• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಲ್ಪನೆಗೆ ಕುಂಚ ಹಿಡಿದು ಭಾವನೆಗೆ ಬಣ್ಣ ತುಂಬುವ ಲೋಕೇಶ – ರಾಜಧಾನಿಯಲ್ಲಿ ಭರವಸೆ ಮೂಡಿಸುತ್ತಿರುವ ಶರಾವತಿಮಡಿಲ ಪ್ರತಿಭೆ

September 17, 2020 by Lakshmikant Gowda Leave a Comment

ಹೊನ್ನಾವರ – ಮನಸ್ಸಿನ ಭಾವನೆಗಳಿಗೆ ಬಣ್ಣ ತುಂಬುವುದು.. ಕಲ್ಪನೆಗಳಿಗೆ ಕುಂಚ ಹಿಡಿಯುವುದು ಎಂದಿಗೂ ಸುಲಭ ಸಾಧ್ಯವಲ್ಲ. ಆದರೆ ಪ್ರತಿಭೆಯ ಜೊತೆ ಆಸಕ್ತಿ, ಪ್ರಯತ್ನ, ತರಬೇತಿಗಳು ಮೇಳೈಸಿದಾಗ ಕಲಾವಿದ ಮತ್ತು ಆತನ ಕಲೆ ಸುತ್ತಲ ಸಮಾಜವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ತಾನೇ ತಾನಾಗಿ ಪ್ರಕಾಶಿಸಲ್ಪಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾನೆ ಶರಾವತಿಯ ಮಡಿಲ ಮಗು ಲೋಕೇಶ ಗೌಡ.
ತಾಲೂಕಿನ ಮಾವಿನಕುರ್ವಾದ ತಿಮ್ಮಪ್ಪ ಹಾಗೂ ಕೇಶಿ ಇವರ ಮಗನಾಗಿ ಕೃಷಿ ಕುಟುಂಬದಲ್ಲಿ ಜನಿಸಿ ಪ್ರೌಢ ಶಿಕ್ಷಣದವರೆಗೆ ಶರಾವತಿ ಪ್ರೌಢಶಾಲೆ ಹೊಸಾಡದಲ್ಲಿ ಓದಿ ಕಲೆಯ ಬಗೆಗಿನ ತೀವೃವಾದ ಸೆಳೆತದಿಂದ ಗದಗ ಜಿಲ್ಲೆಯಲ್ಲಿರುವ ವಿಜಯ ಕಾಲೇಜ್ ಆಪ್ ಫೈನ್ ಆಟ್ಸ್ ಗೆ ಪ್ರವೇಶ ಪಡೆದು ಸತತ ಐದು ವರ್ಷ ತನ್ನನ್ನು ಚಿತ್ರಕಲಾ ಅಭ್ಯಾಸಕ್ಕೆ ಸಮರ್ಪಿಸಿಕೊಂಡು 2014 ರಲ್ಲಿ ಉನ್ನತ ಶ್ರೇಣಿಯಲ್ಲಿ ಬಿ.ಎಪ್.ಎ ಪದವಿಯನ್ನು ಪೂರೈಸಿದ್ದಾನೆ.

lokesh


ಬಿ.ಎಪ್.ಎ ಪದವಿಯ ನಂತರ ರಾಜಧಾನಿ ಬೆಂಗಳೂರಿನತ್ತ ಮುಖಮಾಡಿರುವ ಪ್ರತಿಭೆ ತಾನಿಚ್ಚಿಸಿದ ಬಣ್ಣದ ಲೋಕದಲ್ಲಿಯೇ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾನೆ. ಅದ್ಭುತ ಎನಿಸುವ ವರ್ಣ ಸಂಯೋಜನೆಯೊಂದಿಗೆ ಕುಂಚದ ಲಾಲಿತ್ಯದಲ್ಲಿ ಕಲಾವಿದನ ಕಲ್ಪನೆಯ ಮೂಸೆಯಲ್ಲಿ ಅರಳಿದ ಒಂದೊಂದು ಚಿತ್ರವೂ ನೋಡುಗರ ಚಿತ್ತವನ್ನು ಅಪಹರಿಸುತ್ತದೆ ಎನ್ನುವುದು ಚಿತ್ರಕಲಾ ಪ್ರದರ್ಶನಗಳಲ್ಲಿ ವ್ಯಕ್ತವಾಗಿರುವ ಮೆಚ್ಚುಗೆಯ ಮಾತುಗಳು.

02 13
IMG 20200906 WA0050


ಕ್ಯಾನ್ವಾಸ್ ಇರಲಿ ನುಣುಪಾದ ಮನೆಯ ಗೋಡೆಯೇ ಆಗಿರಲಿ ಥೈಲ ವರ್ಣ, ಜಲ ವರ್ಣ ಯಾವುದಾದರೂ ಸೈ ಅಮೂರ್ತ ಅಥವಾ ಮೂರ್ತ ಜಗತ್ತನ್ನು ಬಣ್ಣಗಳಲ್ಲಿ ಕಟ್ಟಿಕೊಡಬಲ್ಲೆ ಎನ್ನುವ ತುಂಬು ಆತ್ಮವಿಶ್ವಾಸವನ್ನು ಹೊಂದಿರುವ ಲೋಕೇಶನ ಕೈಯಲ್ಲರಳಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ, ನಾಗಾ ಸಾದು, ತುಂಟ ನಗುವಿನೊಂದಿಗೆ ಇಣುಕಿ ನೋಡುವ ಪುಟ್ಟ ಮಗು, ವಾರೆ ನೋಟದಲ್ಲಿ ಕೆಣಕುವ ಸುಂದರಿ, ಕಸೂತಿಯ ಮಹಿಳೆ, ಸಾಂಪ್ರದಾಯಿಕ ನೃತ್ಯವನ್ನು ಪ್ರತಿನಿಧಿಸುವ ಲಮಾಣಿ ಮಹಿಳೆ, ನಿಸರ್ಗದ ಸುಂದರ ದೃಶ್ಯಗಳು ವಿಶ್ಲೇಷಣೆಗಾಗಲೀ ವರ್ಣನೆಗಾಗಲೀ ನಿಲುಕುವಂತದ್ದಲ್ಲ. ಕಣ್ಣಿಂದ ಆಸ್ವಾದಿಸಿಯೇ ಅನುಭವಿಸಬೇಕು.
ಡಿಸೈನಿಂಗ್, ಆ್ಯನಿಮೇಷನ್, ಮಲ್ಟಿಮೀಡಿಯಾ, ಸ್ಪಾಟ್ ಪೇಯ್ಟಿಂಗ್‍ನಲ್ಲಿ ಆಸಕ್ತಿಯನ್ನು ಹೊಂದಿರುವ ಲೋಕೇಶ ಮುಂದಿನ ದಿನಗಳಲ್ಲಿ ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ತನಗೆ ತಿಳಿದಿರುವುದನ್ನು ಹೇಳಿಕೊಡಲು ಉತ್ಸುಕನಾಗಿದ್ದೇನೆ ಎನ್ನುತ್ತಾನೆ. ಲೋಕೇಶನ ಕುಂಚದಲ್ಲಿ ಅರಳಿದ ಕಲೆಯನ್ನು ಕಣ್ತುಂಬಿಕೊಳ್ಳಲು ಈ ಇನ್ಸ್ಟಾಗ್ರಾಂ ಲಿಂಕ್ ಸೇರಿಕೊಳ್ಳಬಹುದು. . Lokesh_art

  • IMG 20200906 WA0073
  • IMG 20200906 WA0077
  • IMG 20200906 WA0079
  • IMG 20200906 WA0082
  • IMG 20200906 WA0083
  • IMG 20200906 WA0086
  • IMG 20200906 WA0052
  • IMG 20200906 WA0053
  • IMG 20200906 WA0054
  • IMG 20200906 WA0056
  • IMG 20200906 WA0057
  • IMG 20200906 WA0063
  • IMG 20200906 WA0065
  • IMG 20200906 WA0069
  • IMG 20200906 WA0071


2012, 13, 14 ಸತತ ಮೂರು ವರ್ಷ ಹಂಪಿ ಆರ್ಟ್ ಕ್ಯಾಂಪ್, 2014 ರಲ್ಲಿ ಗದಗದಲ್ಲಿ ನಡೆದ ಶಿಲ್ಪಕಲಾ ಶಿಬಿರ, ಹುಲಕೋಟಿ ಬಿತ್ತಿಚಿತ್ರ ಶಿಬಿರ, 2016 ಬೆಂಗಳೂರಿನ ಇನ್ಸ್ಟಾಲೇಶನ್ ಕ್ಯಾಂಪ್‍ನಲ್ಲಿ ಭಾಗವಹಿಸುವಿಕೆ.
2013ರಲ್ಲಿ ಬೆಂಗಳೂರಿನಲ್ಲಿ ನಡೆದ ಕಲರ್ ಮೇಕಿಂಗ್ ಚಿತ್ರಕಲಾ ಪ್ರದರ್ಶನ, ಹೊನ್ನಾವರದಲ್ಲಿ 2014 ರ ಕಲರ್ ಸ್ಟ್ರೋಕ್ ಮತ್ತು 2015 ರಲ್ಲಿ ಆರ್ಟ್ ಆಪ್ ಕಲರ್ ಹೆಸರಿನಲ್ಲಿ ಚಿತ್ರಕಲಾ ಪ್ರದರ್ಶನ.
[ ಕಲಾ ಜಗತ್ತಿನ ಪಯಣ ಜೀವನದ ಗುರಿಯು ಹೌದು ನನ್ನ ಪಾಲಿನ ಖುಷಿಯೂ ಹೌದು. ಸರ್ಕಾರಿ ಉದ್ಯೋಗದ ಸಾಧ್ಯತೆ ಕಡಿಮೆಯಾದರೂ ಕಲೆಯಲ್ಲಿ ನೈಪುಣ್ಯತೆ ಸಾಧಿಸಿದರೆ ಯಾವತ್ತೂ ಬೆಲೆ ಇದ್ದೇ ಇದೆ. ಹೊನ್ನಾವರದಲ್ಲಿ ಚಿತ್ರಕಲಾ ತರಬೇತಿ ಶಾಲೆಯನ್ನು ತೆರೆಯುವ ಮಹತ್ವಾಕಾಂಕ್ಷೆಯಿದೆ. – ಲೋಕೇಶ ಗೌಡ,ಆರ್ಟಿಸ್ಟ್]

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಸಂಸ್ಕೃತಿ-ಕಲೆ Tagged With: . pratibhe, 2014 ರಲ್ಲಿ ಗದಗದಲ್ಲಿ ನಡೆದ ಶಿಲ್ಪಕಲಾ ಶಿಬಿರ, 2016 ಬೆಂಗಳೂರಿನ, bannada lokada, bharavaseya, lokesh, Lokesh_art, ಅರಳಿದ ಕಲೆ, ಆತನ, ಆರ್ಟ್ ಆಪ್ ಕಲರ್, ಇನ್ಸ್ಟಾಗ್ರಾಂ ಲಿಂಕ್, ಇನ್ಸ್ಟಾಲೇಶನ್ ಕ್ಯಾಂಪ್‍, ಕಲಾವಿದ, ಕಲೆ ಸುತ್ತಲ ಸಮಾಜ, ಕಲೆಯಲ್ಲಿ ನೈಪುಣ್ಯತೆ, ಕೃಷಿ ಕುಟುಂಬದಲ್ಲಿ ಜನಿಸಿ, ಕೇಶಿ ಇವರ ಮಗನಾಗಿ, ಚಿತ್ರಕಲಾ ಪ್ರದರ್ಶನ., ಜಗತ್ತಿನ ಪಯಣ, ಜಲ ವರ್ಣ, ಜೀವನದ ಗುರಿಯು, ತಿಮ್ಮಪ್ಪ, ಥೈಲ ವರ್ಣ, ಪ್ರೌಢ ಶಿಕ್ಷಣದವರೆಗೆ, ಮಾವಿನಕುರ್ವಾದ, ಲೋಕೇಶ ಗೌಡ, ಶರಾವತಿ ಪ್ರೌಢಶಾಲೆ ಹೊಸಾಡ, ಶರಾವತಿಯ ಮಡಿಲ ಮಗು, ಸೇರಿಕೊಳ್ಳಬಹುದು, ಸೈ ಅಮೂರ್ತ, ಹಂಪಿ ಆರ್ಟ್ ಕ್ಯಾಂಪ್, ಹುಲಕೋಟಿ ಬಿತ್ತಿಚಿತ್ರ ಶಿಬಿರ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...