಿ.ಮೀ, ಬೀಡಿ ಭಾಗ 80.2 ಮಿ.ಮೀ, ಕಕ್ಕೇರಿ ಭಾಗ 93.4 ಮಿ.ಮೀ, ಅಸೋಗಾ ಭಾಗ 157.2.ಮಿ.ಮೀ ಗುಂಜಿ ಭಾಗ 128 ಮಿ.ಮೀ, ಲೋಂಡಾ ರೇಲ್ವೆ ಭಾಗ 152 ಮಿ.ಮೀ, ಲೋಂಡಾ ಪಿಡಬ್ಲ್ಯೂಡಿ ಭಾಗ 145.8, ಜಾಂಬೋಟಿ 166.8ಮಿ.ಮೀ, ಹಾಗೂ ಕಣಕುಂಬಿ ಭಾಗದಲ್ಲಿ 236 ಮೀ. ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಣಕುಂಬಿ ಭಾಗದಲ್ಲಿ ಈ ವರ್ಷದಲ್ಲಿ ಶನಿವಾರ ದಿನದಂದು 236ಮಿ.ಮೀ ಮಳೆ ಸುರಿದಿದ್ದರಿಂದ, ಅತಿ ಹೆಚ್ಚು ಮಳೆ ಆದ ಕಾರಣ ಖಾನಾಪುರ ಪಟ್ಟಣಕ್ಕೆ ಸಮೀಪವಿರುವ ಅಸೋಗಾ ಸೇತುವೆ ಸಂಪೂರ್ಣ ಭರ್ತಿಯಾಗಿ ರಸ್ತೆ ಸಂಚಾರ ಬಂದ ಆಗಿದೆ. ಖಾನಾಪೂರ ಪಟ್ಟಣದ ಮಲಪ್ರಭಾ ನದಿಯ ಸೇತುವೆಯಲ್ಲಿ ನೀರಿನ ಮಟ್ಟ ಹೆಚ್ಚಿದ್ದರಿಂದ, ನದಿ ಸುತ್ತಲೂ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ತಾಲೂಕಾಡಳಿತ ಸೂಚಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
Leave a Comment