ಯಲ್ಲಾಪುರ: ಸರಕಾರ, ವೈದ್ಯರು ಕೋರೋನಾ ವೈರಸ್ ಹರಡದಂತೆ ಹರಸಾಹಸ ಪಟ್ಟು ಸೋಂಕೀತರನ್ನು ಗುರುತಿಸಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರು ಕೋರೋನಾ ವೈರಸ್ ಕುರಿತು ಗಂಭೀರವಾಗಿ ಪರಿಗಣಿಸದೇ ಮಾಸ್ಕ ಧರಿಸದೇ ಬೇಕಾಬಿಟ್ಟಿ ತಿರುಗಾಡುವದರಿಂದ ಅದರ ನಿಯಂತ್ರಣ ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ತಹಶೀಲ್ದಾರ ಗಣಪತಿ ಶಾಸ್ತಿç ಹೇಳಿದರು.
ಅವರು ಮಂಗಳವಾರ ತಾಲೂಕಾ ಕಛೇರಿಯಲ್ಲಿ ಕೊವಿಡ್-೧೯ ಕುರಿತಾಗಿ ಕರೆದಿದ್ದ ಧಾರ್ಮಿಕ ಮುಖಂಡರ ಸಭೆಯಲ್ಲಿ ಮಾತನಾಡಿ ಕೆಲವೊಂದು ಪ್ರದೇಶದಲ್ಲಿ ಕೊರೋನಾ ಅಟ್ಟಹಾಸ ಅಧಿಕವಾಗಿದ್ದರೂ ಕೂಡಾ ಜನರು ಸರಿಯಾಗಿ ಸ್ಪಂದಿಸದೇ ಉದಾಸೀನದಿಂದ ವರ್ತಿಸುತ್ತಿದ್ದಾರೆ. ಕೊರೊನಾ ವೈರಸ್ ನ ಲಕ್ಷಣವಿಲ್ಲದಿದ್ದರೂ ಧೀüರ್ಘಕಾಲಿನ ಕಾಯಿಲೆಯಿಂದ ಬಳಲುತ್ತಿರುವವರು, ವೃದ್ದರು, ಗರ್ಭಿಣಿಯರು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲೆಬೇಕು.ಇಂತಹ ಸಮಸ್ಯೆಗಳಿರುವ ಸುಮಾರು 5000 ಜನರ ಪಟ್ಟಿ ನಮ್ಮ ವೈದ್ಯರ ತಂಡದವರ ಬಳಿ ಇದೆ ಅದರಂತೆ ಅವರೆನ್ನಾಲ್ಲಾ ಕೊರೊನಾ ರ್ಯಾಪಿಡ್ ಟೆಸ್ಟಗೊಳಪಡಿಸಲಾಗುವದು. ಯಾವದೇ ಹಿಂಜರಿಕೆಯಿಲ್ಲದೇ, ತಪ್ಪು ಕಲ್ಪನೆಗೊಳಗಾಗದೇ ಸ್ವಯಂಪ್ರೇರಿತರಾಗಿ ತಪಾಸಣೆ ಗೊಳಗಾಗುವಂತೆ ಅವರ ಕುಟುಂಬದವರು ಸಹಕರಿಸಬೇಕು ಎಂದರಲ್ಲದೇ ಎಲ್ಲಾ ಧರ್ಮದ ಮುಖಂಡರು ತಮ್ಮ ಸಮುದಾಯದ ಜನರಿಗೆ ಕೊರೋನಾ ತಪಸಣೆಗೊಳಗಾಗುವಂತೆ ಮನವರಿಕೆಯಾಗುವಂತೆ ಜಾಗೃತಿ ಮೂಡಿಸಬೇಕು ಎಂದರು.

ತಾಲೂಕಾ ವೈದ್ಯಾಧಿಕಾರಿ ಡಾ ನರೆಂದ್ರ ಪವಾರ ಮಾತನಾಡಿ ತಾಲೂಕಾ ಆರೋಗ್ಯ ಕೇಂದ್ರದಿAದ ಪಟ್ಟಣವ್ಯಾಪ್ತಿ ಹಾಗೂ ಪ್ರತಿಯೊಂದು ಗ್ರಾ.ಪಂ ಗಳಲ್ಲಿ ನಾಲಿಗೆ ದ್ರವ ಪರೀಕ್ಷೆ ತಪಾಸಣೆಯನ್ನು ಕ್ಯಾಂಪ್ ಮೂಲಕ ಅಯೋಜಿಸಲಾಗುತ್ತಿದ್ದರೂ ಜನರು ಸೂಕ್ತ ಸ್ಪಂದನೆ ನೀಡದೇ ಕೊರೋನಾ ವೈರಸ್ ಕುರಿತು ಅತಿರಂಜಿತ ತಪ್ಪು ಕಲ್ಪನೆಯಿಂದ ವೈದ್ಯ ಆಶಾ ಕಾರ್ಯಕರ್ತರ ತಂಡಕ್ಕೆ ಹೀನಾಮಾನವಾಗಿ ಬೈಯ್ದು ಕಳಿಸುತ್ತಿರುವದು ಹಾಗೂ ತಪಾಸಣೆಗೆ ಬಾರದಿರುವದು ಒಳ್ಳೆಯ ಬೆಳವಣಿಗೆಯಲ್ಲ. ಒಂದುವೇಳೆ ಕೋರೋನಾ ಪೀಡಿತರು ಅಧಿಕ ಸಂಖ್ಯೆಯಲ್ಲಿ ಹೆಚ್ಚಾದರೆ ಇಲ್ಲಿ ಸಕಲ ಸೌಲಭ್ಯವುಳ್ಳ ಸುಸಜ್ಜಿತ ಆಸ್ಪತೆಯೂ ಇಲ್ಲ ಆದ್ದರಿಂದ ಹರಡದಂತೆ ನಿಯಂತ್ರಣದ ಮುನ್ನಚ್ಚರಿಕೆ ಕೈಗೊಳ್ಳುವ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕು ಎಂದರಲ್ಲದೇ ಸೋಂಕಿತರೆಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಾಗಬೇಕು ಅಂತಿಲ್ಲ ವೈದ್ಯರ ಮಾರ್ಗದರ್ಶನದಲ್ಲಿ ಮನೆಯಲ್ಲೂ ಉಳಿದು ಚಿಕಿತ್ಸೆ ಪಡೆಯಬಹುದಾಗಿದೆ. ವೈರಸ್ ಪತ್ತೆಯಾದ ಕ್ಷಣದಿಂದಲೇ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ತಪಾಸಣೆಗೆ ಹೆದರಿ ಮುಚ್ಚಿಟ್ಟರೆ ಇದು ಮಾರಣಾಂತಿಕವಾದ ಕಾಯಿಲೆಯಾಗಿದೆ ಎಂದರು.
ತಾಪA ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಪಪಂ ಮುಖ್ಯಾಧಿಕಾರಿ ಅರುಣ ನಾಯ್ಕ, ಪ್ರಮುಖರಾದ ಬಾಬಾ ಸಾಬ್ ಅಲ್ಲನ್, ನಮಿತಾ ಬಿಡಿಕರ್, ರಾಮು ನಾಯ್ಕ,ನಾರಾಯಣ ನಾಯ್ಕ, ವಿಲ್ಸನ್ ಪರ್ನಾಂಡಿಸ್,ಮುAತಾದವರು ಇದ್ದರು.
Leave a Comment