ಹೊನ್ನಾವರ:ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಾಲೂಕಿನ ಹಳದಿಪುರ ಸಮೀಪ ಓಮಿನಿ ಇಕೋ ವಾಹನ ಚಾಲಕನ ಅತಿವೇಗ ಹಾಗೂ ಅಜಾಗರುಕತೆಯಿಂದ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಆರೋಪಿತ ಚಾಲಕ ಭಟ್ಕಳ ತಾಲೂಕಿನ ಸೋನಾರಕೇರಿಯ ವೇಂಕಟೇಶ ವಿನಾಯಕ ವೆರ್ಣೆಕರ್ ಅವರು ಹಳದಿಪುರ ಗ್ರಾಮ ಪಂಚಾಯತಿ ಹತ್ತಿರ ತನ್ನ ಓಮಿನಿ ಇಕೋ ವಾಹನವನ್ನು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿದ್ದಾರೆ. ಪರಿಣಾಮವಾಗಿ ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಮುಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಓಂ ಪಾರಿಕ ಜಗದೀಶ್ ಪ್ರಸಾದ ಪಾರಿಕ ಎಂಬುವವರಿಗೆ ಎಡಬದಿ ಸೊಂಟಕ್ಕೆ ಹಾಗೂ ಎಡಗಾಲಿಗೆ ಗಾಯ ನೋವು ಉಂಟಾಗಿದೆ. ಗಾಯಾಳು ಮೂಲತಃ ರಾಜಸ್ಥಾನದ ಹನುಮಾನಗಡ ಜಿಲ್ಲೆ ಮೊಹರ ತಾಲೂಕಿನ ದಾನಸಿಯಾದವರು. ಹಾಲಿ ಅಪ್ಪಿಓಣಿ, ನೆಲ್ಲಿಕೆರೆ, ಕುಮಟಾದಲ್ಲಿ ವಾಸವಾಗಿದ್ದವರು ಎನ್ನುವ ಮಾಹಿತಿ ಲಭಿಸಿದೆ. ಈ ಕುರಿತು ಹಳದಿಪುರದ ಲಕ್ಷ್ಮಣ ಹನುಮಂತ ಹರಿಕಾಂತ ಎನ್ನುವವರು ಹೊನ್ನಾವರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment