ಕೆಲ ತಿಂಗಳುಗಳ ಹಿಂದೆ ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿ ಮೋಟೆಕೇರಿಯಲ್ಲಿ ಶ್ರೀ ಅಣ್ಣಯ್ಯ ಸಣಕೂಸ ಗೌಡ ಇವರು ಸುಮಾರು 48 ಜನ ಕೂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ 75 ವರ್ಷ ಇತಿಹಾಸದ ಮನೆಯು ಅಗ್ನಿ ದುರಂತಕ್ಕೆ ಸಂಪೂರ್ಣ ಆಹುತಿಯಾಗಿದ್ದು ಬಡಕುಂಟಬ ಮನೆಯನ್ನು ಕಳೆದುಕೊಂಡಿತ್ತು.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ತಾತ್ಕಾಲಿಕ ನಿರ್ವಹಣೆಗೆ ಬಟ್ಟೆ ಬರೆ ಸೇರಿದಂತೆ 50 ಸಾವಿರ ರೂಪಾಯಿ ನಗದು ಹಣವನ್ನು ವಯಕ್ತಿಕವಾಗಿ ನೀಡಲಾಗಿತ್ತು ಹಾಗೂ ಸರ್ಕಾರದಿಂದ ಹೆಚ್ಚಿನ ಪರಿಹಾರ ಮಂಜೂರು ಮಾಡಿಸುವುದಾಗಿ ಭರವಸೆ ನೀಡಲಾಗಿತ್ತು.
ಅದರಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿಸಿ ಆದೇಶ ಪ್ರತಿಯನ್ನು ಇಂದು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
Leave a Comment