ಹೊನ್ನಾವರ ತಾಲೂಕಿನ ಗೇರುಸೊಪ್ಪಾ ಕೆಪಿಸಿಯಲ್ಲಿ ಇಲೆಕ್ಟೀಕಲ್ ಆಫರೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಪ್ರಸುತ್ತ ಗೇರುಸೊಪ್ಪಾ ಕೆ.ಪಿಸಿಯಲ್ಲಿ ವಾಸವಾಗಿದ್ದ ಕೆ.ಆರ್.ರಮೇಶ(45) ಇವರ ಮೃತದೇಹ ನಗರಬಸ್ತಿಕೇರಿ ಸಮೀಪ ಶರಾವತಿ ನದಿತೀರದಲ್ಲಿ ಪತ್ತೆಯಾಗಿದೆ. ಕಳೆದ ಎರಡು ದಿನದಿಂದ ಕಛೇರಿಗೆ ಹೋಗಿ ಬರುತ್ತೇನೆ ಎಂದು ತೆರಳಿದವರು ಮನೆಗೆ ಆಗಮಿಸಿಲ್ಲ ಎಂದು ಕುಟುಂಬದವರು ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದ ಪೋಲಿಸರಿಗೆ ಶರಾವತಿ ನದಿಯಲ್ಲಿ ಶವ ಪತ್ತೆಯಾಗಿದೆ. ನದಿ ತೀರದ ಹತ್ತಿರ ನಡೆದುಕೊಂಡು ಹೋಗುವಾಗ ಕಾಲುಜಾರಿ ಬಿದ್ದು ಮೃತ ಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment