• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಧರ್ಮ ಇಬ್ಭಾಗ ಮಾಡಲು ಹೊರಟವರ ಇಂದು ಏನಾಗಿದೆ ತಿಳಿಯಿರಿ- ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಹಳಿಯಾಳದಲ್ಲಿ ಹೇಳಿಕೆ.

November 9, 2020 by Yogaraj SK Leave a Comment

ಹಳಿಯಾಳ:- ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಇದನ್ನು ಇಬ್ಬಾಗ ಮಾಡಲು ಹೊರಟವರ ಪರಿಸ್ಥಿತಿ ಇಂದು ಏನಾಗುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಶ್ರೀ ಕ್ಷೇತ್ರ ಶ್ರೀಶೈಲ್‍ದ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.
ಹಳಿಯಾಳಕ್ಕೆ ಭೇಟಿ ನೀಡಿದ ಅವರು ಇಲ್ಲಿಯ ವೀರಕ್ತ ಮಠದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು. ವೀರಶೈವ-ಲಿಂಗಾಯತ ಎಂಬುದನ್ನು ತಮ್ಮ ಸ್ವಾರ್ಥಕ್ಕಾಗಿ ಇಬ್ಬಾಗ ಮಾಡಲು ಹೊರಟರು ಆದರೇ ಧರ್ಮ ಒಡೆಯುವ ಪಾಪದ ಕೆಲಸಕ್ಕೆ ಕೈ ಹಾಕಿದವರ ಸ್ಥಿತಿ ಇಂದು ಏನಾಗಿದೆ ಎಂಬುದು ನಿಮಗೆ ತಿಳಿದಿದೆ. ಹೀಗಾಗಿ ಎಂದಿಗೂ ಧರ್ಮ ಒಡೆಯುವ ಅನಾಚಾರಕ್ಕೆ ಆಸ್ಪದ ಕೊಡಬಾರದು ಎಂದರು.

8 hly 2 1

ಧರ್ಮಾಚರಣೆಯ ಕೇಂದ್ರಗಳು ಇಂದು ವೃದ್ದರಿಂದ ತುಂಬಿ ತುಳುಕುತ್ತಿವೆ. ಅದೇ ಯುವ ಪಿಳಿಗೆ ಬೇರೆಯೇ ಉದ್ದೇಶಗಳ ಕಡೆ ವಾಲುತ್ತಿದೆ. ಇದರಿಂದಲೇ ಇಂದು ಧರ್ಮಕ್ಕೆ ಕುತ್ತು ಬರುತ್ತಿದೆ ಎಂದು ಅಭಿಪ್ರಾಯಪಟ್ಟ ಶಿವಾಚಾರ್ಯ ಸ್ವಾಮೀಜಿಗಳು ಯುವಕರಿಗೆ ಧರ್ಮಪ್ರಭೋದನೆ ಮಾಡುವ ಅವಶ್ಯಕತೆ ಇದೆ ಅಲ್ಲದೇ ಇದು ದೇಶಕ್ಕೆ ಕೂಡ ಅಗತ್ಯವಿದೆ ಎಂದರು.
ಧರ್ಮ ಇದೆ ಎನ್ನುವುದನ್ನು ತೊರಿಸಿಕೊಡಬೇಕಿದೆ. ಅಸ್ತಿತ್ವ, ಅರಿವು, ಪ್ರಯೋಜನ ಈ ಮೂರು ವಾಕ್ಯಗಳ ಅಡಿ ಕೆಲಸ ಮಾಡುವಂತೆ ಕರೆ ನೀಡಿದ ಸ್ವಾಮೀಜಿಗಳು ಅಸ್ತಿತ್ವ ಇರುವುದು ಅರಿವಿಗೆ ಬರದೆ ಇದ್ದರೇ ಪ್ರಯೋಜನಕ್ಕೆ ಬರುವುದಿಲ್ಲ ಯಾವುದೇ ಸಂಗತಿ ಇರುವುದು ಮುಖ್ಯವಲ್ಲ ಅದನ್ನು ಗೊತ್ತು ಮಾಡಿಕೊಳ್ಳುವುದು ಮುಖ್ಯ ಗೊತ್ತು ಮಾಡಿಕೊಳ್ಳುವುದೇ ಶ್ರೀಮಂತಿಕೆ ಎಂದು ಪ್ರತಿಪಾದಿಸಿದರು.
ಮನುಷ್ಯ ಧರ್ಮ ಆಚರಣೆಯನ್ನು ಆರೋಗ್ಯಯುತವಾಗಿದ್ದಾಗ, ಸಶಕ್ತವಾಗಿದ್ದಾಗಲೇ ಮಾಡಬೇಕು ಹೊರತು ಕೊನೆಗಳಿಗೆಯ ಸಮಯದಲ್ಲಿ ಅಲ್ಲ ಎಂದ ಸ್ವಾಮೀಜಿ ಗ್ರಾಮೀಣ ಭಾಗದಲ್ಲಿ ಧರ್ಮದ ಅರಿವು ಪ್ರತಿಯೊಬ್ಬರಿಗೆ ಆಗಬೇಕು, ಲಿಂಗ ಧರಿಸುವವರು ಆಚಾರ ವಿಚಾರಗಳಿಂದ ನಡೆಯಬೇಕು ಎಂದರು.

8 hly 3 1


ದಾರ್ಶನಿಕ, ಧಾರ್ಮಿಕ ಮತ್ತು ಸಾಮಾಜಿಕ ಪರಿಭಾಷೆಗಳ ಬಗ್ಗೆ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಒಗ್ಟಟ್ಟಿನಿಂದ ಸಮಾಜ ಸಂಘಟಿಸುವಂತೆ ಕರೆ ನೀಡಿದರು.
ಅಂಬಿಕಾನಗರ ಶ್ರೀಶೈಲ್ ಶಾಖಾ ಮಠದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ಮಾತನಾಡಿ ಗ್ರಾಮೀಣ ಭಾಗದಿಂದ ಸಂಸ್ಕøತಿ ಬೆಳೆಯಬೇಕು, ತಾಯಿಯೇ ಮೊದಲ ಗುರು, ಮಹಿಳೆಯರಿಂದಲೇ ಇಂದು ಸಂಸ್ಕøತಿ ಉಳಿದಿದೆ ಎಂದ ಸ್ವಾಮಿಜಿಗಳು ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೇ ಧರ್ಮವನ್ನು ನಾವು ರಕ್ಷಿಸಬೇಕು, ಧರ್ಮಾಚರಣೆಗಳು ನಿಲ್ಲಬಾರದು, ಕಣ್ಣಿದ್ದು ಕುರುಡು ಬಾಯಿದ್ದು ಮುಖರಾಗಬಾರದು ಎಂದು ಧರ್ಮ, ಸಂಸ್ಕøತಿ ರಕ್ಷಣೆಯ ಬಗ್ಗೆ ಆಶೀರ್ವಚನ ನೀಡಿದರು.
ಲಿಂಗಾಯತ ಸಮಾಜದ ಪ್ರಮುಖರಾದ ಡಾ.ಟಿಸಿ ಮಲ್ಲಾಪುರಮಠ ಮಾತನಾಡಿ ಭಾರತದಲ್ಲಿ ಪಂಚಪೀಠಗಳು ಪ್ರಮುಖವಾಗಿದ್ದು ಇವುಗಳು ಸಮಗ್ರ ಭಾರತದ ರಕ್ಷಣಾ ಕೇಂದ್ರಗಳಾಗಿವೆ ಎಂದ ಅವರು ಬಾಲ್ಯದಿಂದಲೇ ಮಕ್ಕಳಿಗೆ ಈ ಬಗ್ಗೆ ಶಿಕ್ಷಣ ದೊರೆಯಬೇಕು, ಗ್ರಾಮೀಣ ಮಟ್ಟದ ಜನರಿಗೆ ಸಂಸ್ಕøತಿ, ಧರ್ಮ, ಪಿಠಗಳ ಬಗ್ಗೆ ಪರಂಪರೆಗಳ ಬಗ್ಗೆ ಶಿಕ್ಷಣ ದೊರೆಯಬೇಕು ಜೊತೆಗೆ ಗ್ರಾಮ ಗ್ರಾಮಕ್ಕೆ ಶಿವಾಚಾರ್ಯರ ನೇಮಕ ಆಗಬೇಕೆಂದು ಶ್ರೀಶೈಲ್ ಸ್ವಾಮಿಗಳಲ್ಲಿ ವಿನಂತಿಸಿದರು.
ಪ್ರಮುಖರಾದ ಎಂ.ಸಿ.ಹಿರೇಮಠ, ಎಂಬಿ ತೊರಣಗಟ್ಟಿ, ಶೀವುದೇವ ದೇಸಾಯಿಸ್ವಾಮಿ, ಪುರಸಭೆ ಸದಸ್ಯೆ ರಾಜೇಶ್ವರಿ ಲಿಂಗರಾಜ ಹಿರೇಮಠ, ಉದಯ ಹೂಲಿ, ಶಿವು ಶೆಟ್ಟರ್, ಬಸವರಾಜ ಬೆಂಡಿಗೇರಿಮಠ, ಅಪ್ಪು ಚರಂತಿಮಠ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Culture should be developed from the rural side, Panditrathaya, Shivacharya Mahaswamiji, the need for religious instruction for the youth, Veerakta Math, ಗ್ರಾಮೀಣ ಭಾಗದಿಂದ ಸಂಸ್ಕøತಿ ಬೆಳೆಯಬೇಕು, ಧರ್ಮಾಚರಣೆಯ ಕೇಂದ್ರಗಳು, ಪಂಡಿತಾರಾಧ್ಯ, ಯುವಕರಿಗೆ ಧರ್ಮಪ್ರಭೋದನೆ ಮಾಡುವ ಅವಶ್ಯಕತೆ, ವೀರಕ್ತ ಮಠದಲ್ಲಿ ಭಕ್ತರಿಗೆ ಆಶೀರ್ವಚನ, ಶಿವಾಚಾರ್ಯ ಮಹಾಸ್ವಾಮೀಜಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...