ಧನ್ಯಕಾ, ಛತ್ರ, ಕುಸ್ತಂಬರ್, ವಿತುನಿಕ, ವಿಷನಗ್ರ,ಹೃದಯಗಂಧ,ಧನಿಯಾ,ಕೊತ್ತಮಿಲ್ಲಿ, ಕೊತ್ತಿಮೀರಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೊತ್ತಂಬರಿ ಸೊಪ್ಪಿಗೆ 3000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದ್ದು,ನಿತ್ಯವೂ ಆಹಾರದಲ್ಲಿ ಬಳಸುವ ರುಚಿಕರ ಹಾಗೂ ಸುವಾಸನೆಯುಕ್ತ ಮೂಲಿಕೆ.ಇದು ಅಡಿಗೆ ಮನೆಯಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದೆ. ಇದರ ಒಡಲಲ್ಲಿ ಅಪಾರ ಔಷಧೀಯ ಗುಣಗಳನ್ನು ತುಂಬಿಕೊಂಡಿದೆ.ಇದನ್ನು ಪ್ರಪಂಚದಲ್ಲಿ ಎಲ್ಲಾ ಕಡೆ ಅಡುಗೆಯಲ್ಲಿ ಬಳಸುತ್ತಾರೆ.
ಪ್ರತಿ ದಿನವು ಕೊತ್ತಂಬರಿ ಸೊಪ್ಪನ್ನು ಅಡಿಗೆಯಲ್ಲಿ ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಒಂದು ಲೋಟ ಮಜ್ಜಿಗೆಯಲ್ಲಿ 1 ಚಮಚ ಕೊತ್ತಂಬರಿ ಸೊಪ್ಪಿನರಸ, 1/4 ಚಮಚ ಜೀರಿಗೆ ಚೂರ್ಣ 1/4 ಚಮಚ, ಕರಿಮೆಣಸಿನ ಚೂರ್ಣ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ,ದೇಹಕ್ಕೆ ಬೇಕಾಗಿರುವ ವಿಟಮಿನ್ಸ್, ಪೋಷಕಾಂಶಗಳು ದೊರೆಯುತ್ತದೆ. ಜೀರ್ಣಕ್ರಿಯೆ ಸುಗುಮಗೊಂಡು, ದೇಹವನ್ನು ತಂಪಾಗಿಡುತ್ತೆ, ಗರ್ಭಿಣಿ ಸ್ತ್ರೀಯರು ಒಂದು ಲೋಟ ಉಗರು ಬೆಚ್ಚಗಿನ ನೀರಿಗೆ, 2 ಚಮಚ ಕೊತ್ತಂಬರಿ ಸೊಪ್ಪಿನರಸ, 1 ಚಮಚ ನಿಂಬೆಹಣ್ಣಿನ ರಸ, ಚಿಟಿಕೆ ಉಪ್ಪು ಕಲಸಿ ಕುಡಿದರೆ, ವಾಕರಿಕೆ, ಹೊಟ್ಟೆ ತೊಳಸುವಿಕೆ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಒಂದು ಲೋಟ ಮೊಸರಲ್ಲಿ 2-3 ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಕಲಸಿ ಕುಡಿದರೆ, ಹೊಟ್ಟೆಯಲ್ಲಿನ ಉರಿ ಸಂಕಟ ಶಮನವಾಗುತ್ತೆ. ಕೊತ್ತಂಬರಿ ಸೋಪಿನ ಎಲೆಗನ್ನು ಜಗಿದು ತಿನ್ನುವುದರಿಂದ ಬಾಯಿ ಹುಣ್ಣು,ದುರ್ವಾಸನೆ ವಾಸಿಯಾಗುತ್ತೆ.ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತೆ. ದಿನವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 50ml ಕೊತ್ತಂಬರಿ ಸೊಪ್ಪಿನ ರಸವನ್ನು ಕುಡಿಯುತ್ತಾ ಬಂದಲ್ಲಿ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿ, ಮಧುಮೇಹ ಅತೋಟಿಗೆ ಬರುತ್ತೆ.ಮಲಬದ್ಧತೆ ನಿವಾರಣೆಯಾಗುತ್ತೆ.ಮೂತ್ರಪಿಂಡದಲ್ಲಿನ ಕಲ್ಲುಗಳು ಕರಗುತ್ತೆ.ಮೂತ್ರ ಸಮಸ್ಯೆಗಳು ದೂರವಾಗುತ್ತೆ.(ಕೊತ್ತಂಬರಿ ಸೊಪ್ಪಿನ ಕಷಾಯ ಮಾಡಿ ಕುಡಿದರೂ ಮಧುಮೇಹ ಅತೋಟಿಗೆ ಬರುತ್ತೆ) ಕೊತ್ತಂಬರಿ ಸೊಪ್ಪಿನ ರಸಕ್ಕೆ ಶುಂಠಿ ರಸ ಕಲಸಿ ಕುಡಿದರೆ ಶ್ವಾಸಕೋಶ ಸಮಸ್ಯೆಗಳು ದೂರವಾಗುತ್ತೆ.ಮಲ ಮೂತ್ರಗಳ ವಿಸರ್ಜನೆ ಸುಗುಮವಾಗುತ್ತೆ. ಧನಿಯಾ ಚೂರ್ಣ 1 ಚಮಚಕ್ಕೆ, 1 ಚಮಚ ಕೆಂಪು ಕಲ್ಲು ಸಕ್ಕರೆ ಕಲಸಿ ಸೇವಿಸಿದರೆ, ವಾತ ಪಿತ್ತ ಕಫ ನಿವಾರಣೆಯಾಗುತ್ತೆ.
ಧನಿಯಾ ನೆನಸಿದ ನೀರನ್ನು ಕುಡಿಯುವುದರಿಂದ ಪೈತಕ ನಿವಾರಣೆಯಾಗುತ್ತೆ. ಧನಿಯಾ ಚೂರ್ಣ 1/2 ಚಮಚ, ಒಣ ಶುಂಠಿ ಚೂರ್ಣ 1/2 ಚಮಚ,ನಾಟಿ ಹಸುವಿನ ತುಪ್ಪ 1 ಚಮಚ ಅನ್ನದಲ್ಲಿ ಕಲಸಿ ತಿಂದರೆ ಹೊಟ್ಟೆಯಲ್ಲಿನ ಗ್ಯಾಸ್ ನಿವಾರಣೆಯಾಗುತ್ತೆ.ಮಲಬದ್ಧತೆ ದೂರವಾಗಿ, ಮಲ ಸರಾಗವಾಗುತ್ತೆ. ಧನಿಯ ಚೂರ್ಣ ಒಂದು ಭಾಗ, ಎರಡು ಭಾಗ ಜೀರಿಗೆ ಚೂರ್ಣಕ್ಕೆ ಸಮನಾಗಿ ಬೆಲ್ಲ ಸೇರಿಸಿ, ಒಂದು ದಪ್ಪ ತಳದ ಪಾತ್ರೆಗೆ ಹಾಕಿ, ಅದಕ್ಕೆ ನೀರನ್ನು ಹಾಕಿ ಒಳೆಯ ಮೇಲಿಟ್ಟು, ಲೇಹ ಮಾಡಿಕೊಂಡು, ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು 1 ಚಮಚದಂತೆ ಸೇವಿಸಿದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತೆ. ಧನಿಯಾ ಬೀಜದ ಕಷಾಯವನ್ನು,ಸಕ್ಕರೆ ಬೆರಸಿದ ಹಾಲಿನಲ್ಲಿ ಕಲಸಿ ಕುಡಿದರೆ ಸುಖ ನಿದ್ರೆ ಬರುತ್ತೆ. ಧನಿಯ1/2 ಚಮಚ, ಗಸಗಸೆ 1 ಚಮಚ, ಬಾದಾಮಿ 3-4 ರಾತ್ರಿಯೆಲ್ಲ ನೀರಿನಲ್ಲಿ ನೆನಸಿಟ್ಟು, ಬೆಳಿಗ್ಗೆ (ಬಾದಾಮಿ ಸಿಪ್ಪೆ ಸುಲಿದು) ನುಣ್ಣಿಗೆ ಅರೆದು ಉಗರು ಬೆಚ್ಚಗಿನ ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ, ಅದಕ್ಕೆ ಒಂದು ಚಮಚ ಜೇನುತುಪ್ಪ ಅಥವಾ ಕಲ್ಲು ಸಕ್ಕರೆ ಕಲಸಿ ಕುಡಿದರೆ, ಪುರುಷರಲ್ಲಿ ವೀರ್ಯಾಣು ವೃದ್ಧಿಯಾಗಿ ನಪುಂಷಕತ್ವ ದೂರವಾಗಿ, ಲೈಂಗಿಕ ಶಕ್ತಿ ಹೆಚ್ಚುತ್ತೆ,ದೇಹ ಬಲಗೊಳ್ಳುತ್ತೆ. ಗಂಟಲು ನೋವಿದ್ದಾಗ ಧನಿಯ ಬಾಯಲ್ಲಿ ಹಾಕಿಕೊಂಡು ಜಗಿದು ರಸ ನುಂಗುತ್ತಿದ್ದರೆ, ಗಂಟಲು ನೋವು ನಿವಾರಣೆಯಾಗುತ್ತೆ. ಧನಿಯ ಹಾಗೂ ಲಾವಂಚದ ಬೇರನ್ನು ಚೂರ್ಣಮಾಡಿ ನೀರಲ್ಲಿ ಹಾಕಿ ಚೆನ್ನಾಗಿ ಕುದಿಸಿ ಉಗರು ಬೆಚ್ಚಗಾದಾಗ ಸೋಸಿ ಕುಡಿದರೆ ಅತಿಸಾರಭೇದಿ ನಿಲ್ಲುತ್ತೆ.
Leave a Comment