ಯಲ್ಲಾಪುರ: ತಾಲೂಕಿನ ಭರತನಹಳ್ಳಿ ಗ್ರೂಪ್ ಭತ್ತ ಬೆಳೆಗಾರರ ಸಂಸ್ಕರಣಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಉದಯ ಜಿ ಭಟ್ಟ, ಉಪಾಧ್ಯಕ್ಷರಾಗಿ ಗಣಪತಿ ಬಿ ಹೆಗಡೆ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣೆಯಲ್ಲಿ ಎಲ್ಲ 13 ಉಮೇದುವಾರರು ಅವಿರೋಧವಾಗಿ ಆಯ್ಕೆಗೊಂಡು, ಗುರುವಾರ ನಡೆದ ಸದಸ್ಯರ ಸಭೆಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು.ನಿರ್ದೇಶಕರಾದ ಹೇರಂಭ ಪಿ.ಹೆಗಡೆ ಸತ್ಯನಾರಾಯಣ ಜಿ. ಪಾಟೀಲ, ಸುಬ್ರಹ್ಮಣ್ಯ ಎನ್.ಹೆಗಡೆ, ಶ್ರೀಧರ ಎನ್. ಹೆಗಡೆ, ನಟರಾಜ ಕೆ.ಗೌಡರ್, ಗೋಪಾಲಕೃಷ್ಣ ಎನ್.ಹೆಗಡೆ, ಧನಂಜಯ ವಿ.ಹೆಗಡೆ, ವೆಂಕಟರಮಣ ಎನ್.ಹೆಗಡೆ, ಪರಮೇಶ್ವರ ಆರ್.ಹೆಗಡೆ, ಶಾಂತಾ ಸಿ.ಭಟ್ಟ ಹಾಗೂ ಅನ್ನಪೂರ್ಣ ಎಸ್.ಹೆಗಡೆ ಸಂಘದ ಸಭಾಭವನದಲ್ಲಿ ಮೊದಲ ಸಭೆ ನಡೆಸಿದರು. ಚುನಾವಣಾಧಿಕಾರಿಯಾಗಿ ಬಿ.ಡಿ.ಡಿಸೋಜಾ ಕಾರ್ಯನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಆದರ್ಶ ಹೆಗಡೆ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.
Leave a Comment