• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಂಗಭೂಮಿ ಮತ್ತು ಬೆಳ್ಳಿತೆರೆಯ ಭರವಸೆಯ ಪ್ರತಿಭೆ ಕಿರಣ ನಾಯ್ಕ

September 6, 2020 by Lakshmikant Gowda Leave a Comment

ಬೆಳ್ಳಿತೆರೆಯಲ್ಲಿ ಮಿನುಗುವ ತಾರೆಗಳಿಗೆ ಪ್ರತಿಭೆಯ ಜೊತೆ ಅದೃಷ್ಟದ ಬಲವೂ ಬೇಕು ಆದರೆ ಅಪ್ಪಟ ಪ್ರತಿಭಾವಂತರನ್ನು ಮಾತ್ರ ಸೆಳೆಯುವ, ವೇದಿಕೆ ಕಲ್ಪಿಸುವ ರಂಗಭೂಮಿ ಮಾತ್ರ ಬೆಳ್ಳಿತೆರೆಗೆ ಅಪ್ಪಟ ಪ್ರತಿಭೆಗಳನ್ನೇ ಕೊಡುಗೆಯಾಗಿ ಕೊಡುತ್ತಾ ಬಂದಿದೆ ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ ಅದಕ್ಕೊಂದು ಹೊಸ ಸೇರ್ಪಡೆ ಕಿರಣ ನಾಯ್ಕ.

watermarked 04 18 3


ಹುಟ್ಟಿದ್ದು ಸಾಗಾರದ ತಾಳಗುಪ್ಪಾ ಬೆಳೆದಿದ್ದು ಓದಿದ್ದು ಎಲ್ಲಾ ಶರಾವತಿಯ ಒಡಲು ಹೊನ್ನಾವರದಲ್ಲಿಯೇ. ತಾರೀಬಾಗಿಲ ಪ್ರಾಥಮಿಕ ಶಾಲೆ, ಸೈಂಟ್ ಅಂಥೋನಿ ಪ್ರೌಢಶಾಲೆ, ಎಸ್.ಡಿ.ಎಮ್ ಕಾಲೇಜು ಶೈಕ್ಷಣಿಕ ಬದುಕಿಗೆ ಬುನಾದಿಯಾದರೆ ಪ್ರಖ್ಯಾತ ಕಲಾ ಶಾಲೆ ಹೆಗ್ಗೋಡಿನ ನೀನಾಸಂ ಕಿರಣ್ ಪ್ರತಿಭೆಗೆ ಸಾಣೆ ಹಿಡಿದು ತಿಕ್ಕಿ ತೀಡಿ ಹೊಳಪನ್ನು ನೀಡಿದೆ ಎನ್ನುವುದನ್ನು ಮರೆಯುವಂತಿಲ್ಲ. ಕುರುಕ್ಷೇತ್ರ, ಹಂಸದಮಯಂತಿ, ಬಿರುಕು, ಜಂಟಲಮ್ಯಾನ್ ಆಪ್ ವೈಟುಕೆ, ಸತ್ರು ಅಂದ್ರೆ ಸಾಯ್ತಾರೆ ನಾಟಕಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಂತರ ವಿನ್ಯಾಸಕಾರರಾಗಿಯೂ ಶಾಕುಂತಲಾ, ಸಂಸಾರದಲ್ಲಿ ಸನಿದಪ, ಕಂತು ಸೇರಿದಂತೆ ಹಲವಾರು ನಾಟಕಗಳಲ್ಲಿ ದುಡಿದಿದ್ದಾರೆ. ರಂಗಭೂಮಿಯ ಖ್ಯಾತ ನಿರ್ದೇಶಕರುಗಳಾದ ಚಿದಂಬರ್ ರಾವ್ ಜಂಬೆ, ಬಿ.ವಿ ಕಾರಂತ, ನಟರಾಜ ಹೊನ್ನವಳ್ಳಿ, ಸುರೇಶ ಆನಗಳ್ಳಿ, ರಘುನಂದನ್, ಇಕ್ಬಾಲ್ ಅಹಮದ್ ಮುಂತಾದವರ ಗರಡಿಯಲ್ಲಿ ಪಳಗಿದ ತಾಲೂಕಿನ ಪ್ರತಿಭೆ ನಂತರ ಅವಕಾಶವನ್ನರಸಿ ಹೊರಟಿದ್ದು ಮಾಯಾನಗರಿ ಬೆಂಗಳೂರಿಗೆ.
ಜೊತೆ ಜೊತೆಯಲಿ, ಅಳಿಗುಳಿಮನೆ, ಕಿನ್ನರಿ ಶುಭಮಂಗಳ ಮುಂತಾದ ಜನಪ್ರೀಯ ಕಿರುತೆರೆ ದಾರವಾಹಿಗಳಲ್ಲಿ, ಜನುಮದ ಜೋಡಿ, ಜಟ್ಟ, ತುಂಡ ಹೈಕ್ಳ ಸಹವಾಸ, ತಾಯಿಗೆ ತಕ್ಕ ಮಗ, ಯುವರತ್ನ, ಅವನೇ ಶ್ರೀಮನ್ನಾರಾಯಣ, ದೇವರ ನಾಡಲ್ಲಿ ಮುಂತಾದ ಸಿನೆಮಾಗಳಿಗೂ ಬಣ್ಣ ಹಚ್ಚಿರುವ ಇವರು ಈಗಲೂ ರಂಗಭೂಮಿಯ ಸೆಳೆತವನ್ನು ಬಿಟ್ಟುಕೊಡದೇ ಥಿಯೇಟರ್ ತತ್ಕಾಲ್ ತಂಡವನ್ನು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಪ್ರತಿಭೆಯಿಂದಲೇ ಪ್ರಕಾಶಿಸುತ್ತಿರುವ ಕಿರಣ್ ತಾಲೂಕಿಗೊಂದು ಹೆಮ್ಮೆ.

ಕಿರಣ ನಾಯ್ಕ.
ಕಿರಣ ನಾಯ್ಕ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News, Movies, Trending Tagged With: ಎಸ್.ಡಿ.ಎಮ್ ಕಾಲೇಜು, ಕಿರಣ್ ಪ್ರತಿಭೆಗೆ ಸಾಣೆ ಹಿಡಿದು, ಕುರುಕ್ಷೇತ್ರ, ಜಂಟಲಮ್ಯಾನ್ ಆಪ್ ವೈಟುಕೆ, ತಾರೀಬಾಗಿಲ ಪ್ರಾಥಮಿಕ ಶಾಲೆ, ಬಿರುಕು, ಬೆಳ್ಳಿತೆರೆಗೆ ಅಪ್ಪಟ ಪ್ರತಿಭೆ, ಶರಾವತಿಯ ಒಡಲು, ಶೈಕ್ಷಣಿಕ ಬದುಕಿಗೆ ಬುನಾದಿ, ಸತ್ರು ಅಂದ್ರೆ ಸಾಯ್ತಾರೆ ನಾಟಕ, ಸತ್ರು ಅಂದ್ರೆ ಸಾಯ್ತಾರೆ ನಾಟಕಕುರುಕ್ಷೇತ್ರ, ಸಾಗಾರದ ತಾಳಗುಪ್ಪಾ, ಸೈಂಟ್ ಅಂಥೋನಿ ಪ್ರೌಢಶಾಲೆ, ಹಂಸದಮಯಂತಿ, ಹೊಸ ಸೇರ್ಪಡೆ ಕಿರಣ ನಾಯ್ಕ.

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...