ಯಲ್ಲಾಪುರ:
ರಾಜ್ಯ ಉತ್ತಮಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಭಾಸ್ಕರ ನಾಯ್ಕ ಅವರನ್ನು ನಂದೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ ಸದಸ್ಯ ನಾಗರಾಜ ಕವಡಿಕೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,”ಶಿಕ್ಷಕ ಭಾಸ್ಕರ ನಾಯ್ಕ ಎಲ್ಲರೊಂದಿಗೆ ಉತ್ತಮ ಬಾಂದವ್ಯಹೊಂದಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ,ಶಾಲೆಯನ್ನು ಹಸಿರುಶಾಲೆಯಾಗಿ ನಿರ್ಮಿಸುವ ಮೂಲಕ ಶಾಲೆಯ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರಿಗೆ ಪ್ರಶಸ್ತಿ ದೊರೆತಿರುವುದು ಯೋಗ್ಯ ಶಿಕ್ಷಕನ ಸಾಧನೆಯನ್ನು ಸರಕಾರದ ಮಟ್ಟದಲ್ಲಿ ಗುರುತಿಸಿದಂತಾಗಿದೆ” ಎಂದರು.
ಸನ್ಮಾನ ಸ್ವೀಕರಿಸಿದ ಶಿಕ್ಷಕ ಭಾಸ್ಕರ ನಾಯ್ಕ ಮಾತನಾಡಿ,ಪ್ರಶಸ್ತಿ ಸನ್ಮಾನ ವೃತ್ತಯಲ್ಲೊಂದು ಅವಿಸ್ಮರಣೀಯ ಕ್ಷಣವಾಗಿದೆ. ಮಕ್ಕಳನ್ನು ಪ್ರೀತಿಯಿಂದ ಕಾಣುವ ಹಾಗೂ ಅವರನ್ನು ಸಮಾಜಕ್ಕೆ ಪರಿಪೂರ್ಣವಾಗಿ, ಪರಿಸರದ ಮಧ್ಯೆ ಬೆಳೆಸಿ ಸಮಾಜಕ್ಕೆ ತೆರೆದಿಡುವ ಪ್ರಯತ್ನದಿಂದ ಧನ್ಯತೆಯನ್ನು ಕಂಡಿದ್ದೇನೆ. ಪ್ರಶಸ್ತಿ ಜವಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎನ್. ಭಟ್ಟ,ಪ್ರಮುಖರಾದ ಶಿವಾನಂದ ನಾಯ್ಕ,ಟಿ.ವಿ. ಭಾಗ್ವತ್,ಶಂಕರ ಕಲ್ಗಂಡ ಮುಂತಾದವರು ಇದ್ದರು.
ಸುಹಾಸ್ ಭಾಗ್ವತ್ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷ ಅಮಿತ್ ನಿರ್ವಹಿಸಿದರು.
Leave a Comment