ಭಟ್ಕಳ: ಮಳೆಗಾಲ ಮುಗಿಯುತ್ತಿದ್ದಂತೆಯೇ ಭಟ್ಕಳ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ವೇಗವನ್ನು ನೀಡಲಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ತೆರಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು ಮುಂದಾದರು. ತಾಲೂಕಿನ ರಂಗಿಕಟ್ಟೆಯಿಂದ ಸಂಶುದ್ದೀನ್ ಸರ್ಕಲ್ಗೆ ಮುಖಮಾಡಿ ಮುಂದಕ್ಕೆ 45ಮೀ. ಅಗಲದ ರಸ್ತೆಯನ್ನು ನಿರ್ಮಿಸಲು ಸಿದ್ಧತೆ ನಡೆದಿದ್ದು, ಫ್ಲೈಓವರ್ ಕಾರಣಕ್ಕಾಗಿ ಸಂಶುದ್ದೀನ್ ಸರ್ಕಲ್ನಲ್ಲಿಯೇ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಭಟ್ಕಳ ಪಟ್ಟಣದಲ್ಲಿ ಈಗಾಗಲೇ 29 ಖಾಸಗಿ ನಿವೇಶನಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, 25 ಪ್ರಕರಣಗಳು ಈಗಾಗಲೇ ಮುಕ್ತಾಯ ಕಂಡಿವೆ. ಕೆಲವೇ ದಿನಗಳಲ್ಲಿ ಉಳಿದ 4 ಪ್ರಕರಣಗಳನ್ನು ಬಗೆ ಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಕಡೆ ಅಂಗಡಿಕಾರರು ಕಾಲಾವಕಾಶವನ್ನು ಕೇಳಿದ್ದು, ದೀಪಾವಳಿಯ ನಂತರ ಅಗಲೀಕರಣ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಲಿದೆ ಎಂದು ಭೂಸ್ವಾಧೀನಾಧಿಕಾರಿ ಸಾಜೀದ್ ಮುಲ್ಲಾ ಮಾಹಿತಿ ನೀಡಿದ್ದಾರೆ.
ಬೈಟ್: ಸಾಜೀದ್ ಮುಲ್ಲಾ ಭೂಸ್ವಾಧೀನಾಧಿಕಾರಿ
Leave a Comment