ಹೊನ್ನಾವರ :ತಾಲೂಕಿನ ಸುಬ್ರಹ್ಮಣ್ಯದ ಶ್ರೀ ರಾಘವೇಂದ್ರ ಭಾರತೀ ಸಂಸ್ಕೃತ ಸ್ನಾತಕ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿರುವ ಪತಂಜಲಿ ವೆಂಕಟೇಶ
ವೀಣಾಕರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಂಸ್ಕೃತ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ಕುಲಸಚಿವರಾಗಿದ್ದ ಪ್ರೊ.ಮಹಾದೇವ ಎನ್.ಜೋಶಿ ಇವರ ಮಾರ್ಗದರ್ಶನದಲ್ಲಿ ” ಸಾಮಾಜಿಕ ಸಮಸ್ಯೆಗಳಿಗೆ ವೈದಿಕ ಪರಿಹಾರಗಳು- ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್,ಡಿ. ಪದವಿಯನ್ನು ನೀಡಲಾಗಿದೆ.ಸಂಸ್ಕೃತದಲ್ಲಿ ಅಲಂಕಾರ ಶಾಸ್ತ್ರ ಮತ್ತು ವ್ಯಾಕರಣ ಶಾಸ್ತ್ರಗಳಲ್ಲಿ ಎರಡು ಸ್ನಾತಕೋತ್ತರ ಪದವಿಯನ್ನು ಅವರು ಪಡೆದಿರುತ್ತಾರೆ.ವಿಜ್ಞಾನ ವಿಷಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನೀಯರಿಂಗ ಪದವಿ ಪಡೆದಿರುವ ಪತಂಜಲಿ ಅವರು ಹೊನ್ನಾವರ ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯದ ಪಂಡಿತ ಪ್ರಕಾಂಡ ಪ್ರೊ.ವೆಂಕಟೇಶ ಕೃಷ್ಣ ವೀಣಾಕರ ಮತ್ತು ಶ್ರೀಮತಿ ಲಕ್ಷ್ಮೀ ವೀಣಾಕರ ಅವರ ಪುತ್ರರಾಗಿರುತ್ತಾರೆ. ಅಧ್ಯಯನ ಅಧ್ಯಾಪನ ಸಂಶೋಧನೆ ಪಂಚಾಂಗ ರಚನೆ ಹಾಗು ಹಿಂದು ಸಂಸ್ಕೃತಿಯ ಸಂವರ್ಧನೆಯಕೆಲಸದಲ್ಲಿ ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ.
Leave a Comment