• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ

October 14, 2020 by Lakshmikant Gowda Leave a Comment

ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸಪ್ಟಂಬರ್ ತಿಂಗಳು ಸಮೀಪಿಸುತ್ತಿದ್ದಂತೆ ಕ್ಷೀಣವಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ಎರಡನೇ ವಾರದಲ್ಲಿಯೂ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಕರಾವಳಿಯಲ್ಲಿ ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುವ ಸೂಚನೆ ಹವಾಮಾನ ಇಲಾಖೆಯಿಂದ ಬರುತ್ತಲೇ ಇದೆ.

IMG 20201013 WA0039

ಬೇಸಿಗೆಯ ನೀರಿನ ಬರದ ದಿನಗಳನ್ನು ನೆನೆಸಿಕೊಂಡರೆ ಕನಿಷ್ಠ ಪಕ್ಷ ನವೆಂಬರ್ ವರೆಗಾದರೂ ಸ್ವಲ್ಪ ಸ್ವಲ್ಪ ಮಳೆ ಸುರಿಯುತ್ತಿದ್ದರೆ ಅನುಕೂಲ ಎನಿಸಿದರೂ, ಈಗಾಗಲೇ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ಮನೆಗೆ ತರಬೇಕಾದ ಅನಿವಾರ್ಯತೆ ಇರುವ ರೈತರ ಪಾಲಿಗೆ ಈ ಮಳೆ ಎನ್ನುವುದು ಶನಿಯಂತೆ ಕಾಡುತ್ತಿದೆ. ತಾಲೂಕಿನ ಮಾವಿನಕುರ್ವಾ, ಹಳದಿಪುರ, ಕರ್ಕಿ, ಮಂಕಿ, ಕೆಳಗಿನೂರು ಸೇರಿದಂತೆ ಮುಂಗಾರಿನ ಆರಂಭಿಕ ದಿನಗಳಲ್ಲಿಯೇ ನಾಟಿ ಕೆಲಸ ಮುಗಿಸಿದ್ದ ಬಹುತೇಕ ರೈತರ ಗದ್ದೆಗಳು ಕೊಯ್ಲಿಗೆ ಬಂದಿದೆ. ತೆನೆ ಬಲಿತು ಹುಲ್ಲು ಹಣ್ಣಾಗಿ ಒಣಗುತ್ತಿದ್ದು ಈ ಸಮಯದಲ್ಲಿ ಮಳೆ ಬಂದರೆ ಬೆಳೆ ನೆಲಕಚ್ಚುತ್ತದೆ. ಭತ್ತ ಉದುರುವ ಜೊತೆಗೆ ಹುಲ್ಲು ನೆನೆದು ಕೊಯ್ಲಿಗೆ ಬರದಂತಾಗುತ್ತದೆ. ಅದೇ ಕಾರಣಕ್ಕೆ ಒಂದು ಹದಿನೈದು ದಿನ ಮಳೆ ಬರದಿದ್ದರೆ ಹುಲ್ಲು ಭತ್ತವನ್ನಾದರೂ ರಕ್ಷಿಸಿಕೊಳ್ಳುತ್ತಿದ್ದೆವು ಎನ್ನುವ ಗೊಣಗಾಟ ರೈತಾಪಿವಲಯದಲ್ಲಿ ಕೇಳಿಬರುತ್ತಿದೆ.

ನೆರೆ ಬಂದು ನೆಟ್ಟಿದ್ದ ಸಸಿ ಮುಳುಗಿತ್ತಾದರೂ ಸ್ವಲ್ಪ ದಿನದಲ್ಲಿಯೇ ಮಳೆ ಕಡಿಮೆಯಾಗಿ ನೀರಿಳಿದುಹೋದ ಕಾರಣ ಬೆಳೆಗೆ ಯಾವುದೇ ಹಾನಿಯಾಗಿರಲಿಲ್ಲ. ಈಗ ಮತ್ತೆ ಮೂರ್ನಾಲ್ಕು ದಿನದಿಂದ ಮಳೆ ಸುರಿಯುತ್ತಿರುವುದು ಕೈಗೆ ಬಂದ ತುತ್ತನ್ನು ಬಾಯಿಗೆ ಬರದಂತೆ ಮಾಡುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ ರೈತರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, ಅಂಕಣಗಳು Tagged With: farmers' fields were harvested, five days of rainfall on the windward sloping coast, Neighboring saplings were sunk, red alert in coastal and inland districts.ನೆರೆ ಬಂದು ನೆಟ್ಟಿದ್ದ ಸಸಿ ಮುಳುಗಿತ್ತಾ, ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ರೈತರ ಗದ್ದೆಗಳು ಕೊಯ್ಲಿಗೆ, ವಾಯುಬಾರ ಕುಸಿತ ಕರಾವಳಿಯಲ್ಲಿ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...