ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಭಟ್ಕಳ ಉಪವಿಭಾಗ ಹೊನ್ನಾವರ ವೃತ್ತ ವತಿಯಿಂದ ಹೊನ್ನಾವರ ಪ್ರತಿಬೋದಯ ಸಬಾಭವನದಲ್ಲಿ ಹೊನ್ನಾವರ ತಾಲೂಕಿನ ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸಿಪಿಐ ಶ್ರೀಧರ ಎಸ್ ಮಾತನಾಡಿ ಇತ್ತಿಚೆಗೆ ಹೊರ ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲೂಕುಗಳ ದೇವಾಲಯಗಳಲ್ಲಿ ಕಳ್ಳತನಗಳು ನಡೆಯುತ್ತಿರುವುದರಿಂದ ದೇವಸ್ಥಾನಗಳ ಬದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹಲವು ಸೂಚನೆಗಳನ್ನ ನೀಡಿದರು. ದೇವಾಲಯಗಳಲ್ಲಿ ಖಡ್ಡಾಯವಾಗಿ ಸಿ ಸಿ ಟಿವಿ ಅಳವಡಿಸಬೇಕು ಅಲ್ಲದೇ ಡಿವಿಆರ್ ಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು.ದೇವಾಲಯದ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಬ್ಯಾಂಕ್ ಲಾಕರಿನಲ್ಲಿ ಇಡಲು ಕ್ರಮ ಕೈಗೊಳ್ಳಬೇಕುದೇವಾಲಯಕ್ಕೆ ಭದ್ರವಾದ ಬಾಗಿಲು ಕಿಟಕಿಗಳನ್ನ ಅಳವಡಿಸಿ ಕಬ್ಬಿಣದ ಗ್ರಿಲ್ ಗೇಟಗಳನ್ನ ಅಳವಡಿಸಬೇಕು. ದೇವಾಲಯದ ಭದ್ರತೆಗಾಗಿ ಕಾವಲುಗಾರರನ್ನ ನೇಮಿಸಿಕೊಳ್ಳ ಬೇಕು ಇಲ್ಲವಾದಲ್ಲಿ ಗ್ರಾಮದ ಯುವಕರ ತಂಡ ರಚಿಸಿ ಸರದಿ ಪ್ರಕಾರ ರಾತ್ರಿ ವೇಳೆ ದೇವಸ್ಥಾನದ ಭದ್ರತೆ ನೋಡಿಕೊಳ್ಳುವಂತೆ ಮಾಡುವುದು. ದೇವಾಲಯದ ಹುಂಡಿಗಳಲ್ಲಿ ಹೆಚ್ಚು ಹಣ ಶೇಖರಣೆ ಆಗದಂತೆ ನೋಡಿಕೊಳ್ಳ ಬೇಕು. ಕಾವಲಿಗೆ ನೇಮಕ ಆದವರು ರಾತ್ರಿ ವೇಳೆ ಟಾರ್ಚ ಮೂಲಕ ಸುತ್ತಲಿನ ದೇವಾಲಯದ ಸುತ್ತಲಿನ ಪ್ರದೇಶವನ್ನ ಪರಶೀಲಿಸಬೇಕು.ದೇವಸ್ಥಾನದಲ್ಲಿ ಸೈರನ್ ವ್ಯವಸ್ಥೆ ಅಳವಡಿಸಬೇಕು.ದೇವಾಲಯದ ಬಳಿ ಯಾರೆ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಾಹನಗಳು ಕಂಡು ಬಂದಲ್ಲಿ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕುಮತ್ತು ದೇವಾಲಯದ ಭದ್ರತೆ ದೃಷ್ಟಿಯಿಂದ ಪೊಲೀಸರು ಕಾಲಾಕಾಲಕ್ಕೆ ನೀಡುವಸಲಹೆ ಸೂಚನೆಗಳನ್ನ ಪಾಲಿಸಬೇಕು ಎಂದರುಎ.ಎಸ್.ಪಿ ನಿಖಿಲ್ ಬುಳ್ಳಾವರ ಮಾತನಾಡಿ ಹೊನ್ನಾವರ ಕಾಸರಕೊಡಿನಲ್ಲಿ ದೇವಾಲಯ ಕಳ್ಳತನವಾಗಿದೆ , ಅಲ್ಲದೆ ಕರಾವಳಿ ಭಾಗದ ಹೆದ್ದಾರಿ ಹತ್ತಿರದಲ್ಲಿ ಹೆಚ್ಚಿನ ದೇವಾಲಯಗಳಲ್ಲಿ ಕಳ್ಳತನವಾಗಿದೆ ಹೀಗಾಗಿ ದೇವಾಲಕ್ಕೆ ಸಂಬಂದಪಟ್ಟವರು ಪೊಲೀಸ ಇಲಾಖೆಯ ಸೂಚನೆಗಳನ್ನ ಪಾಲಿಸಿ ಸಹಕರಿಸಬೇಕೆಂದು ಆಗ್ರಹಿಸಿದರು. ಹೊನ್ನಾವರ ಪಿಎಸೈ ಶಶಿಕುಮಾರ್, ಮಂಕಿ ಪಿಎಸೈ ಪಿ ಬಿ ಕೊಣ್ಣೂರ , ಕೈಂ ಪಿಎಸೈ ಸಾವಿತ್ರಿ ನಾಯಕ್ ಉಪಸ್ಥಿತರಿದ್ದರು.
Leave a Comment