• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶರಾವತಿ ಕುಡಿಯುವ ನೀರಿನ ಯೋಜನೆ ಹಕ್ಕಿಗೆ ರೆಕ್ಕೆ ಪುಕ್ಕ

October 22, 2020 by Lakshmikant Gowda Leave a Comment

ಗೇರಸೊಪ್ಪಾದಿಂದ ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ೧೨೦ ಕೋಟಿ ವೆಚ್ಚದ ಕನಸಿನ ಯೋಜನೆ ಅನುಷ್ಠಾನವಾಗುತಿದ್ದು ನಗರವಾಸಿಗಳ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಪಟ್ಟಣಕ್ಕೆ ನೀರನ್ನು ಪೂರೈಸುವ ಜೊತೆಗೆ ಪೈಪ್‌ಲೈನ್ ಹಾದುಹೋಗುವ ೮ ಗ್ರಾಮಪಂಚಾಯತಗಳಿಗೂ ನೀರನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಂಡಿದ್ದು ಮಾಜಿ ಶಾಸಕರಾದ ಶಾರದಾ ಶೆಟ್ಟಿ ಮತ್ತು ಮಂಕಾಳ ವೈದ್ಯ ಕಾಲದಲ್ಲಿ. ಇದೀಗ ಹಾಲಿ ಶಾಸಕ ದಿನಕರ ಶೆಟ್ಟಿ, ಸುನಿಲ್ ನಾಯ್ಕ ಅವಧಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ.

watermarked 01 20 2

ಇದುವರೆಗೆ ಹೊನ್ನಾವರ ಪಟ್ಟಣಕ್ಕೆ ಕುಮಟಾ ಕೋಣಕಾರದಿಂದ ನೀರು ಸರಬರಾಜಾಗುತ್ತಿತ್ತಾದರೂ ಪದೇ ಪದೇ ಪೈಪ್ ಒಡೆದು, ನೀರೆತ್ತುವ ಪಂಪ್ ಹಾಳಾಗುವ ಕಾರಣದಿಂದ ವಾರಗಟ್ಟಲೇ ನೀರಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎನ್ನುವಂತೆ ಕಾಣಿಸುತ್ತಿರುವ ಶರಾವತಿ ಕುಡಿಯುವ ನೀರಿನ ಯೋಜನೆಗೆ ಎದುರಾದ ತೊಡಕುಗಳನ್ನೆಲ್ಲಾ ನಿವಾರಿಸಿಕೊಳ್ಳುವಲ್ಲಿ ಶಾಸಕ ದಿನಕರ ಶೆಟ್ಟಿ ಯಶಸ್ವಿಯಾಗಿದ್ದಾರೆ. ಬೃಹತ್ ಗಾತ್ರದ ನೀರಾವರಿ ಪೈಪ್‌ಗಳು ಹೊನ್ನಾವರ ಪಟ್ಟಣದಿಂದ ಗೇರಸೊಪ್ಪಾವರೆಗೂ ಅಲ್ಲಲ್ಲಿ ಶೇಖರಣೆಯಾಗುತ್ತಿದೆ.
ದೂರದ ಮುರ್ಡೇಶ್ವರಕ್ಕೆ ಶರಾವತಿ ನದಿ ನೀರಿನ ಪೂರೈಕೆಯಾಗುತ್ತಿದ್ದರೂ ತಾಲೂಕಿನ ಜನರಿಗೆ ತಮ್ಮಲ್ಲಿರುವ ಜಲಮೂಲವನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕಾಗಲಿಲ್ಲ ಎನ್ನುವ ಕೊರಗು ನೀಗಲಿದ್ದು ತಾಲೂಕು ಕೇಂದ್ರದ ಜೊತೆಗೆ ನಗರಬಸ್ತಿಕೇರಿ, ಉಪ್ಪೋಣಿ, ಹೆರಂಗಡಿ, ಜಲವಳ್ಳಿ, ಖರ್ವಾ, ಹಡಿನಬಾಳ, ಮುಗ್ವಾ ಹೊಸಾಕುಳಿ ಮುಂತಾದ ಗ್ರಾಮಗಳಲ್ಲಿ ಬೇಸಿಗೆಉ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀರಿನ ಬವಣೆಯೂ ನೀಗಲಿದೆ. ಹೊಳೆಸಾಲಿನ ಜನರಿಗೆ ಅನುಕೂಲವಾಗಿದ್ದ ಏತ ನೀರಾವರಿ ಯೋಜನೆ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಕೆಲವು ಕಡೆ ಸ್ಥಗಿತವಾಗಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯೂ ಆ ಸಾಲಿಗೆ ಸೇರದಿರಲಿ ಎನ್ನುವ ಆಶಯ ಈ ಭಾಗದ ಜನರದ್ದಾಗಿದೆ.

watermarked 01 20

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: ೮ ಗ್ರಾಮಪಂಚಾಯತ, ambitious project, distant Murdeshwara, pipeline, plus, Sharavathi river water supply, supply of water to the town, time-bound, Use of water source, ಈಡೇರುವ ಕಾಲ ಸನ್ನಿಹಿತ, ಜಲಮೂಲವನ್ನು ಸದ್ಬಳಕೆ, ಜೊತೆಗೆ, ದೂರದ ಮುರ್ಡೇಶ್ವರಕ್ಕೆ, ಪಟ್ಟಣಕ್ಕೆ ನೀರನ್ನು ಪೂರೈಸುವ, ಪೈಪ್‌ಲೈನ್, ಮಹತ್ವಾಕಾಂಕ್ಷಿ ಯೋಜನೆ ರೂಪು, ಶರಾವತಿ ನದಿ ನೀರಿನ ಪೂರೈಕೆ, ಾಮ Grama Panchayat

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...