• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚಿಕ್ಕ ನೀರಾವರಿಯ ನಿರ್ಲಕ್ಷ್ಯ;ಹುಳಿ ನಿಂದಾಗಿ ಕಾಲುವೆಯಲ್ಲಿ ಹರಿಯದ ನೀರು ;ರೈತರ ಪ್ರತಿಭಟನೆ

January 4, 2021 by bkl news Leave a Comment

ಭಟ್ಕಳ: ಒಂದೆಡೆ ಕೃಷಿಗೆ ಉತ್ತೇಜನ ನೀಡುವ ಸರ್ಕಾರ, ಇನ್ನೊಂದೆಡೆ ಕೃಷಿಗೆ ಪೂರಕವಾದ ವಾತವರಣ ಒದಗಿಸಿದ ಅಧಿಕಾರಿಗಳು, ಇದರಿಂದ ಬೇಸತ್ತ ರೈತರು  ತಾಲೂಕಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. 


ತಾಲೂಕಿನ ಶಿರಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೭೦೦ ಹೇಕ್ಟರ್ ಕೃಷಿ ಜಮೀನು ಇದೆ. ಇದಕ್ಕೆ ಕಡವಿನಕಟ್ಟೆ ಡ್ಯಾಂನಿದ ಕಾಲುವೆ ಮೂಲಕ ಇಲ್ಲಿನ ಜಮೀನುಗಳಿಗೆ ನೀರು ಹರಿಯಬಿಡಲಾಗುತ್ತಿದೆ. ಆದರೆ ಮಳೆಗಾಲದಲ್ಲಿ ಹರಿಯುವ ನೀರಿನ ರಭಸಕ್ಕೆ ಕಾಲುವೆಗಳೆಲ್ಲಾ ಹೂಳು ತುಂಬಿಕೊಡಿದೆ. ಇದರಿಂದ ಕಡವಿನಕಟ್ಟೆ ಡ್ಯಾಂನಿದ ನೀರು ರೈತರ ಕೃಷಿ ಜಮೀನುಗಳಿಗೆ ತಲುಪುತ್ತಿಲ್ಲ. ಇಲ್ಲಿನ ಹುಲ್ಲುಕ್ಕಿ, ನೀರಕಂಟ,ಚಿತ್ರಪುರ್,ವೆಂಕಟಾಪುರ ಸೇರಿ ಪಕ್ಕೆ ಸ್ಥಳೀಯ ರೈತು ಹಲವಾರು ಬಾರಿ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ರೈತರ ಮನವಿ ಸ್ಪಂದನೆ ನೀಡಿಲ್ಲ. ಆತ್ತ ಕೃಷಿ ಜಮೀನುಗಳು ಸೊರಗಿ ಹೋಗುವದನ್ನು ನೋಡಿದ ರೈತರು ಸ್ವತಃ ಹೂಳು ಎತ್ತಲು ಆರಂಭಿಸಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲಿನ ಅಕ್ಕ ಪಕ್ಕದ ರೈತರು ಕಾಲುವೆಯಲ್ಲಿ ನೀರು ಹರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ.ಆದರೆ ಪ್ರಯೋಜನವಾಗದೆ ಪ್ರತಿಭಟನೆ ನಡೆಸಿದ್ದಾರೆ. 
ಶಿರಾಲಿ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆಗಿಳಿದ ರೈತರು ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆ ಸೇರಿದಂತೆ ಭತ್ತವನ್ನು ನಾಟಿ ಮಾಡಲಾಗಿದೆ. ಆದರೆ ನೀರು ಪೊರೈಕೆಯಾಗದೆ ಬೆಳೆಗಳು ಸೊರಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಕಡವಿನಕಟ್ಟೆಯ ಡ್ಯಾಂನಿದ ಶಿರಾಲಿಯವರಗೆ ಹರಿದು ಬರುವ ನಾಲೆಯ ಹೂಳು ತುಂಬಿರುವ ಪ್ರದೇಶವನ್ನು ಸ್ವಚ್ಚಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ಶನಿವಾರದೊಳಗೆ ನಮ್ಮ ಕೃಷಿ ಭೂಮಿಗೆ ನೀರು ಹರಿಸದಿದ್ದರೆ ಶಿರಾಲಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News, ಕೃಷಿ Tagged With: A lot of effort to irrigate the canal, Chitrapur, farmland, flowing water, levee, Nirakanta, through dammed canal. ಕಾಲುವೆಯಲ್ಲಿ ನೀರು ಹರಿಸಲು ಸಾಕಷ್ಟು ಪ್ರಯತ್ನ, Venkatapur, ಕೃಷಿ ಜಮೀನು, ಕೃಷಿ ಜಮೀನುಗಳು ಸೊರಗಿ, ಕೃಷಿಗೆ ಪೂರಕವಾದ ವಾತವರಣ, ಚಿತ್ರಪುರ್, ಡ್ಯಾಂನಿದ ಕಾಲುವೆ ಮೂಲಕ, ನೀರಕಂಟ, ಬೇಸತ್ತ ರೈತರು, ವೆಂಕಟಾಪುರ ಸೇರಿ, ಶಿರಾಲಿ ಪಂಚಾಯಿತಿ ವ್ಯಾಪ್ತಿ, ಸುಮಾರು ೭೦೦ ಹೇಕ್ಟರ್, ಹರಿಯುವ ನೀರಿನ ರಭಸ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar