• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯವಾಸಿಗಳ ಸಮಸ್ಯೆ ಪರಿಹಾರ ಚರ್ಚಾ ಸಭೆಗೆ ಆರ್.ಎಫ್.ಒ ಗೈರು; ಅರಣ್ಯ ಹೋರಾಟಗಾರರ ತೀವ್ರ ಆಕ್ರೋಶ

November 19, 2020 by bkl news Leave a Comment

ಭಟ್ಕಳ: ಅರಣ್ಯ ಅಧಿಕಾರಿಗಳ ಕಿರುಕುಳ ದೌರ್ಜನ್ಯ ಮುಂದಿನ 15 ದಿನಗಳಲ್ಲಿ ನಿಯಂತ್ರಿಸಲು ಅರಣ್ಯ ಇಲಾಖೆಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದು, ಮುಖ್ಯ ಮಂತ್ರಿ ಆದೇಶ ಪಾಲಿಸದ ಸ್ಥಳೀಯ ಆರ್.ಎಫ್.ಓ. ಕೃತ್ಯ ಖಂಡಿಸಿ ಮುಂದಿನ ತಿಂಗಳು ಚಳಿಗಾಲದ ಅಧಿವೇಶನ ಜರುಗುತ್ತಿರುವ ಸಂದರ್ಭದಲ್ಲಿ  ಮುಖ್ಯ ಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಜರುಗಿಸಲಾಗುವುದೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದರು.
ಭಟ್ಕಳದ ಎ.ಎಸ್.ಪಿ. ನಿಖಿಲ್ ಅವರ ಮಧ್ಯಸ್ಥಿಕೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಚರ್ಚೆಗೆ ಪರಿಹಾರೋಪ ಸಭೆಯಲ್ಲಿ ಅರಣ್ಯ ಇಲಾಖೆಯ ಪರವಾಗಿ ಆಗಮಿಸಿದ ಹೊನ್ನಾವರದ ಎ.ಸಿ.ಎಫ್. ಭೋರಯ್ಯ ಇವರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. 

IMG 20201119 WA0097


ಸಭೆಗೆ ಸ್ಥಳೀಯ ಆರ್.ಎಫ್.ಓ. ಸವಿತಾ ದೇವಾಡಿಗ ಗೈರು ಆಗಿದ್ದನ್ನು ತೀವ್ರವಾಗಿ ಖಂಡಿಸಿರುವ ಅತಿಕ್ರಮಣ ಹೋರಾಟಗಾರರು, ಸಭೆಗೆ ಆರ್.ಎಫ್.ಓ. ಹಾಜರಿಗೆ ಒತ್ತಾಯಿಸಿ ಅರಣ್ಯ ಸಿಬ್ಬಂಧಿಗಳ ಅಮಾನವೀಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 
ಸ್ಥಳೀಯ ತಾಲೂಕಾ ಅರಣ್ಯ ಅತಿಕ್ರಮಣದಾರರ ಹೋರಾಟಗಾರರ ವೇದಿಕೆಯ ಸದಸ್ಯರು ಅರಣ್ಯ ಸಿಬ್ಬಂದಿಗಳಿಂದ ಜರುಗುತ್ತಿರುವ ದೌರ್ಜನ್ಯದ ಸಾಕ್ಷ್ಯ ಚಿತ್ರ, ವಿಡಿಯೋ, ದಾಖಲೆ ಸಹಿತ ತಾಲೂಕಿನಲ್ಲಿ ಜರುಗುತ್ತಿರುವ ಅರಣ್ಯ ಸಿಬ್ಬಂದಿಗಳ ಕಾನೂನುಬಾಹಿರ ಕೃತ್ಯದ ಕುರಿತು ತೀವ್ರ ಆಕ್ಷೇಪ ಸಭೆಯಲ್ಲಿ ವ್ಯಕ್ತಪಡಿಸಿದರು. 
ಆರ್.ಎಫ್.ಓ. ವಿರುದ್ಧ ಆಕ್ರೋಶ: ಕಾನೂನು ಬಾಹೀರವಾಗಿ, ಕಾನೂನಿಗೆ ವ್ಯತಿರಿಕ್ತವಾಗಿ ದೈಹಿಕ ಬಲದಿಂದ ವಿಚಾರಣೆಗೂ ಅವಕಾಶ ನೀಡದೇ ಅತಿಕ್ರಮಣದಾರರ ಮೇಲೆ ದೌರ್ಜನ್ಯ ಎಸಗುವ ಕುರಿತು ಸಭೆಗೆ ಗೈರು ಹಾಜರಿದ್ದ ಸ್ಥಳೀಯ ಆರ್.ಎಫ್.ಓ. ಸವಿತಾ ದೇವಡಿಗ ಇವರನ್ನು ಸಭೆಗೆ ಕರೆಸಬೇಕೆಂದು ಹಾಗೂ ಅವರ ಹೇಳಿಕೆ ಪಡೆಯಬೇಕೆಂದು ಹೋರಾಟಗಾರರು ಆಕ್ರೋಶಭರಿತವಾಗಿ ಅಧಿಕಾರಿಗಳಿಗೆ ಆಗ್ರಹಿಸಿದರು. ಒಂದು ತಾಸಿನ ವರೆಗೂ ಬಾರದ ಅರಣ್ಯ ಸಿಬ್ಬಂಧಿಗಳ ವಿರುದ್ಧ ತೀವ್ರ ತರಹದ ಆಕ್ಷೇಪ ವ್ಯಕ್ತವಾಗಿ ಎ.ಎಸ್.ಪಿ. ನಿಖಿಲ್ ಆವರ ಮಧ್ಯಸ್ಥಿಕೆಯಲ್ಲಿ ಸಭೆ ಮುಂದುವರಿದಿದ್ದು ವಿಶೇಷವಾಗಿತ್ತು. 
ಮುಖ್ಯಮಂತ್ರಿ ಹೇಳಿಕೆಗೂ ಕಿಮ್ಮತ್ತಿಲ್ಲ. ಕಳೆದ ವರ್ಷದ ಅಧಿವೇಶನದಲ್ಲಿ ಇನ್ನು ಮುಂದೆ ಅರಣ್ಯ ಅತಿಕ್ರಮಣದಾರರ ವಿರುದ್ಧ ಒಂದೂ ದೌರ್ಜನ್ಯ ಜರುಗದಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದಾಗ್ಯೂ ಭಟ್ಕಳದಲ್ಲಿ ಪದೇ ಪದೇ ಮುಖ್ಯ ಮಂತ್ರಿಗಳ ನಿರ್ದೇಶನಕ್ಕೆ ಕಿಮ್ಮತ್ತು ಇಲ್ಲವೋ? ಎಂಬ ಪ್ರಶ್ನೆ ಸಭೆಯಲ್ಲಿ ಉಪಸ್ಥಿತರಿದ್ದ ಅರಣ್ಯ ಅಧಿಕಾರಿ ಬೋರಯ್ಯ ಅವರಿಗೆ ಪ್ರಶ್ನಿಸಲಾಯಿತು. 

IMG 20201119 WA0098


ಸಭೆಯಲ್ಲಿ ತಾಲೂಕಾ ಅಧ್ಯಕ್ಷ ರಾಮಾ ಮೊಗೇರ, ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಎಸ್.ಎಂ. ಸೈಯ್ಯದ್ ಪರ್ವಾಝ್,  ದೇವರಾಜ ಗೊಂಡ, ಪಾಂಡುರಂಗ ನಾಯ್ಕ, ಸಲೀಂ ರಿಜ್ವಾನ್, ಅಬ್ದುಲ್ ಖಯ್ಯುಂ ಕೋಲಾ, ನಾರಾಯಣ ನಾಯ್ಕ ಹಾಡವಳ್ಳಿ, ದತ್ತಾ ನಾಯ್ಕ, ಶಂಕರ ನಾರಾಯಣ ನಾಯ್ಕ, ಚಂದ್ರು ನಾಯ್ಕ, ಯಶೋಧರ ಪೂಜಾರಿ, ಲೀಲಾ ವೆಂಕಟೇಶ ಮೊಗೇರ ಬೆಳಕೆ, ಲಕ್ಷ್ಮೀ ಮಹಾಬಲೇಶ್ವರ ನಾಯ್ಕ, ಬೀಬಿ ಹಲೀಮಾ ಭಟ್ಕಳ, ಶೋಭಾ ರಾಮಕೃಷ್ಣ ಕಾರ್ವಿ, ದೇವರಾಜ ಗೊಂಡ ಮುಂತಾದವರು  ಭಾಗವಹಿಸಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: Chief Minister's Residence, extreme outrage for action, Forest Land Rights Fight, Forest Land Rights Fighters Forum, R.F.O. Defendant, R.F.O. Winter Session, Session of the year, Severe Outrage for Action, Siege, Siege Massive Protest, Winter Session, Year Session, ಅರಣ್ಯ ಭೂಮಿ ಹಕ್ಕು ಹೋರಾಟ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ, ಆರ್.ಎಫ್.ಓ. ಕೃತ್ಯ ಖಂಡಿಸಿ, ಕೃತ್ಯಕ್ಕೆ ತೀವ್ರ ಆಕ್ರೋಶ, ಚಳಿಗಾಲದ ಅಧಿವೇಶನ, ಮುಖ್ಯ ಮಂತ್ರಿ ನಿವಾಸ, ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ, ವರ್ಷದ ಅಧಿವೇಶನ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...