• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಸ್ತೆಯಲ್ಲಿಯೇ ಬಸ್ಟ್ಯಾಂಡ್ – ದಿನದಿಂದ ದಿನಕ್ಕೆ ಬಿಗಡಾಯಿಸುತ್ತದೆ ಸಮಸ್ಯೆ

October 4, 2020 by Lakshmikant Gowda Leave a Comment

ಅಂಗಡಿ ಮುಂಗಟ್ಟು..ಮರದ ನೆರಳಲ್ಲಿ ಪ್ರಯಾಣಿಕರ ಆಶ್ರಯ – ಕುಡಿಯುವ ನೀರು, ಶೌಚಾಲಯವಿಲ್ಲದೇ ಸಿಬ್ಬಂದಿಗಳಿಗೂ ಪಜೀತಿ

ಹೊನ್ನಾವರ – ನೂತನ ಬಸ್‍ನಿಲ್ದಾಣದ ಉದ್ದೇಶಕ್ಕಾಗಿ ಸ್ಥಳಾಂತರಗೊಂಡು ಪೊಲೀಸ್ ಗ್ರೌಂಡ್‍ವರೆಗೂ ಹೋಗಿ ವಾಪಸ್ ಬಂದು ರಿಕ್ಷಾ ಸ್ಟ್ಯಾಂಡ್‍ನಲ್ಲಿ ನೆಲೆಗೊಂಡಿರುವ ಬಸ್ಟ್ಯಾಂಡ್‍ನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳುವುದಕ್ಕೂ ಜಾಗ, ಕುಡಿಯುವ ನೀರು, ಶೌಚಾಲಯದಂತ ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಪ್ರಯಾಣಿಕರು ಸಿಬ್ಬಂದಿಗಳು ಪರದಾಡುವಂತಾಗಿದೆ.

bustand samasye

ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಹೊಸ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ ಎನ್ನುವ ಖಷಿ ಒಂದೆಡೆಯಿದ್ದರೂ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಯಾವುದೇ ಸೌಲಭ್ಯವಿಲ್ಲದ ಸ್ಥಿತಿಯನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದೆ. ಕೊರೊನಾ ಭಯ ಎನ್ನುವುದು ಬೆನ್ನಿಗೆ ಬಿದ್ದ ಬೇತಾಳನಂತೆ ಕಾಯುತ್ತಿದ್ದರೂ ಅನಿವಾರ್ಯ ಕಾರಣಗಳಿಗೆ ಜನರು ಮನೆಯಿಂದ ಹೊರಗೆ ಬರುತ್ತಿದ್ದಾರೆ. ದೂರದ ಊರುಗಳಿಂದ ಬರುವ ಪ್ರಯಾಣಿಕರು ಹೊನ್ನಾವರ ಬಸ್‍ನಿಲ್ದಾಣದಲ್ಲಿ ಇಳಿದು ಶೌಚಾಲಯವನ್ನು ಹುಡುಕಿ ಎಲ್ಲಾ ಕಡೆ ಓಡುವ ದೃಶ್ಯ ಮಾಮೂಲಿಯಂತಾಗಿದೆ.
ರಸ್ತೆಯೇ ಬಸ್ಟ್ಯಾಡ್ ಆಗಿರುವುದರಿಂದ ಬಸ್ಸಿನಿಂದ ಇಳಿದ ಪ್ರಯಾಣಿಕರು ಹಾಗೂ ತಮ್ಮೂರಿನ ಬಸ್ಸಿನ ಬರುವಿಕೆಯನ್ನು ಕಾಯುತ್ತಾ ಕುಳಿತ ಮಂದಿ ಅನಿವಾರ್ಯವಾಗಿ ಸಮೀಪದ ಅಂಗಡಿಮುಂಗಟ್ಟುಗಳನ್ನೇ ಆಶ್ರಯಿಸುತ್ತಿದ್ದಾರೆ. ಪ್ರಯಾಣಿಕರು ಸಿಕ್ಕ ಸಿಕ್ಕಲ್ಲಿ ಉಗುಳುತ್ತಾರೆ ಎಂದು ಒಳಗೊಳಗೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸಾರ್ವಜನಿಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅಂಗಡಿಕಾರರು ತಮ್ಮ ಅಸಮದಾನವನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ.

bustand samasye

ಉತ್ತಮವಾದುದನ್ನು ಹೊಂದಲು ಕೆಲ ದಿನ ಕಷ್ಟವನ್ನು ಸಹಿಸಿಕೊಳ್ಳಬೇಕು ಎನ್ನುವುದು ನಮಗೂ ಗೊತ್ತಿದೆ ಆದರೆ ಕನಿಷ್ಠ ಮೊಬೈಲ್ ಶೌಚಾಲಯದಂತ ಪರ್ಯಾಯ ವ್ಯವಸ್ತೆಯನ್ನಾದರೂ ಕಲ್ಪಿಸುವುದಕ್ಕೆ ಇರುವ ತೊಂದರೆ ಏನು ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಆಸನ ವ್ಯವಸ್ಥೆ ಕಲ್ಪಿಸುವುದಕ್ಕೆ ಕಷ್ಟವಾಗಬಹುದು ಆದರೆ ಕುಡಿಯುವ ನೀರು ಶೌಚಾಲಯದಂತ ಅಗತ್ಯವನ್ನಾದರೂ ಪೂರೈಸಲು ಸಂಬಂಧಪಟ್ಟವರು ಮುಂದಾಗಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.
ಕುಡಿಯುವ ನೀರನ್ನು ಅಂಗಡಿಯಲ್ಲಿ ಎಲ್ಲಿಯಾದರೂ ಕೇಳಿ ಪಡೆಯಬಹುದು ಆದರೆ ಶೌಚಾಲಯ ಇಲ್ಲದಿರುವುದರಿಂದ ಬಹಳ ಸಮಸ್ಯೆಯಾಗುತ್ತಿದೆ. ಎಲ್ಲಾಕಡೆ ಜನರು ನಿಂತಿರುತ್ತಾರೆ ಹಾಗಂತ ನಿಸರ್ಗ ಕರೆಗೆ ಪ್ರತಿಕ್ರಿಯಿಸದೇ ಇರಲೂ ಸಾಧ್ಯವಿಲ್ಲ. ನಮ್ಮದು ಅನುಭವಿಸಲೂ ಆಗದ ಹೇಳಿಕೊಳ್ಳಲೂ ಸ್ಥಿತಿಯಾಗಿದೆ. – ಸಾರಿಗೆ ಇಲಾಖೆ ನೌಕರ

bustand samasye

ಕೆ.ಎಸ್.ಆರ್.ಟಿ.ಸಿ ಪ್ರಯಾಣಿಕರ ತೊಂದರೆ ಆಲಿಸುವ ಮಾತು ಬದಿಗಿರಲಿ ತನ್ನ ಸಿಬ್ಬಂದಿಗಳು ಮೂತ್ರ ವಿಸರ್ಜನೆಗೆ ಪೊದೆಯ ಬದಿಗೆ, ನಿಂತಿರುವ ಟೆಂಪೋ ಮರೆಗೆ ಓಡುವುದನ್ನು ಕಂಡಾದರೂ ಇಲ್ಲಿನ ದುರವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು ಅದು ಇನ್ನೂವರೆಗೂ ಆಗಿಲ್ಲ. ತಕ್ಷಣ ಒಂದು ಮೊಬೈಲ್ ಶೌಚಾಲಯವನ್ನಾದರೂ ಕಲ್ಪಿಸಲು ಸಂಬಪಟ್ಟವರು ಮುಂದಾಗಬೇಕಿದೆ. – ಆನಂದ, ಪ್ರಯಾಣಿಕ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: bustand samasye, drinking water, equipped with new facilities, Honnavar bus station, Mobile toilets, modern bus facilities, passenger shelter, passenger shelter in the shade of wood, passengers from distant cities, shop frontage, toilet infrastructure, ಅಂಗಡಿ ಮುಂಗಟ್ಟು, ಆಧುನಿಕ ಸೌಲಭ್ಯಗಳನ್ನೊಳಗೊಂಡ, ಕುಡಿಯುವ ನೀರು, ದೂರದ ಊರುಗಳಿಂದ ಬರುವ ಪ್ರಯಾಣಿಕರು, ನಿಸರ್ಗ ಕರೆಗೆ ಪ್ರತಿಕ್ರಿಯಿಸದೇ, ಪ್ರಯಾಣಿಕರಿಗೆ ಕುಳಿತುಕೊಳ್ಳುವುದಕ್ಕೂ ಜಾಗ, ಮರದ ನೆರಳಲ್ಲಿ ಪ್ರಯಾಣಿಕರ ಆಶ್ರಯ, ಮೊಬೈಲ್ ಶೌಚಾಲ, ಶೌಚಾಲಯದಂತ ಮೂಲಭೂತ ಸೌಲಭ್ಯ, ಸುಸಜ್ಜಿತ ಹೊಸ ಬಸ್ ನಿಲ್ದಾಣ ಕಾಮಗಾರಿ, ಹೊನ್ನಾವರ ಬಸ್‍ನಿಲ್ದಾಣ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...