ಭಟ್ಕಳ: ಒಂದೆಡೆ ಕೃಷಿಗೆ ಉತ್ತೇಜನ ನೀಡುವ ಸರ್ಕಾರ, ಇನ್ನೊಂದೆಡೆ ಕೃಷಿಗೆ ಪೂರಕವಾದ ವಾತವರಣ ಒದಗಿಸಿದ ಅಧಿಕಾರಿಗಳು, ಇದರಿಂದ ಬೇಸತ್ತ ರೈತರು ತಾಲೂಕಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೭೦೦ ಹೇಕ್ಟರ್ ಕೃಷಿ ಜಮೀನು ಇದೆ. ಇದಕ್ಕೆ ಕಡವಿನಕಟ್ಟೆ ಡ್ಯಾಂನಿದ ಕಾಲುವೆ ಮೂಲಕ ಇಲ್ಲಿನ ಜಮೀನುಗಳಿಗೆ ನೀರು ಹರಿಯಬಿಡಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಹರಿಯುವ ನೀರಿನ ರಭಸಕ್ಕೆ ಕಾಲುವೆಗಳೆಲ್ಲಾ ಹೂಳು ತುಂಬಿಕೊಡಿದೆ. ಇದರಿಂದ ಕಡವಿನಕಟ್ಟೆ ಡ್ಯಾಂನಿದ ನೀರು ರೈತರ ಕೃಷಿ ಜಮೀನುಗಳಿಗೆ ತಲುಪುತ್ತಿಲ್ಲ. ಇಲ್ಲಿನ ಹುಲ್ಲುಕ್ಕಿ, ನೀರಕಂಟ,ಚಿತ್ರಪುರ್,ವೆಂಕಟಾಪುರ ಸೇರಿ ಪಕ್ಕೆ ಸ್ಥಳೀಯ ರೈತು ಹಲವಾರು ಬಾರಿ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ರೈತರ ಮನವಿ ಸ್ಪಂದನೆ ನೀಡಿಲ್ಲ. ಆತ್ತ ಕೃಷಿ ಜಮೀನುಗಳು ಸೊರಗಿ ಹೋಗುವದನ್ನು ನೋಡಿದ ರೈತರು ಸ್ವತಃ ಹೂಳು ಎತ್ತಲು ಆರಂಭಿಸಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿನ ಅಕ್ಕ ಪಕ್ಕದ ರೈತರು ಕಾಲುವೆಯಲ್ಲಿ ನೀರು ಹರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.ಆದರೆ ಪ್ರಯೋಜನವಾಗದೆ ಪ್ರತಿಭಟನೆ ನಡೆಸಿದ್ದಾರೆ.
ಶಿರಾಲಿ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆಗಿಳಿದ ರೈತರು ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆ ಸೇರಿದಂತೆ ಭತ್ತವನ್ನು ನಾಟಿ ಮಾಡಲಾಗಿದೆ. ಆದರೆ ನೀರು ಪೊರೈಕೆಯಾಗದೆ ಬೆಳೆಗಳು ಸೊರಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಕಡವಿನಕಟ್ಟೆಯ ಡ್ಯಾಂನಿದ ಶಿರಾಲಿಯವರಗೆ ಹರಿದು ಬರುವ ನಾಲೆಯ ಹೂಳು ತುಂಬಿರುವ ಪ್ರದೇಶವನ್ನು ಸ್ವಚ್ಚಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ಶನಿವಾರದೊಳಗೆ ನಮ್ಮ ಕೃಷಿ ಭೂಮಿಗೆ ನೀರು ಹರಿಸದಿದ್ದರೆ ಶಿರಾಲಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
Leave a Comment