• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿ

January 31, 2021 by bkl news Leave a Comment

ಭಟ್ಕಳ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ  ಎಚ್.ಆರ್‍.ಎಸ್ ಭಟ್ಕಳ ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು. ಥೇರಿ ಮತ್ತು ಪ್ರಾಕ್ಟಿಕಲ್ ಮೂಲಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗೊಳ್ಳಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಯಿತು.ಮಂಗಳೂರು ಎಚ್.ಆರ್‍.ಎಸ್ ಲೀಡರ್‍ ಅಮೀರ್‍ ಹಾಗೂ ಅವರ ತಂಡ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

IMG 20210130 WA0083

ಕಟ್ಟಡ ಹತ್ತುವುದು, ಅಗ್ನಿಶಮನ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಏನೆಲ್ಲ ಸುರಕ್ಷತೆಗಳನ್ನು ಪಾಲಿಸಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಬೇಕು ಎಂಬುದುರ ಕುರಿತಂತೆ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಎಚ್.ಆರ್‍.ಎಸ್ ಕಾರ್ಯಚಟುವಟಿಕೆಗಳನ್ನು ವಿವರಿಸಿ ಮತನಾಡಿದ ಮಂಗಳೂರಿನ ಅಮೀರ್‍, ಎಚ್.ಆರ್‍.ಎಸ್ ರಾಜ್ಯಮಟ್ಟದ ಸರ್ಕಾರೇತರ ಸಂಸ್ಥೆಯಾಗಿದ್ದು ಇದು ಪ್ರಕೃತಿ ವಿಪತ್ತು ಮತ್ತು ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ಸಹಾಯ ಮತ್ತು ಪುನರ್ವಸತಿಯನ್ನು ಕಲ್ಪಸಿಕಡಲು ಶ್ರಮಿಸುತ್ತಿದೆ. ಮಾನವೀಯ ಸಹಾಯವನ್ನು ಒದಗಿಸಲು ಇದಕ್ಕೆ ತನ್ನದೆ ಆದ ಸ್ವಯಂಸೇವಕ ತಂಡವಿದ್ದು ಅವರು ನಿಷ್ಠಾವಂತ ಶ್ರದ್ಧಾಳುಗಾಗಿರುವರು. ಇದು ತನ್ನ ಸಮಾಜಸೇವಾ ಚಟುವಟಿಕೆಗಳ ಮೂಲಕ ಮಾನವೀಯ ಸೇವಾ ಸ್ಪೂರ್ತಿನ್ನು ಜಾಗೃತಗೊಳಿಸುವುದರೊಂದಿಗೆ ಸಾಮಾಜಿಕ ಕೆಡುಕಗಳಾದ ಮದ್ಯಪಾನ, ಮಾದಕ ವ್ಯಸನ ಮುಂತಾದವುಗಳ ನಿರ್ಮೂಲನೆಗೂ ನಿರಂತರ ಶ್ರಮಿಸುತ್ತದೆ ಎಂದರು. ಎಚ್.ಆರ್‍.ಎಸ್ ಕಾರ್ಯಕರ್ತರಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ, ವಿಪತ್ತು ನಿರ್ವಹಣೆಯ ಸೂಕ್ತ ತರಬೇತಿಗಳನ್ನು ನೀಡುತ್ತದೆ ಎಂದ ಅವರು, ಎಚ್.ಆರ್‍.ಎಸ್ ನ ಗುರಿ ಕಾರ್ಯಕರ್ತರ ಅದಮ್ಯ ಉತ್ಸಾಹ ಮತ್ತು ನಿಸ್ವಾರ್ಥ ಸಹಕಾರದಿಂದ ಮಾನವೀಯ ನೆಲೆಯಲ್ಲಿ ಆರೋಗ್ಯ ಶಿಕ್ಷಣ, ತುರ್ತುಸೇವೆಗಳನ್ನು ಒದಗಸಿ ಹಸಿವು ಮುಕ್ತ ಆರೋಗ್ಯಪೂರ್ಣ ನಿರ್ಮಲ ಸಮಾಜದ ನಿರ್ಮಾಣ ಮಾಡುವುದಾಗಿದೆ. ಸಮಾಜದ ದಮಿನತ ವರ್ಗದ ಜನರಿಗೆ ಮೂಲಭೂತ ಸೌಲಭ್ಯಗಳಾದ ಆಹಾರ, ವಸತಿ, ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದಲ್ಲದೆ ಪ್ರಕೃತಿ ವಿಕೋಪಗಳಾದ ಭೂಕಂಪ, ನೆರೆ, ಸಾಂಕ್ರಾಮಿಕ ರೋಗ ಮತ್ತು ಮಾನವಕೃತ ವಿಪತ್ತುಗಳ ಸಂತೃಸ್ತರಿಗೆ ಸಹಾಯಹಸ್ತ ಒದಗಿಸಿ ಅವರ ಸ್ವಾವಲಂಬನೆಗೆ ಅನುವು ಮಾಡಿಕೊಡುವುದಾಗಿ ಎಂದು ಅವರು ತಿಳಿಸಿದರು..ಈ ಸಂದರ್ಭದಲ್ಲಿ ಮೌಲಾನ ಸೈಯ್ಯದ್ ಝುಬೇರ್‍ ಎಸ್.ಎಂ., ಭಟ್ಕಳದ ಎಚ್.ಆರ್‍.ಎಸ್ ಸಂಚಾಲಕ ರಯೀಸ್ ಆಹ್ಮದ್, ಖಮರುದ್ದೀನ್ ಮಷಾಯಿಕ್, ಸಫ್ವಾನ್ ಅರ್ಮಾರ್‍, ಅನಮ್ ಆಲಾ ಎಂ.ಟಿ,  ಮುಂತಾದವರು ಉಪಸ್ತಿತರಿದ್ದರು.ಭಟ್ಕಳ: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೂಸೈಟಿ  ಎಚ್.ಆರ್‍.ಎಸ್ ಭಟ್ಕಳ ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಪ್ರಾಕೃತಿಕ ವಿಪತ್ತು ನಿರ್ವಹಣಾ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು. ಥೇರಿ ಮತ್ತು ಪ್ರಾಕ್ಟಿಕಲ್ ಮೂಲಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗೊಳ್ಳಬೇಕು ಎಂಬುದರ ಕುರಿತಂತೆ ತರಬೇತಿಯನ್ನು ನೀಡಲಾಯಿತು.ಮಂಗಳೂರು ಎಚ್.ಆರ್‍.ಎಸ್ ಲೀಡರ್‍ ಅಮೀರ್‍ ಹಾಗೂ ಅವರ ತಂಡ ಎರಡು ದಿನಗಳ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಟ್ಟಡ ಹತ್ತುವುದು, ಅಗ್ನಿಶಮನ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಏನೆಲ್ಲ ಸುರಕ್ಷತೆಗಳನ್ನು ಪಾಲಿಸಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡಬೇಕು ಎಂಬುದುರ ಕುರಿತಂತೆ ಮಾಹಿತಿ ನೀಡಲಾಯಿತು.ಈ ಸಂದರ್ಭದಲ್ಲಿ ಎಚ್.ಆರ್‍.ಎಸ್ ಕಾರ್ಯಚಟುವಟಿಕೆಗಳನ್ನು ವಿವರಿಸಿ ಮತನಾಡಿದ ಮಂಗಳೂರಿನ ಅಮೀರ್‍, ಎಚ್.ಆರ್‍.ಎಸ್ ರಾಜ್ಯಮಟ್ಟದ ಸರ್ಕಾರೇತರ ಸಂಸ್ಥೆಯಾಗಿದ್ದು ಇದು ಪ್ರಕೃತಿ ವಿಪತ್ತು ಮತ್ತು ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ಸಹಾಯ ಮತ್ತು ಪುನರ್ವಸತಿಯನ್ನು ಕಲ್ಪಸಿಕಡಲು ಶ್ರಮಿಸುತ್ತಿದೆ. ಮಾನವೀಯ ಸಹಾಯವನ್ನು ಒದಗಿಸಲು ಇದಕ್ಕೆ ತನ್ನದೆ ಆದ ಸ್ವಯಂಸೇವಕ ತಂಡವಿದ್ದು ಅವರು ನಿಷ್ಠಾವಂತ ಶ್ರದ್ಧಾಳುಗಾಗಿರುವರು. ಇದು ತನ್ನ ಸಮಾಜಸೇವಾ ಚಟುವಟಿಕೆಗಳ ಮೂಲಕ ಮಾನವೀಯ ಸೇವಾ ಸ್ಪೂರ್ತಿನ್ನು ಜಾಗೃತಗೊಳಿಸುವುದರೊಂದಿಗೆ ಸಾಮಾಜಿಕ ಕೆಡುಕಗಳಾದ ಮದ್ಯಪಾನ, ಮಾದಕ ವ್ಯಸನ ಮುಂತಾದವುಗಳ ನಿರ್ಮೂಲನೆಗೂ ನಿರಂತರ ಶ್ರಮಿಸುತ್ತದೆ ಎಂದರು. ಎಚ್.ಆರ್‍.ಎಸ್ ಕಾರ್ಯಕರ್ತರಿಗೆ ಪ್ರಥಮ ಚಿಕಿತ್ಸೆ, ಅಗ್ನಿಶಮನ, ವಿಪತ್ತು ನಿರ್ವಹಣೆಯ ಸೂಕ್ತ ತರಬೇತಿಗಳನ್ನು ನೀಡುತ್ತದೆ ಎಂದ ಅವರು, ಎಚ್.ಆರ್‍.ಎಸ್ ನ ಗುರಿ ಕಾರ್ಯಕರ್ತರ ಅದಮ್ಯ ಉತ್ಸಾಹ ಮತ್ತು ನಿಸ್ವಾರ್ಥ ಸಹಕಾರದಿಂದ ಮಾನವೀಯ ನೆಲೆಯಲ್ಲಿ ಆರೋಗ್ಯ ಶಿಕ್ಷಣ, ತುರ್ತುಸೇವೆಗಳನ್ನು ಒದಗಸಿ ಹಸಿವು ಮುಕ್ತ ಆರೋಗ್ಯಪೂರ್ಣ ನಿರ್ಮಲ ಸಮಾಜದ ನಿರ್ಮಾಣ ಮಾಡುವುದಾಗಿದೆ. ಸಮಾಜದ ದಮಿನತ ವರ್ಗದ ಜನರಿಗೆ ಮೂಲಭೂತ ಸೌಲಭ್ಯಗಳಾದ ಆಹಾರ, ವಸತಿ, ಆರೋಗ್ಯ ಮತ್ತು ಶಿಕ್ಷಣ ಒದಗಿಸುವುದಲ್ಲದೆ ಪ್ರಕೃತಿ ವಿಕೋಪಗಳಾದ ಭೂಕಂಪ, ನೆರೆ, ಸಾಂಕ್ರಾಮಿಕ ರೋಗ ಮತ್ತು ಮಾನವಕೃತ ವಿಪತ್ತುಗಳ ಸಂತೃಸ್ತರಿಗೆ ಸಹಾಯಹಸ್ತ ಒದಗಿಸಿ ಅವರ ಸ್ವಾವಲಂಬನೆಗೆ ಅನುವು ಮಾಡಿಕೊಡುವುದಾಗಿ ಎಂದು ಅವರು ತಿಳಿಸಿದರು..ಈ ಸಂದರ್ಭದಲ್ಲಿ ಮೌಲಾನ ಸೈಯ್ಯದ್ ಝುಬೇರ್‍ ಎಸ್.ಎಂ., ಭಟ್ಕಳದ ಎಚ್.ಆರ್‍.ಎಸ್ ಸಂಚಾಲಕ ರಯೀಸ್ ಆಹ್ಮದ್, ಖಮರುದ್ದೀನ್ ಮಷಾಯಿಕ್, ಸಫ್ವಾನ್ ಅರ್ಮಾರ್‍, ಅನಮ್ ಆಲಾ ಎಂ.ಟಿ,  ಮುಂತಾದವರು ಉಪಸ್ತಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: ಅನಮ್ ಆಲಾ ಎಂ.ಟಿ, ಎಚ್.ಆರ್‍.ಎಸ್ ಲೀಡರ್‍ ಅಮೀರ್‍, ಖಮರುದ್ದೀನ್ ಮಷಾಯಿಕ್, ನೆರೆ, ಪ್ರಕೃತಿ ವಿಕೋಪಗಳಾದ ಭೂಕಂಪ, ಪ್ರಾಕೃತಿಕ ವಿಪತ್ತು ನಿರ್ವಹಣಾ, ಮಾನವಕೃತ ವಿಪತ್ತುಗ, ಸಂಚಾಲಕ ರಯೀಸ್ ಆಹ್ಮದ್, ಸಫ್ವಾನ್ ಅರ್ಮಾರ್‍, ಸಾಂಕ್ರಾಮಿಕ ರೋಗ, ಸಾರ್ವಜನಿಕರ ಪ್ರಾಣ ರಕ್ಷಣೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...