ಹೊನ್ನಾವರ: ಜಿಲ್ಲೆಯ ವಿವಿಧ ಅಫರಾಧ ಪ್ರಕರಣಗಳಲ್ಲಿ ದಕ್ಷತೆ ಹಾಗೂ ಚಾಕಚಕ್ಯತೆಯಿಂದ ಪ್ರಕರಣವನ್ನು ಭೇಧಿಸಿ ಪೊಲೀಸ್ ವ್ಯವಸ್ಥೆಗೆ ಕಿರ್ತಿ ತಂದ ಬೇಲೆಕೇರಿಯ ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ಶ್ರೀಧರ ಎಸ್.ಆರ್. ಅವರನ್ನು ಹೊನ್ನಾವರದ ನೂತನ ಸಿ.ಪಿ.ಐ ಆಗಿ ನಿಯುಕ್ತಿಗೊಂಡು ಸರ್ಕಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿ ಹಲವು ಕ್ಲೀಷ್ಠಕರ ಪ್ರಕರಣಗಳು ಸಂಭವಿಸಿದಾಗ, ಅದರ ತನಿಖೆಯ ಜವಬ್ದಾರಿಯನ್ನು ಶ್ರೀಧರ ಅವರು ನಿರ್ವಹಿಸಿ ವಿವಿಧ ಆಯಾಮಗಳಲ್ಲಿ ಪ್ರಕರಣಗಳನ್ನು ಅವಲೋಕಿಸಿ ಆರೋಪಿಗಳ ಪತ್ತೆಗೆ ನೆರವಾಗಿದ್ದರು. ೨೦೦೭ ರಲ್ಲಿ ಪೊಲೀಸ್ ಇಲಾಖೆಗೆ ಪಿಎಸೈ ಆಗಿ ಅಧಿಕಾರ ಸ್ವೀಕರಿಸಿದ ಶ್ರೀಧರ ಅವರು ಮಂಗಳೂರು, ಜಮಖಂಡಿ, ಯಲ್ಲಾಪುರ ಕುಮಟಾ ಹಾಗೂ ಜಿಲ್ಲಾ ಅಫರಾಧ ದಳ, ಜಿಲ್ಲಾ ವಿಶೇಷ ವಿಭಾಗ ಕಾರವಾರ ಮತ್ತು ಅಂಕೋಲಾದಲ್ಲಿ ಪಿಎಸೈ ಆಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅಂಕೋಲಾದ ಬೇಲೆಕೇರಿ ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕರಾಗಿ ಕರ್ತವ್ಯ ಸಲ್ಲಿಸಿದ್ದು, ಹೊನ್ನಾವರ ನೂತನ ಸಿಪಿಐ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಇಲಾಖೆಗೆ ನೀಡಿದ ಮಾದರಿ ಸೇವೆಗೆ ಮುಖ್ಯಮಂತ್ರಿಗಳ ಬಂಗಾರದ ಪದಕ ಹಾಗೂ ಕೇರಳ ಹಾಗೂ ತಮಿಳುನಾಡು ರಾಜ್ಯ ಪೊಲೀಸ್ ಇಲಾಖೆಯಿಂದ ಗೌರವಕ್ಕೆ ಪಾತ್ರರಾಗಿದ್ದರು
ಈ ಹಿಂದೆ ಇದ್ದ ಸಿ.ಪಿ.ಐ. ವಸಂತ ರಾಮ ಆಚಾರಿ ಅವರನ್ನು ಸಿ.ಎಸ್.ಪಿ.ಗೆ ವರ್ಗಾಯಿಸಿದ್ದು ಶ್ರೀಧರ ಅವರನ್ನು ಆ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ.
Leave a Comment