ಪ್ರಧಾನಿ ನರೇಂದ್ರ ಮೋದಿಯವರ 70 ಹುಟ್ಟುಹಬ್ಬದ ಪ್ರಯುಕ್ತ ಹೊನ್ನಾವರ ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಾರ್ಯಕರ್ತರು ಮಂಕಿಯ ಡಾ. ವಿ.ವಿ. ಶೆಟ್ಟಿ ಆಸ್ಪತ್ರೆಗೆ ಭೇಟಿನೀಡಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು. ಸಾರ್ವಜನಿಕರಿಗೆ ಸಿಹಿ ಹಂಚಿ ನೆಚ್ಚಿನ ಪ್ರಧಾನಿಯ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಉಪಾಧ್ಯಕ್ಷರಾದ ಉಲ್ಲಾಸ ನಾಯ್ಕ್ ಬಣಸಾಲೆ, ಒಬಿಸಿ ಮೋರ್ಚಾದ ತಾಲೂಕಾಧ್ಯಕ್ಷ ಆನಂದು ನಾಯ್ಕ್, ಸುಬ್ರಾಯ ನಾಯ್ಕ್, ಮಂಕಿ ವಿ. ಎಸ್. ಎಸ್ ಸಂಘದ ಅಧ್ಯಕ್ಷರಾದ ಹನುಮಂತ ನಾಯ್ಕ್ ಗುಳದಕೇರಿ, ಹೊನ್ನಾವರ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಹರಿಕಂತ್ರ, ಮುಖಂಡರಾದ ಸುರೇಶ ಖಾರ್ವಿ, ಜಿ. ಎಸ್. ನಾಯ್ಕ್, ಸತೀಶ ನಾಯ್ಕ್ ಗುಳದಕೇರಿ, ಸುರೇಶ ನಾಯ್ಕ್ ಬಣಸಾಲೆ, ಆನಂದ ನಾಯ್ಕ್, ದೇವರಗದ್ದೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.


Leave a Comment