ಭಟ್ಕಳ: ಮದುವೆ ಸಿದ್ದತೆ ಮಾಡಿಕೊಳ್ಳುತ್ತಿದ್ದ ಮನೆಗೆ ಚಿನ್ನ ನೀಡಲೆಂದು ಸುಮಾರು 2.5ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 1.50 ಲಕ್ಷ ರೂ ತೆಗೆದುಕೊಂಡು ಹೋಗುವಾಗ ಕಳೆದಿದ್ದು, ಸಿಕ್ಕಿದವರು ದಯವಿಟ್ಟು ಮರಳಿಸಿ ಎಂದು ಭಾಸ್ಕರ ಲಚ್ಮಯ್ಯ ಮೊಗೇರ ವಿನಂತಿಸಿದ್ದಾರೆ.

ಶಿರೂರಿನ ಅಳ್ವೆಕೋಡಿ ನಿವಾಸಿಯಾಗಿದ್ದ ಭಾಸ್ಕರ ಲಚ್ಮಯ್ಯ ಮೊಗೇರ ಇವರು ಗುರುವಾರ ಬೆಳಿಗ್ಗೆ ತನ್ನ ತಂಗಿಯ ಮನೆಗೆ 2.50ಲಕ್ಷ ರೂ ಮೌಲ್ಯದ ಚಿನ್ನ ಮತ್ತು 1.50ಲಕ್ಷದ ನಗದು ತೆಗೆದುಕೊಂಡು ಹೋಗುತಿದ್ದರು. ಶಿರೂರಿನಿಂದ ಭಟ್ಕಳ ಸರ್ಕಲ್ ಪೆಟ್ರೋಲ್ ಪಂಪ್ ಬಳಿಯವರೆಗೂ ಚಿನ್ನ ಮತ್ತು ನಗದು ಇದ್ದ ಬ್ಯಾಗ್ ಅವರ ಬಳಿ ಇತ್ತು. ತೆಂಗಿನಗುಂಡಿ ಕ್ರಾಸ್ ಬಳಿಯಲ್ಲಿ ಬ್ಯಾಗ ಕಳೆದಿದೆ. ಮದುವೆ ಮನೆಗೆ ಕೊಂಡೊಯ್ಯುತ್ತಿದ್ದ ಆಭರಣ ಮತ್ತು ನಗದು ಕಳೆದಿದ್ದು ಭಾಸ್ಕರ ಮೊಗೇರ ಆತಂಕಗೊಂಡಿದ್ದಾರೆ. ಸಿಕ್ಕಿದವರು ದಯವಿಟ್ಟು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ, ಹತ್ತಿರದ ಯಾವುದೆ ಪೊಲೀಸ್ ಠಾಣೆಗೆ ಅಥವಾ 7899292841 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಮರಳಿಸುವಂತೆ ವಿನಂತಿಸಿದ್ದಾರೆ. ಬ್ಯಾಗ ಮರಳಿಸಿದವರಿಗೆ ಸೂಕ್ತ ಬಹುಮಾನ ನೀಡಿ ಆದರದಿಂದ ಗೌರವಿಸುವದಾಗಿ ಅವರು ತಿಳಿಸಿದ್ದಾರೆ.
Leave a Comment