ಹೊನ್ನಾವರ – ಹವಾಮಾನ ಇಲಾಖೆಯ ೪೮ಗಂಟೆಗಳ ಕಾಲ ಭಾರಿ ಮಳೆ ಮುನ್ಸೂಚನೆ ಮಧ್ಯೆ ಬುಧವಾರ ಮಧ್ಯಾಹ್ನದಿಂದಲೇ ತಾಲೂಕಿನೆಲ್ಲಡೆ ವರುಣನ ಆರ್ಭಟ ಜೋರಾಗಿದ್ದು ಮತ್ತೆ ತಾಲೂಕಿನ ಹೊಳೆ ಹಳ್ಳಗಳು ಮೈದುಂಬಿ ಹರಿದು ತಗ್ಗುಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಆತಂಕ ಮನೆ ಮಾಡಿದೆ. ತಾಲೂಕಿನಲ್ಲಿ ಕೊರೊನಾ ಆರ್ಭಟದ ನಡುವೆ ನೆರೆಯ ಭೀತಿ ಆವರಿಸಿದೆ.
ಶರಾವತಿ ನದಿ ತೀರಕ್ಕೆ ಆತಂಕ ಮೂಡಿಸುವ ಲಿಂಗನಮಕ್ಕಿ ಜಲಾಶಯದ ನೀರು ಭರ್ತಿಯಾಗದ ಹಿನ್ನಲೆಯಲ್ಲಿ ಡ್ಯಾಂನಿದ ನೀರು ಬಿಟ್ಟಿಲ್ಲ. ಆದರೂ ಭರ್ತಿಯ ಹಂತಕ್ಕೆ ಬಂದಿರುವ ಜೊತೆ ಮಳೆ ನೀರಿನಿಂದ ನದಿಯಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಘಟ್ಟದ ಪ್ರದೇಶದಲ್ಲಿಯೂ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಗುಂಡಬಾಳ ಹೊಳೆ ತನ್ನ ವ್ಯಾಪ್ತಿಯನ್ನು ಮತ್ತೊಮ್ಮೆ ವಿಸ್ತರಿಸಿಕೊಂಡಿದ್ದು ಚಿಕ್ಕನಕೋಡ, ಕಡಗೇರಿ, ಖರ್ವಾ, ಹಡಿನಬಾಳ ಭಾಗದ ಜನರು ತಾಲೂಕಾಡಳಿತದ ಮುನ್ಸೂಚನೆ ಆದೇಶ ಪಾಲಿಸುವಂತೆ ಕಂದಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಪಟ್ಟಣದಲ್ಲಿ ಮಳೆ ತಿವ್ರತೆ ಹೆಚ್ಚಳವಾದ ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಬಂದು ಅಲ್ಲಲ್ಲಿ ಸಂಚಾರಕ್ಕೆ ತೊಂದರೆ ಹೊರತುಪಡಿಸಿ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾ
Leave a Comment