• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರು ತಿಂಗಳ ನಂತರ ಆರಂಭವಾದ ವಾರದ ಸಂತೆ – ವ್ಯಾಪಾರ ವಹಿವಾಟಿನಲ್ಲಿ ಕಾಣದ ಮೊದಲಿನ ಉತ್ಸಾಹ

October 11, 2020 by Lakshmikant Gowda Leave a Comment

ಹೊನ್ನಾವರ – ಕೊರೊನಾ ಮಹಾವ್ಯಾಧಿಯ ಭೀತಿಯಿಂದ ಬಂದ್ ಆಗಿದ್ದ ಶನಿವಾರದ ವಾರದ ಸಂತೆ ಅಕ್ಟೋಬರ್ 10 ರಿಂದ ಪುನರಾರಂಭವಾಗಿದೆ. ಜನರು ತರಕಾರಿ ದಿನಸಿಗಳ ಖರೀದಿಗೆ ಮುಂದಾಗುತ್ತಿದ್ದರೂ ಮೊದಲಿನ ಉತ್ಸಾಹ ಕಂಡುಬರಲಿಲ್ಲ.

watermarked IMG 20201010 WA0226


ಲಾಕ್‍ಡೌನ್ ಜಾರಿಯಾಗುವ ಮೊದಲು ಪಟ್ಟಣದಲ್ಲಿ ನಡೆಯುತ್ತಿದ್ದ ಶನಿವಾರ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ ಜನರು ಆಗಮಿಸಿ ಸರಿಸುಮಾರು ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು, ಹಣ್ಣು, ಬಟ್ಟೆ, ಚಪ್ಪಲಿ, ಗೃಹಬಳಕೆ ವಸ್ತುಗಳು ವಗೈರೆ ಖರೀದಿಸಲು ಮುಂದಾಗುತ್ತಿದ್ದರು. ಈ ಬಾರಿ ಸಂತೆ ನಡೆಯುವ ಬಗ್ಗೆ ಖಚಿತ ಮಾಹಿತಿ ಇಲ್ಲದ ಕಾರಣವೋ ಅಥವಾ ಗ್ರಾಮೀಣ ಭಾಗದ ಜನರ ಮನಸ್ಸಿನಲ್ಲಿ ಹೊಕ್ಕಿರುವ ಕೊರೊನಾ ಭಯ ಇನ್ನೂ ಕಡಿಮೆಯಾಗಿಲ್ಲವೋ ಸಂತೆಯತ್ತ ಸುಳಿಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿದೆ.
ಸುದೀರ್ಘ ಅವಧಿಯ ಬಿಡುವಿನ ನಂತರ ಸಂತೆ ಆರಂಭವಾಗಿರುವ ಹಿನ್ನಲೆಯಲ್ಲಿ ಜನರು ಬರುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮೊದಲೇ ಊಹಿಸಿದ್ದ ವ್ಯಾಪಾರಿಗಳೂ ಸಾಮಾನುಗಳನ್ನು ಕಡಿಮೆ ಪ್ರಮಾಣದಲ್ಲಿಯೇ ತಂದಿರುವುದಾಗಿ ತಿಳಿಸುತ್ತಾರೆ. ದಿನಸಿ ಸಾಮಾನುಗಳಿಗಿಂತ ಹೆಚ್ಚಾಗಿ ತರಕಾರಿ ಬೆಲೆ ಸ್ಥಳೀಯ ಮಾರುಕಟ್ಟೆಯಲ್ಲಿಗಿಂತ ಕಡಿಮೆಯಾಗಿರುತ್ತದೆ ಎನ್ನುವ ಕಾರಣಕ್ಕೆ ತರಕಾರಿ ಖರೀದಿಗೋಸ್ಕರವೇ ಸಂತೆಗೆ ಬರುವವರ ಸಂಖ್ಯೆಯೂ ದೊಡ್ಡದಿತ್ತು. ಆದರೆ ಲಾಕ್‍ಡೌನ್ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಗಲ್ಲಿ ಗಲ್ಲಿಯಲ್ಲೂ ತರಕಾರಿ ಅಂಗಡಿಗಳು ತಲೆಯೆತ್ತಿರುವುದೂ ಜನರು ಸಂತೆಯತ್ತ ಸುಳಿಯದಿರಲು ಕಾರಣ ಎನ್ನಲಾಗುತ್ತಿದೆ.

sante aaramba
watermarked IMG 20201010 WA0227


ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗಬಹುದು..!
ಹೀಗೊಂದು ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಕೊರೊನಾ ಸಂಕ್ರಮಣದ ಆರು ತಿಂಗಳ ಅವಧಿಯಲ್ಲಿ ಕೊರೊನಾ ಸಂಬಂಧಿತ್ತ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆಯೇ ಹೊರತು ಕೊರೊನಾ ಸೋಂಕಿನ ಪ್ರಮಾಣ ಮಾತ್ರ ತಗ್ಗಿಲ್ಲ. ಈಗಲೂ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರವೂ ಗಟ್ಟಿ ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಸಿಲುಕಿದೆ. ಹೀಗಿರುವಾಗ ಆತಂಕದ ನಡುವೆಯೇ ಆರಂಭವಾಗಿರುವ ವಾರದ ಸಂತೆ ಮತ್ತಷ್ಟು ಅನಾಹುತಕ್ಕೆ ಎಡೆಮಾಡಿಕೊಡಬಹುದು ಎನ್ನುವ ವಿಚಾರವೂ ಕೇಳಿಬರುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಂತೆಯಲ್ಲಿ ಸಾಧ್ಯವಾಗದ ಮಾತು ಇನ್ನು ಮಾಸ್ಕ್ ತೊಟ್ಟುಕೊಳ್ಳುವುದು ಕಡ್ಡಾಯವಾಗಿದ್ದರೂ ಮಾಸ್ಕ್ ಮುಖದಮೇಲೇರುವುದು ಪೊಲೀಸರನ್ನು,ಪಟ್ಟಣ ಪಂಚಾಯತ ಅಧಿಕಾರಿಗಳನ್ನು ಕಂಡಾಗ ಮಾತ್ರ ಎನ್ನುವ ಸ್ಥಿತಿ ಇದೆ. ಕೊರೊನಾ ಕುರಿತು ಸಂಗತಿಗಳನ್ನು ಸಂಪೂರ್ಣ ತಿರಸ್ಕರಿಸಲಿಕ್ಕೂ ಆಗದ, ಅದಕ್ಕೇ ಜೋತುಬಿದ್ದು ಮನೆಯ ಮೂಲೆಯಲ್ಲಿಯೇ ಕುಳಿತು ಬದುಕುವುದಕ್ಕೂ ಆಗದ ಸಂದಿಗ್ಧತೆಯಲ್ಲಿರುವ ಜನರು ಕೊರೊನಾ ಮುನ್ನೆಚ್ಚರಿಕೆ ಪಾಲಿಸಿಯೇ ದೈನಂದಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

watermarked IMG 20201010 WA0232


[ಸಂತೆ ಇದ್ದರೆ ನಮ್ಮಂತ ಕೂಲಿ ಮಾಡಿ ಬದುಕುವ ಕುಟುಂಬಗಳಿಗೆ ಒಂದಿಷ್ಟು ಕಡಿಮೆ ಬೆಲೆಗೆ ತರಕಾರಿ ದಿನಸಿ ಸಿಗುತ್ತದೆ. ಆದರೆ ನಾವು ಮಾಸ್ಕ್ ಹಾಕಿಕೊಂಡು ಬಂದಿದ್ದರೂ ಮಾಸ್ಕ್ ಹಾಕದಿದ್ದವರು ಸಮೀಪ ಬಂದಾಗ ಭಯವಾಗುತ್ತದೆ. ಸಂತೆ ಆರಂಭವಾಗಿರುವುದು ಒಳ್ಳೆಯದು ಮಾಸ್ಕ್ ಧರಿಸದವರಿಗೆ ಸಂತೆಪೇಟೆಗೆ ಪ್ರವೇಶಿಸಲೇ ಬಿಡಬಾರದು – ಶ್ರೀನಿವಾಸ, ಸಂತೆಗೆ ಬಂದವರು

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: coronavirus not only lowered, fewer than a few swindlers on Saturdays, galli galli vegetable shop, lockdown occasion, Police, sante aaramba, town panchayat officer, village villages, ಕಾಣದ ಮೊದಲಿನ ಉತ್ಸಾಹ, ಕೊರೊನಾ ಸೋಂಕಿನ ಪ್ರಮಾಣ ಮಾತ್ರ ತಗ್ಗಿಲ್ಲ, ಗಲ್ಲಿ ಗಲ್ಲಿಯಲ್ಲೂ ತರಕಾರಿ ಅಂಗಡಿ, ಗೃಹಬಳಕೆ ವಸ್ತುಗಳು, ಚಪ್ಪಲಿ, ಪಟ್ಟಣ ಪಂಚಾಯತ ಅಧಿಕಾರಿ, ಪೊಲೀಸರನ್ನು, ಬಟ್ಟೆ, ಲಾಕ್‍ಡೌನ್ ಸಂದರ್ಭ, ಶನಿವಾರ ಸಂತೆಗೆ, ಸಂತೆ – ವ್ಯಾಪಾರ ವಹಿವಾಟಿನಲ್ಲಿ, ಸಂತೆಯತ್ತ ಸುಳಿಯುವವರ ಸಂಖ್ಯೆ ಮಾತ್ರ ಕಡಿಮೆ, ಹಣ್ಣು, ಹಳ್ಳಿ ಹಳ್ಳಿಗಳಲ್ಲಿ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...