ಯಲ್ಲಾಪುರ: ಪಟ್ಟಣದ ಚಮಗಾರಕೆರೆ ಸಂಪೂರ್ಣ ನಿರ್ಲಕ್ಕೆ ಒಳಗಾಗಿದೆ. ನೀರಿನಿಂದ ಕಂಗೊಳಿಸಬೇಕಿದ್ದ ಕೆರೆಯಲ್ಲಿ ಕಳೆತ್ಯಾಜ್ಯ ತುಂಬಿದ್ದು, ಹಸಿರಿನ ಕೆರೆಯಾಗಿ ಗೊಚರಿಸುತ್ತಿದೆ.
ಪಟ್ಟಣದ ನೂತನನಗರ ಜಡ್ಡಿಯಲ್ಲಿ ಬಸ್ ನಿಲ್ದಾಣದ ಹಿಂಬಾಗದಲ್ಲಿರುವ ಚಮಗಾರ ಕೆರೆ ಅಭಿವೃದ್ದಿ ವಂಚಿತವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕಾಟಾಚಾರಕ್ಕೆಂಬAತೆ ಮಳೆಗಾಲದ ಪೂರ್ವದಲ್ಲಿ ಹೂಳೆತ್ತಲಾಗಿತ್ತು. ಕೊನೆಗೆ ಮಳೆಬಂದು ಹೂಳೆತ್ತುವ ಕೆಲಸ ಅಪೂರ್ಣವಾಯಿತು. ಕೆರೆಯ ಹೊರಭಾಗದಲ್ಲಿ ದೊಡ್ಡ ಗಟಾರ ಮಾಡಲಾಗಿದೆ.ಇದರಿಂದ ತ್ಯಾಜ್ಯನೀರು ಬರದಂತೆ ತಡೆಯಲಾಗಿದೆ. ಜನವಸತಿ ಪ್ರದೇಶದಲ್ಲಿ ಕೆರೆಇದ್ದು,ಕೆರೆ ಸಮರ್ಪಕ ರೀತಿಯಲ್ಲಿ ಹೂಳೆತ್ತಿ ಅಭಿವೃದ್ದಿ ಆದಲ್ಲಿ ಜನವಸತಿ ಪ್ರದೇಶದ ನರ್ಮಲ್ಯ ವಾತಾವರಣ ಮೂಡಲು ಸಹಾಯಕಾರಿಯಾಗುತ್ತಿತ್ತು. ನಿರ್ಲಕ್ಷö್ಯಕ್ಕೆ ಒಳಗಾದ ಕೆರೆ ಈಗ ಗಿಡಗಂಟಿ ಬೆಳೆದುನಿಂತು ಹಸಿರುಕೆರೆಯಾಗಿ ಮಾರ್ಪಟ್ಟಿದೆ.ಕಾರಣ ಕೆರೆಯನ್ನು ನವೀಕರಣಗೊಳಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.
Leave a Comment