• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭರದಿಂದ ಸಾಗಿದೆ ಕೆಲಸ ಒಂದೇ ವರ್ಷದಲ್ಲಿ ನನಸಾಗುವುದೇ ಹೊನ್ನಾವರ ಬಸ್ಟ್ಯಾಂಡ್ ಕನಸು..?

November 12, 2020 by Lakshmikant Gowda Leave a Comment

ಪಟ್ಟಣದ ಹೃಯಭಾಗದಲ್ಲಿ ಐದೂವರೆ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಬಸ್ಟ್ಯಾಂಡ್ ಕಾಮಗಾರಿ ಭರದಿಂದ ಸಾಗಿದ್ದು ಒಂದು ವರ್ಷದೊಳಗೆ ನಿರ್ಮಾಣಕಾಮಗಾರಿ ಪೂರ್ಣಗೊಂಡು ತಾಲೂಕಿನ ಜನರ ಬಹುದಿನದ ಕನಸು ಸಾಕಾರಗೊಳ್ಳಬಹುದಾ ಎನ್ನುವ ನಿರೀಕ್ಷೆ ಮೂಡಿದೆ.

02 hnr 2 1


ಪೆಬ್ರವರಿ 29 ರಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೇ ಸ್ವತ: ಶಿಲಾನ್ಯಾಸ ನೆರವೇರಿಸಿದ ನಂತರ ಕೊರೊನಾ ಲಾಕ್‍ಡೌನ್ ಜಾರಿಯಾಗಿ ಎಲ್ಲಾ ಕೆಲಸ ಕಾರ್ಯಗಳೂ ಸ್ಥಗಿತವಾಗಿದ್ದವು. ಲಾಕ್‍ಡೌನ್ ತೆರವಾದ ನಂತರ ಕೆಲಸ ಆರಂಭಿಸಿದ ಗುತ್ತಿಗೆದಾರರು ಕೆಲಸಕ್ಕೆ ವೇಗ ನೀಡಿದ್ದಾರೆ. ಕೆಲಸ ಆರಂಭಿಸಿದ ಒಂದೇ ತಿಂಗಳಲ್ಲಿ ಪಿಲ್ಲರ್‍ಗಳು ಎದ್ದುನಿಲ್ಲುತ್ತಿದೆ. ಬಸ್ಟ್ಯಾಂಡ್ ಮೊದಲಿದ್ದ ಜಾಗದಲ್ಲಿಯೇ ನೂತನ ಬಸ್ ನಿಲ್ದಾಣ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸ್ಥುತ ಬಸ್ಟ್ಯಾಂಡ್ ಪಕ್ಕದ ರಸ್ತೆಯ್ನೇ ಬಳಸಿಕೊಂಡು ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು, ಶೌಚಾಲಯದಂತ ಮೂಲಭುತ ಸೌಲಭ್ಯಗಳೂ ಇಲ್ಲದೆ ಪ್ರಯಾಣಿಕರು ಚಾಲಕರು ನಿರ್ವಾಹಕರಾದಿಯಾಗಿ ಎಲ್ಲರೂ ಪ್ರತಿ ದಿನ ಅನುಭವಿಸುತ್ತಿರುವ ಕಷ್ಟ ಶಾಸಕ ದಿನಕರ ಶೆಟ್ಟಿ ಅವರ ಅರಿವಿಗೂ ಬಂದಂತಿದ್ದು ಆದಷ್ಟುಬೇಗ ಕೆಲಸಮುಗಿಸಲು ಮುತುವರ್ಜಿ ವಹಿಸುತ್ತಿದ್ದಾರೆನ್ನಲಾಗಿದೆ.
ನವೆಂಬರ್‍ನಿಂದ ಮೇ ಕೊನೆಯವರೆಗೂ ಕೆಲಸ ನಡೆಯುತ್ತಿರುವ ವೇಗವನ್ನು ಕಾಯ್ದುಕೊಂಡರೆ ಮೊದಲ ಹಂತ ಪೂರ್ಣಗೊಳ್ಳಬಹುದು. ಅದು ಸಾಧ್ಯವಾದರೆ ಮುಂದಿನ ಮಳೆಗಾಲ ಬರುವಷ್ಟರಲ್ಲಿ ಬಸ್ಟ್ಯಾಂಡ್ ಬಳಕೆಗೆ ಸಿಗಬಹುದು ಇಲ್ಲವಾದರೆ ಪ್ರಯಾಣಿಕರು ಮಳೆಯಲ್ಲಿಯೇ ಬಸ್‍ಗಾಗಿ ಕಾಯುವ ದುಸ್ಥಿತಿ ಎದುರಾಗಲಿದೆ. ಶಾಲಾ ಕಾಲೇಜುಗಳ ತರಗತಿ ಆರಂಭವಾಗದಿರುವುದೂ ಸಾರಿಗೆ ಇಲಾಖೆಯ ಪಾಲಿಗೆ ವರವಾಗಿ ಪರಿಣಮಿಸಿದೆ. ಸಮಸ್ಯೆಗಳು ಬಿಗಡಾಯಿಸುವ ಮೊದಲೇ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳುವುದು ಒಳ್ಳೆಯದು ಎನ್ನುವ ಅಭಿಪ್ರಾಯವಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: the bus stand, the bus stand will be available for use, the contractors who started the work long after the lockdown, the new bus station, the quarry completed, When the rainy season arrives, ಕೆಲಸ ಆರಂಭಿಸಿದ ಗುತ್ತಿಗೆದಾರರು, ಜನರ ಬಹುದಿನ, ನೂತನ ಬಸ್ ನಿಲ್ದಾಣ, ಪೂರ್ಣಗೊಂಡು, ಬಸ್ಟ್ಯಾಂಡ್ ಮೊದಲಿದ್ದ ಜಾಗ, ಮಳೆಗಾಲ ಬರುವಷ್ಟರಲ್ಲಿ ಬಸ್ಟ್ಯಾಂಡ್ ಬಳಕೆಗೆ ಸಿಗಬಹುದು, ಲಾಕ್‍ಡೌನ್ ತೆರವಾದ ನಂತರ, ಶಿಲಾನ್ಯಾಸ ನೆರವೇರಿಸಿದ

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...