ಹುಬ್ಬಳ್ಳಿ:- ಮಧ್ಯರಾತ್ರಿ ಡಬಲ್ ಮರ್ಡರ್ ಆಗುವ ಮೂಲಕ ಟ್ವಿನ್ ಸಿಟಿ ಹುಬ್ಬಳ್ಳಿ ಮತ್ತೆ ಸದ್ದು ಮಾಡಿದೆ. ಮಧ್ಯರಾತ್ರಿ ಡಬಲ್ ಮರ್ಡರ್ ಗೆ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದ ಘಟನೆಯೊಂದು ಹುಬ್ಬಳ್ಳಿ ಗೋಪನಕೊಪ್ಪದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅಪರಿಚಿತ ದುಷ್ಕರ್ಮಿಗಳು ಇಬ್ಬರು ಯುವಕರನ್ನ ಕೊಚ್ಚಿಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುನಾಥ_ಕಬ್ಬಿನ್ ಹಾಗೂ ನಿಯಾಜ್ ಕೊಲೆಯಾದ ಯುವಕರು.
ಮಾರಾಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಕೊಲೆ ಮಾಡಲಾಗಿದ್ದು, ಕೇಶ್ವಾಪುರ_ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇನ್ನೂ ಹಳೆ ವೈಷಮ್ಯದ ಹಿನ್ನೆಲೆ ಇಬ್ಬರು ಯುವಕರ ಕೊಲೆ ಶಂಕೆ ವ್ಯಕ್ತವಾಗಿದ್ದು,ತನಿಖೆಯ ಬಳಿಕವೇ ಕೊಲೆಯ ಹಿಂದಿನ ಸತ್ಯಾಸತ್ಯತೆ ತಿಳಿಯಲಿದೆ.
Leave a Comment